September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಳದಂಗಡಿಯಲ್ಲಿ ಲೋಕೋಪಯೋಗಿ ಇಲಾಖೆಯವರು ಅಳವಡಿಸಿದ ನಾಮಫಲಕದಲ್ಲಿ ಗೊಂದಲ

ಬೆಳ್ತಂಗಡಿ: ಸ್ಥಳೀಯ ಸ್ಥಳಗಳ ಸರಿಯಾದ ಮಾಹಿತಿ ಇಲ್ಲದಿದ್ದರೆ ಏನೆಲ್ಲಾ ಯಡವಟ್ಟುಗಳು ಆಗುತ್ತವೆ ಎಂಬುದಕ್ಕೆ ಲೋಕೋಪಯೋಗಿ ಇಲಾಖೆಯವರು ಅಳದಂಗಡಿಯಲ್ಲಿ ಹಾಕಿರುವ ನಾಮಫಲಕವೇ ಸಾಕ್ಷಿ.


ಇಲಾಖೆಯು ಗುರುವಾಯನಕೆರೆ- ನಾರಾವಿ- ಕಾರ್ಕಳ ರಾಜ್ಯಹೆದ್ದಾರಿಯಲ್ಲಿ ಅಲ್ಲಲ್ಲಿ ಊರುಗಳ ಹೆಸರಿರುವ ನಾಮಫಲಕಗಳನ್ನು ಅಳವಡಿಸಿದೆ. ಇವುಗಳಲ್ಲಿ ಅಳದಂಗಡಿಯಲ್ಲಿ ದೈವಸ್ಥಾನದ ಪಕ್ಕದಲ್ಲಿ ಹಾಕಿರುವ ಫಲಕದಲ್ಲಿ ದೈವದ ಹೆಸರು ಅಪಭ್ರಂಶಗೊಂಡಿದೆ. ಶ್ರೀಸತ್ಯದೇವತೆ ದೈವಸ್ಥಾನ ಅಳದಂಗಡಿ ಎಂದು ಬರೆಯುವ ಬದಲು ” ಸತ್ಯದೇವಾತ ದೇವಸ್ಥಾನ ಅಳದಂಗದಿ ” ಎಂದು ಬರೆಯಲಾಗಿದೆ. ಸತ್ಯದೇವತೆ ಇರುವಲ್ಲಿ ಸತ್ಯದೇವಾತ; ದೈವಸ್ಥಾನ ಇರಬೇಕಾದಲ್ಲಿ ದೇವಸ್ಥಾನ; ಅಳದಂಗಡಿಯ ಬದಲಾಗಿ ಅಳದಂಗದಿ ಆಗಿದೆ.


ಫಲಕ ಹೀಗೇಯೇ ಕೆಲಕಾಲ ಇದ್ದರೆ ಅದರಲ್ಲಿ ಇರುವ ಹೆಸರೇ ಚಾಲ್ತಿಯಲ್ಲಿ ಬಂದರೆ ಅಚ್ಚರಿಯಿಲ್ಲ. ಇನ್ನಾದರೂ ಇಲಾಖೆಯವರು ಸರಿಯಾದ ಫಲಕ ಅಳವಡಿಸುವರೇ ಕಾದು ನೋಡಬೇಕಾಗಿದೆ.

Related posts

ನಾಳೆ (ಮೇ 2) : ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ

Suddi Udaya

ಹಳೆಪೇಟೆಯಿಂದ ಕುತ್ರೋಟ್ಟು ರಸ್ತೆ ದುರಸ್ತಿಪಡಿಸುವ ಬಗ್ಗೆ ಕುಂಟಿನಿ ಕಾಂಗ್ರೆಸ್ ಬೂತ್ ಸಮಿತಿಯಿಂದ ಮನವಿ

Suddi Udaya

ಅ.29: ಉಜಿರೆಯಿಂದ ಧರ್ಮಸ್ಥಳಕ್ಕೆ ಧರ್ಮಸಂರಕ್ಷಣ ಪಾದಯಾತ್ರೆ:  ವಾಹನಗಳಿಗೆ ರಸ್ತೆ ಬದಲಾವಣೆ

Suddi Udaya

ಅಂತರ್ ಕಾಲೇಜು ಮಟ್ಟದ ಸ್ಪರ್ಧೆ: ವಿದ್ವತ್ ಪಿ.ಯು ಕಾಲೇಜಿನ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳ ಅಮೋಘ ಸಾಧನೆ

Suddi Udaya

ಗುರುವಾಯನಕೆರೆ: ಇನೋವಾ ಕಾರಿನಲ್ಲಿ ಹಿಂಸಾತ್ಮಕವಾಗಿ ಗೋವುಗಳ ಸಾಗಾಟ: ಊರವರು ಹಾಗೂ ಪೋಲಿಸರಿಂದ ತಡೆಹಿಡಿದು ಚಾಲಕನ ಸೆರೆ, ಇಬ್ಬರು ಆರೋಪಿಗಳು ಪರಾರಿ:

Suddi Udaya

ಮರೋಡಿ:ಹರಂಬೆಟ್ಟು ಗುತ್ತು ಮನೆಯಲ್ಲಿ “ಧರ್ಮ ನೇಮೋತ್ಸವ”

Suddi Udaya
error: Content is protected !!