23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಭಾರತದ ಪ್ರತಿಷ್ಠಿತ ಸಂಸ್ಥೆಯಾದ ಡಿಆರ್ ಡಿಒ ಆಯೋಜಿಸಿದ ಡೇರ್ ಟು ಡ್ರೀಮ್ 5.0; ಭಾರತದ ಬಿಗ್ಗೆಸ್ಟ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಇನ್ನೋವೇಶನ್ ಸ್ಪರ್ಧೆಯಲ್ಲಿ ಪಟ್ರಮೆಯ ದೀಪಕ್ ಭಾಗಿ

ಬೆಳ್ತಂಗಡಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ತನ್ನ ಆವಿಷ್ಕಾರ ಸ್ಪರ್ಧೆಯ ಐದನೇ ಆವೃತ್ತಿಯನ್ನು ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ರವರು ‘ಡೇರ್ ಟು ಡ್ರೀಮ್ 5.0’ ಪ್ರಾರಂಭಿಸಿದ್ದು, ಪ್ರಧಾನಿ ನರೇಂದ್ರ ಮೋದಿರವರು ನೀಡಿದ ‘ಆತ್ಮನಿರ್ಭರ್ ಭಾರತ್’ ದ ದೃಷ್ಟಿಯನ್ನು ಸಾಕಾರಗೊಳಿಸಲು ದೇಶದಲ್ಲಿ ರಕ್ಷಣಾ ಮತ್ತು ಏರೋಸ್ಪೇಸ್ ತಂತ್ರಜ್ಞಾನಗಳಲ್ಲಿ ನಾವೀನ್ಯತೆಯ ಸ್ಪರ್ಧೆಯಾಗಿದ್ದು, ಸ್ಪರ್ಧೆಗೆ ಪಟ್ರಮೆಯ ದೀಪಕ್ ಎ.ಎಸ್. ರವರು ಜ.17 ರಂದು ಡೇರ್ ಟು ಡ್ರೀಮ್ 5.0′ Problem Vertical ಓಪನ್ ಚಾಲೆಂಜ್: ಯೋಚಿಸಲಾಗದ ಮತ್ತು ಊಹಿಸಲಾಗದದನ್ನು ಅನ್ವೇಷಿಸುವುದು ಎಂಬ ಸಮಸ್ಯೆ ಲಂಬ ದಲ್ಲಿ ನನ್ನ ವಿಶಿಷ್ಟ ಮತ್ತು ಉದಯೋನ್ಮುಖ ರಕ್ಷಣಾ ತಂತ್ರಜ್ಞಾನ ಯೋಜನೆಯನ್ನು ಯಶಸ್ವಿಯಾಗಿ ಸಲ್ಲಿಸಿದ್ದಾರೆ.


ಈ ಬಗ್ಗೆ ಮಾತನಾಡಿದ ದೀಪಕ್ ರವರು ಡೇರ್ ಟು ಡ್ರೀಮ್ 5.0 ಆವಿಷ್ಕಾರ ಸ್ಪರ್ಧೆಗೆ ಭಾಗವಹಿಸುವುದು ನನ್ನ ಮಹತ್ವಕಾಂಕ್ಷೇ ಆಗಿತ್ತು. ದೇಶದ ರಕ್ಷಣಾ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶಿಷ್ಟ ಮತ್ತು ಗಮನರ್ಹವಾಗಿ ದೇಶ ಸೇವೆ ಸಲ್ಲಿಸುವುದು ನನ್ನ ಜೀವನೋದ್ದೇಶದ ದೂರದೃಷ್ಟಿಯಾಗಿದೆ ಎಂದು ತಿಳಿಸಿದರು.

ಇವರು ಪಟ್ರಮೆಯ ಅಶ್ವತಡಿ ನಿವಾಸಿ ಸದಾಶಿವ ಹಾಗೂ ಮೋಹಿನಿ ದಂಪತಿಯ ಪುತ್ರ.

Related posts

ಬಳಂಜ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಳಂಜ- ನಾಲ್ಕೂರು-ತೆಂಕಕಾರಂದೂರು: 36ನೇ ವರ್ಷದ ಆಚರಣಾ ಸಮಿತಿ ಅಧ್ಯಕ್ಷರಾಗಿ ಯುವ ಉದ್ಯಮಿ ರಾಕೇಶ್ ಹೆಗ್ಡೆ ಬಳಂಜ ಆಯ್ಕೆ

Suddi Udaya

ಡಿ.8: ಶಾಸಕ ಹರೀಶ್ ಪೂಂಜರ ನೇತೃತ್ವದಲ್ಲಿ ಇಂದಬೆಟ್ಟು-ನಡ-ಉಜಿರೆ-ಬೆಳಾಲಿನಲ್ಲಿ ಜನಸ್ಪಂದನಾ ಕಾರ್ಯಕ್ರಮ

Suddi Udaya

ಶಿಶಿಲ : ಆಚಾರಿಪಾಲು ನಿವಾಸಿ ಉದ್ಯಮಿ ಸತೀಶ ಗೋಖಲೆ ಕೊಲ್ಕತ್ತದಲ್ಲಿ ನಿಧನ

Suddi Udaya

ಆಟೋ ಚಾಲಕ ಯಶೋಧರ ಗೌಡ ಅಸೌಖ್ಯದಿಂದ ನಿಧನ

Suddi Udaya

ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷರಾಗಿ ಸದಾನಂದ ಸಾಲಿಯಾನ್ ಬಳಂಜ ಆಯ್ಕೆ

Suddi Udaya

ಕಕ್ಕಿಂಜೆ: ರವಿ ಗುರುಸ್ವಾಮಿ ಅಸೌಖ್ಯದಿಂದ ನಿಧನ

Suddi Udaya
error: Content is protected !!