April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಶ್ರೀ ಜನಾರ್ದನ ದೇವಸ್ಥಾನವರ್ಷಾವಧಿ ಜಾತ್ರಾ ಮಹೋತ್ಸವ ಆರಂಭ

ಉಜಿರೆ:  ಉತ್ತರಾಯಣ ಪುಣ್ಯಕಾಲದ ಮಕರ ಸಂಕ್ರಮಣ  ಶುಭದಿನ ಜ. 14 ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ  ಚಾಲನೆ ನೀಡಲಾಯಿತು. 

ಮುಂಜಾನೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ  ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ರ  ನೇತೃತ್ವದಲ್ಲಿ ಅರ್ಚಕ ವೇದಮೂರ್ತಿ ಶ್ರೀನಿವಾಸ ಹೊಳ್ಳ ಮತ್ತು ರಾಮಚಂದ್ರ ಹೊಳ್ಳರು  ಪ್ರಾರ್ಥಿಸಿ  ಶುಭಾರಂಭಗೊಳಿಸಿದರು.  ಶಮನ ಕ್ಲಿನಿಕ್ ನ  ಚಕ್ರಪಾಣಿ ಸರಳಾಯರ ಪ್ರಾಯೋಜಕತ್ವದಲ್ಲಿ  ನಡೆಸಲ್ಪಡುವ  ಉಡುಪಿಯ  ಮದ್ವೇಶ ಆಚಾರ್ಯ  ಮಠದ   ಅವರ “ಭಾಗವತ ಪಾತ್ರ ಪ್ರಪಂಚ-ನೀತಿ ಕಥೆಗಳು” ಪ್ರವಚನ ಸಪ್ತಾಹಕ್ಕೆ  ಶರತ್ ಕೃಷ್ಣ ಪಡುವೆಟ್ನಾಯರು   ದೀಪ ಪ್ರಜ್ವಲಿಸಿ ಚಾಲನೆ ನೀಡಿ ,ಸ್ವಾಗತಿಸಿ  ಕ್ಷೇತ್ರದ   ವತಿಯಿಂದ  ಧಾರ್ಮಿಕ ಜ್ಞಾನ ಪ್ರಸಾರಕ್ಕೆ ವಿಶೇಷ ಆದ್ಯತೆ ನೀಡುತ್ತಾ  ಬರುತ್ತಿದ್ದು , ಉತ್ಸವ ಕಾಲದಲ್ಲಿ  ಪುರಾಣ ಪ್ರವಚನ ಸಪ್ತಾಹ   ನಡೆಸಲು  ಯೋಜಿಸಿದ್ದೇವೆ.  ಭಗವದ್ಭಕ್ತರು  ಜ್ಞಾನ ಸತ್ರದಲ್ಲಿ  ಭಾಗವಹಿಸಿ  ಪುಣ್ಯಭಾಜನರಾಗಬೇಕೆಂದರು.                                               

ಪ್ರವಚನಕಾರ ಮದ್ವೇಶ  ಆಚಾರ್ಯ ಮಠದ ಅವರು ಉಜಿರೆ ಕ್ಷೇತ್ರ ಜ್ಞಾನಕ್ಕೆ ಪ್ರಾಧಾನ್ಯತೆ ನೀಡುತ್ತಿದ್ದು ಹರಿವಾಯು ಪ್ರೇರಣೆಯಂತೆ  ಭಾಗವತ ಪಾತ್ರಗಳ ವಿಶೇಷತೆಯನ್ನು   ತಿಳಿಸಲು ಬಯಸುತ್ತೇವೆ. ಉಚ್ಚಭೂತಿಯೆಂದರೆ ಹೇರಳ ಸಂಪತ್ತು ಇದ್ದ ಜಾಗ ಎಂದರ್ಥ.  ಇಲ್ಲಿ   ಘನ ವಿದ್ವಾಂಸರು  ನೆಲೆಯಾಗಿದ್ದು  ಮಧ್ವಾಚಾರ್ಯರ ಜ್ಞಾನವನ್ನು ಪರೀಕ್ಷಿಸಿ ಅವರಲ್ಲಿ ದೋಷ ಹುಡುಕುವ ಪ್ರಯತ್ನ ಮಾಡಿ ಸೋತರು. ಮಧ್ವಾಚಾರ್ಯರು  ತನ್ನ 37 ಗ್ರಂಥಗಳ ಪೈಕಿ  ಇಲ್ಲೇ “ಕರ್ಮ ನಿರ್ಣಯ”ಗ್ರಂಥ  ರಚಿಸಿ ದೇವರಿಗೆ ಸಮರ್ಪಿಸಿದ ಜಾಗ  ಉಜೇರ್ಯ ಮುಂದೆ ಉಜಿರೆ ಹೆಸರಿನಿಂದ ಪ್ರಸಿದ್ಧಿ ಪಡೆಯಿತು. ಉತ್ಸವ ಕಾಲದಲ್ಲಿ ದೇವರು ಸಂತುಷ್ಟನಾಗಿ  ಭಕ್ತರನ್ನು ಅನುಗ್ರಹಿಸುವ ಪರ್ವ ಕಾಲ.  18  ಸಹಸ್ರ ಸ್ತೋತ್ರಗಳನ್ನೊಳಗೊಂಡ   ಭಾಗವತ  ಪುರಾಣದ ಪಾತ್ರಗಳನ್ನು  ಸಾದರಪಡಿಸಲು ಪ್ರಯತ್ನಿಸಲಾಗುವುದು. ಜ 2೦ರವರೆಗೆ ಪ್ರತಿದಿನ ಬೆಳಿಗ್ಗೆ 9.3೦ರಿಂದ 12 ರವರೆಗೆ  ಪ್ರವಚನ ನಡೆಯಲಿದೆ  ಎಂದರು.                                                 

ಪ್ರವಚನ ಸತ್ರದ ಪ್ರಾಯೋಜಕರಾದ ಶ್ರೀಮತಿ ಶಾರದಾ ಮತ್ತು ಚಕ್ರಪಾಣಿ ಸರಳಾಯ,   ದ ಕ. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ!ಎಂ ಪಿ ಶ್ರೀನಾಥ್, ವಿ.ಪ.ಸದಸ್ಯ ಪ್ರತಾಪಸಿಂಹ ನಾಯಕ್  ಮೊದಲಾದವರು ಉಪಸ್ಥಿತರಿದ್ದರು.                                                                       

ಇದೆ ಸಂದರ್ಭದಲ್ಲಿ  ಧರ್ಮಸ್ಥಳದ ಕಮಲಾಕ್ಷ ಗುಡಿಗಾರ್ ಸಾಹಿತ್ಯ ಮತ್ತು ಸಂಗೀತ ನೀಡಿ   ಕೇಶವ ದೇವಾಂಗ  ಬನಶಂಕರಿ  ಅವರು  ಹಾಡಿರುವ   “ಶ್ರೀ ಲಕ್ಷ್ಮಿ ಜನಾರ್ದನ” ಕನ್ನಡ ಭಕ್ತಿ ಗೀತೆಗಳನ್ನು  ಶರತ್ ಕೃಷ್ಣ ಪಡುವೆಟ್ನಾಯರು ಬಿಡುಗಡೆಗೊಳಿಸಿ ಶುಭ ಕೋರಿದರು.                                     

ಧ್ವಜಾರೋಹಣ ಹಾಗು ಭಂಡಾರ ಏರುವುದರೊಂದಿಗೆ  ವರ್ಷಾವಧಿ ಜಾತ್ರೆಗೆ ಸಂಭ್ರಮದ ಚಾಲನೆ ದೊರೆಯಿತು.ಜ 23 ರವರೆಗೆ  ವಿವಿಧ ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು  ನಡೆಯಲಿವೆ.

Related posts

ಡಿ.8 ರಿಂದ ಡಿ.12 ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ

Suddi Udaya

ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿ ಹೊಂದಿರುವ ಅರ್ಹ ಕುಟುಂಬಗಳಿಗೆ ಕೃಷಿಗೆ ಸಂಬಂಧಪಟ್ಟ ಉಪಕರಣ ವಿತರಣೆ

Suddi Udaya

ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಂದಾರು ಗ್ರಾಮ

Suddi Udaya

ಸಿನಿಮಾರಂಗದ ಸೇವೆ : ಜಿ. ಕೃಷ್ಣ ಬೆಳ್ತಂಗಡಿ ಇವರಿಗೆ “ಡಾ. ಲೀಲಾವತಿ ಪ್ರಶಸ್ತಿ”

Suddi Udaya

ಡಿ.4: ಬೆಳ್ತಂಗಡಿಯಲ್ಲಿ ಮಂಜೂಷ ಗ್ಲಾಸ್ & ಪ್ಲೈವುಡ್ಸ್ ಮಳಿಗೆ ಶುಭಾರಂಭ

Suddi Udaya

ಬೆಳ್ತಂಗಡಿ ರೋಟರಿ ಆಯನ್ಸ್ ಕ್ಲಬ್ ವತಿಯಿಂದ ಸರ್ಕಾರಿ ಪ್ರೌಢಶಾಲೆ ನೇಲ್ಯಡ್ಕಕ್ಕೆ ವಿಜ್ಞಾನ ಉಪಕರಣಗಳ ಕೊಡುಗೆ

Suddi Udaya
error: Content is protected !!