23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಹೇಮಾವತಿ ವೀ. ಹೆಗ್ಗಡೆಯವರ ಕನಸನ್ನು ಸಾಕಾರಗೊಳಿಸಿದ ರಂಗಶಿವ ತಂಡ ‘ಮುದ್ದಣನ ಮನೋರಮೆ’ ನಾಟಕ

ಮುದ್ದಣ ಕವಿ ಪೌರಾಣಿಕ ಕಥಾನಕಗಳನ್ನು ಭಾವನಾತ್ಮಕ ದೃಷ್ಟಿಯಿಂದ ನೋಡಿ ನಾಟಕಗಳನ್ನು ಮತ್ತು ಯಕ್ಷಗಾನಗಳನ್ನು ರಚಿಸಿದವರು. ಅವರು ಬದುಕಿದ್ದು ಕೇವಲ 31 ವರ್ಷಗಳಾದರೂ ಅವರು ಬಿಟ್ಟುಹೋದ ಸಾಹಿತ್ಯ ಸಂಪತ್ತು ಅವರನ್ನು ಅಮರರನ್ನಾಗಿಸಿತು. ಇಂತಹ ವ್ಯಕ್ತಿಯೋರ್ವರ ದಾಂಪತ್ಯ ಜೀವನವನ್ನು ಮುಂದಿಟ್ಟುಕೊAಡು ರಚಿಸಲಾದ ಕಲಾಕೃತಿ ‘ಮುದ್ದಣನ ಮನೋರಮೆ’. ಇದು ಧರ್ಮಸ್ಥಳದ ಹೇಮಾವತಿ ವೀ.ಹೆಗ್ಗಡೆಯವರ ನಿಡುಗಾಲದ ಯೋಜನೆ. ಇಂತಹದ್ದೊಂದು ಕೃತಿಯ ಕನಸು ಅವರ ತಲೆಹೊಕ್ಕ 2ವರ್ಷದ ಬಳಿಕ ಉಜಿರೆಯ ವನರಂಗ ಬಯಲು ರಂಗಭೂಮಿಯಲ್ಲಿ ನನಸಾಗಿ ನಾಟಕವು ದೃಶ್ಯ ರೂಪಕವಾಗಿ ಮೈದಳೆಯಿತು.


ನಾಟಕ ಕ್ಷೇತ್ರದಲ್ಲಿ ಈಗಾಗಲೇ ತಮ್ಮ ಛಾಪು ಮೂಡಿಸಿರುವ ಹೇಮಾವತಿ ಹೆಗ್ಗಡೆಯವರ ಕಲಾತಂಡ ‘ರಂಗಶಿವ’ ಮುದ್ದಣ ನಾಟಕವನ್ನು ಯಶಸ್ವಿಯಾಗಿ ಸಾದರಪಡಿಸಿತು. ರಂಗಶಿವದ ದಶಮಾನೋತ್ಸವ ವರ್ಷದ ‘ಮುದ್ದಣನ ಮನೋರಮೆ’ ನಾಟಕ ಗಂಭೀರ ಮತ್ತು ಆಂತರ್ಯವನ್ನು ಕೆದಕುವ ಪ್ರಯೋಗ. ಎಲ್ಲಿ ಎಡವಟ್ಟಾದರೂ ಕಿರಿಕಿರಿ ಎನಿಸಬಹುದು. ಹೀಗಿದ್ದರೂ ಒಟ್ಟಂದದಲ್ಲಿ ಮುದ್ದಣ ನಾಟಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಅವರಿಂದ ಸ್ಪಂದನೆ ಪಡೆಯುವಲ್ಲಿ ಸಫಲವಾಯಿತು. ಹೇಮಾವತಿ ವೀ.ಹೆಗ್ಗಡೆಯವರ ಮಹಿಳಾಪರ ಚಿಂತನೆಗಳು ಮತ್ತೊಮ್ಮೆ ಈ ನಾಟಕದಲ್ಲಿಯೂ ವ್ಯಕ್ತಗೊಂಡವು. ಒಟ್ಟಾರೆಯಾಗಿ ಮುದ್ದಣನ ಕಣ್ಣುಗಳಿಂದ ಕಂಡ ರಾಮಾಶ್ವಮೇಧ ನಾಟಕ, ಹೊಸರಂಗ ಪ್ರಯೋಗದ ಸಾಧ್ಯತೆಗಳನ್ನು ಸಮರ್ಥವಾಗಿ ಸಭಿಕರ ಮುಂದೆ ತಂದು ನಿಲ್ಲಿಸಿದ್ದು ಮಾತ್ರವಲ್ಲದೆ ಪ್ರೇಕ್ಷಕರ ಒಪ್ಪುಗೆಯನ್ನೂ ಪಡೆದುಕೊಂಡಿತು.

Related posts

ಲೋಕಸಭಾ ಚುನಾವಣೆ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಮತದಾನ ಆರಂಭ

Suddi Udaya

ಕಣಿಯೂರು ಶ್ರೀ ಮಹಮ್ಮಾಯಿ ಪುರ್ಸಾದ ತುಳು ಭಕ್ತಿ ಗೀತೆ ಬಿಡುಗಡೆ

Suddi Udaya

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರನ್ನು ಭೇಟಿ ಮಾಡಿದ ಮಾಜಿ ಶಾಸಕ ಕೆ. ವಸಂತ ಬಂಗೇರ

Suddi Udaya

ಬೆಳ್ತಂಗಡಿ ವಕೀಲರ ಸಂಘ, ಯುವ ವಕೀಲರ ವೇದಿಕೆಯ ವತಿಯಿಂದ ಕ್ರಿಸ್ ಮಸ್ ಆಚರಣೆ

Suddi Udaya

ಮಂಗಳೂರು ವಿ.ವಿ. ವಾಲಿಬಾಲ್ ಪಂದ್ಯಾಟ: ಉಜಿರೆ ಎಸ್ .ಡಿ.ಎಂ.ಕಾಲೇಜಿಗೆ ಪ್ರಶಸ್ತಿ

Suddi Udaya

ತಾಲೂಕಿನಾದ್ಯಂತ ಗಾಳಿ ಮಳೆ: ವಿವಿಧ ಕಡೆಗಳಲ್ಲಿ ಹಾನಿ

Suddi Udaya
error: Content is protected !!