23.6 C
ಪುತ್ತೂರು, ಬೆಳ್ತಂಗಡಿ
May 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ರಂಗಕಲೆಗಳ ಸ್ವರೂಪ ಕಾರ್ಯಕ್ರಮ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ ಉಜಿರೆ ಇಲ್ಲಿ ರಂಗಕಲೆಗಳ ಸ್ವರೂಪ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಶಿಕ್ಷಕ ಕೇವಲ ಶಿಕ್ಷಣ ನೀಡುವ ಶಿಕ್ಷಕನಾಗಬಾರದು, ಬದಲು ಎಲ್ಲಾ ಲಘುತನಗಳನ್ನು ದಾಟಿ ಗುರುವಾಗಬೇಕು. ಮಕ್ಕಳ ಜೀವನದಲ್ಲಿನ ದಾರಿ ನೇರಗೊಳಿಸುವ ಗುರುವು ಆಗಬೇಕು. ಜಗತ್ತಿನ ಗುರುತನಗಳ ಸ್ವೀಕರಿಸುವ ಲಘುತನ ಎಲ್ಲಾ ಶಿಕ್ಷಕರಲ್ಲಿರಬೇಕು ಎಂದು ಓದು, ಬರಹ, ಹಾಡು, ಸುತ್ತಾಟ, ಕಲೆ ಹಾಗೂ ರಂಗಭೂಮಿ ಹೀಗೆ ನಾನಾ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿರುವ ರಂಗಕಲಾವಿದ ನಾದ ಎಂಬ ನಾಮಾಂಕಿತರಾದ ಭಾಸ್ಕರ್ ಮಣಿನಾಲ್ಕೂರು ಮಾತನಾಡುತ್ತಾ ಕಲಿಸುವ ಗುರು ಸಣ್ಣವನಾದರೆ, ಕಲಿಯುವ ಶಿಷ್ಯನು ಸಣ್ಣತನಕ್ಕೆ ಸೀಮಿತನಾಗುತ್ತಾನೆ. ಈ ಜಗತ್ತಿನಲ್ಲಿ ಕಲಿಕೆಯು ಮುಗಿಯುವಂತಹದಲ್ಲ. ಗುರುವಾದವನು ಸೋತ ಮಕ್ಕಳ ಜೊತೆ ನಿಲ್ಲಬೇಕು ಎಂದು ತಮ್ಮ ಸುಮಧುರ ಗಾಯನ ಹಾಗೂ ಎಕ್ತಾರಿಯ ಗಾಯನದ ಮೂಲಕ ತಿಳಿಸಿಕೊಟ್ಟರು.


ಕಾರ್ಯಕ್ರಮದ ಅಧ್ಯಕ್ಷ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಸಲ್ಡಾನ ಮಾತನಾಡಿ ಇತ್ತೀಚಿನ ಕಾಲದಲ್ಲಿ ಗುರುವನ್ನು ಕೇಳಿ ಕಲಿಯುವವರೇ ಹೆಚ್ಚು ಅದರ ಬದಲು ಗುರುವನ್ನು ನೋಡಿ ಕಲಿಯುವ ಹಂತಕ್ಕೆ ಗುರು ಬೆಳೆಯಬೇಕು. ಶಿಕ್ಷಕರು ಕೇವಲ ಆದರ್ಶಗಳನ್ನು ಕಲಿಸುವುದು ಮಾತ್ರವಲ್ಲದೆ ಅದನ್ನು ತಮ್ಮ ಜೀವನದಲ್ಲಿ ಅನುಸರಿಸಬೇಕು ಎಂದರು.


ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ರಾಜಶೇಖರ್ ಹಳೆಮನೆ, ಬಿ.ಎಡ್. ಹಾಗೂ ಡಿ.ಎಡ್. ಕಾಲೇಜಿನ ಉಪನ್ಯಾಸಕ ವೃಂದ ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ದ್ವಿತೀಯ ವರ್ಷದ ಬಿ.ಎಡ್. ಪ್ರಶಿಕ್ಷಣಾರ್ಥಿ ತೇಜಾಕ್ಷಿ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಮದ್ದಡ್ಕ ಸಮೀಪ ನೇರಳಕಟ್ಟೆಯಲ್ಲಿ ಚಿನ್ನಾಭರಣ ಕಳವು ಪ್ರಕರಣ: ಅಂದಾಜು 56 ಗ್ರಾಂ ಚಿನ್ನಾಭರಣ ಕಳವುಗೈದು ಪರಾರಿಯಾದ ಕಳ್ಳರು

Suddi Udaya

ಎಕ್ಸೆಲ್ ಪಿಯು ಕಾಲೇಜಿನಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯ ಜಯಂತಿ ಆಚರಣೆ ಹಾಗೂ ಎಕ್ಸೆಲ್ ಸ್ವಚ್ಛತಾ ಅಭಿಯಾನ

Suddi Udaya

ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ- ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ

Suddi Udaya

ಕುವೆಟ್ಟು: ನೂರಲ್ ಹುದಾ‌ ಜುಮಾ ಮಸೀದಿ ಮದ್ದಡ್ಕ ವತಿಯಿಂದ ಮಾದಕ ದ್ರವ್ಯ‌ ಮುಕ್ತ‌ ಜನಜಾಗೃತಿ ಜಾಥಾ

Suddi Udaya

ನೇಹಾ ಹತ್ಯೆ ಖಂಡಿಸಿ ಪ್ರತಿಭಟಿಸಿದ್ದ ಉಜಿರೆಯ ಎಬಿವಿಪಿ ನಾಯಕರ ಮೇಲೆ ಎಫ್‌ಐಆರ್ ದಾಖಲು

Suddi Udaya

ಬೆಳ್ತಂಗಡಿ : ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya
error: Content is protected !!