29.1 C
ಪುತ್ತೂರು, ಬೆಳ್ತಂಗಡಿ
June 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಳದಂಗಡಿಯಲ್ಲಿ ಲೋಕೋಪಯೋಗಿ ಇಲಾಖೆಯವರು ಅಳವಡಿಸಿದ ನಾಮಫಲಕದಲ್ಲಿ ಗೊಂದಲ

ಬೆಳ್ತಂಗಡಿ: ಸ್ಥಳೀಯ ಸ್ಥಳಗಳ ಸರಿಯಾದ ಮಾಹಿತಿ ಇಲ್ಲದಿದ್ದರೆ ಏನೆಲ್ಲಾ ಯಡವಟ್ಟುಗಳು ಆಗುತ್ತವೆ ಎಂಬುದಕ್ಕೆ ಲೋಕೋಪಯೋಗಿ ಇಲಾಖೆಯವರು ಅಳದಂಗಡಿಯಲ್ಲಿ ಹಾಕಿರುವ ನಾಮಫಲಕವೇ ಸಾಕ್ಷಿ.


ಇಲಾಖೆಯು ಗುರುವಾಯನಕೆರೆ- ನಾರಾವಿ- ಕಾರ್ಕಳ ರಾಜ್ಯಹೆದ್ದಾರಿಯಲ್ಲಿ ಅಲ್ಲಲ್ಲಿ ಊರುಗಳ ಹೆಸರಿರುವ ನಾಮಫಲಕಗಳನ್ನು ಅಳವಡಿಸಿದೆ. ಇವುಗಳಲ್ಲಿ ಅಳದಂಗಡಿಯಲ್ಲಿ ದೈವಸ್ಥಾನದ ಪಕ್ಕದಲ್ಲಿ ಹಾಕಿರುವ ಫಲಕದಲ್ಲಿ ದೈವದ ಹೆಸರು ಅಪಭ್ರಂಶಗೊಂಡಿದೆ. ಶ್ರೀಸತ್ಯದೇವತೆ ದೈವಸ್ಥಾನ ಅಳದಂಗಡಿ ಎಂದು ಬರೆಯುವ ಬದಲು ” ಸತ್ಯದೇವಾತ ದೇವಸ್ಥಾನ ಅಳದಂಗದಿ ” ಎಂದು ಬರೆಯಲಾಗಿದೆ. ಸತ್ಯದೇವತೆ ಇರುವಲ್ಲಿ ಸತ್ಯದೇವಾತ; ದೈವಸ್ಥಾನ ಇರಬೇಕಾದಲ್ಲಿ ದೇವಸ್ಥಾನ; ಅಳದಂಗಡಿಯ ಬದಲಾಗಿ ಅಳದಂಗದಿ ಆಗಿದೆ.


ಫಲಕ ಹೀಗೇಯೇ ಕೆಲಕಾಲ ಇದ್ದರೆ ಅದರಲ್ಲಿ ಇರುವ ಹೆಸರೇ ಚಾಲ್ತಿಯಲ್ಲಿ ಬಂದರೆ ಅಚ್ಚರಿಯಿಲ್ಲ. ಇನ್ನಾದರೂ ಇಲಾಖೆಯವರು ಸರಿಯಾದ ಫಲಕ ಅಳವಡಿಸುವರೇ ಕಾದು ನೋಡಬೇಕಾಗಿದೆ.

Related posts

ಕೊಕ್ಕಡ: ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟ ಗಾಯಕ್ಕೊಳಗಾಗಿದ್ದ ನೇಪಾಳಿ ಮಹಿಳೆ ಸಾವು

Suddi Udaya

ಪುದುವೆಟ್ಟು ಗ್ರಾಮ ಸಭೆ: ಕಂದಾಯ ಇಲಾಖೆಯ ಅಧಿಕಾರಿಗಳ ಗೈರು, ಗ್ರಾಮಸ್ಥರು ಅಕ್ರೋಶ

Suddi Udaya

ರಾಷ್ಟ್ರೀಯ ಟಾರ್ಗೆಟ್ ಬಾಲ್ ಫೆಡರೇಶನ್ ಕಪ್ ಪಂದ್ಯಾಟ: ರಾಷ್ಟ್ರಮಟ್ಟಕ್ಕೆ ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜಿನ ವಿದ್ಯಾರ್ಥಿ ಸಿದ್ದಾರ್ಥ್ ಎಂ. ಸಿ ಆಯ್ಕೆ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ

Suddi Udaya

ಭಾರೀ ಮಳೆಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನೇತ್ರಾವತಿ ನದಿ: ಪಜಿರಡ್ಕದಲ್ಲಿ ಗಂಗಾಪೂಜೆ

Suddi Udaya

ಬೆಳ್ತಂಗಡಿ: ಹೋಲಿ ರಿಡೀಮರ್ ಆಂ.ಮಾ. ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya
error: Content is protected !!