September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಚ್ಚಿನ ಮಾರಿಗುಡಿ ಶ್ರೀ ಮಾರಿಕಾಂಬ ದೇವಿ ಸನ್ನಿಧಿಯಲ್ಲಿ ವರ್ಧಂತ್ಯುತ್ಸವ ಹಾಗೂ ವಾರ್ಷಿಕ ದೊಂಪದ ಬಲಿ ನೇಮೋತ್ಸವ

ಮಡಂತ್ಯಾರು : ಮಚ್ಚಿನ ಶ್ರೀ ಮಾರಿಕಾಂಬ ದೇವಿ ಸನ್ನಿಧಿ ಮಾರಿಗುಡಿ ಪಾರೆಂಕಿ ಸಪ್ತಮದಶ ಪ್ರತಿಷ್ಠ ವರ್ಧಂತ್ಯುತ್ಸವ ವಾರ್ಷಿಕ ದೊಂಪದ ಬಲಿ ನೇಮೋತ್ಸವ ಜ. 28 ಜರಗಿತು.

ಬ್ರಹ್ಮಶ್ರೀ ಶಿವಪ್ರಸಾದ್ ತಂತ್ರಿ ಟಿವಿ ಶ್ರೀಧರರಾವ್ ಪ್ರಧಾನ ಅರ್ಚಕರು ಇವರ ಪುರೋಹಿತದೊಂದಿಗೆ ಸಾಮೂಹಿಕ ದೇವತಾ ಪ್ರಾರ್ಥನೆಯೊಂದಿಗೆ ತೋರಣ ಮುಹೂರ್ತ ಕಲಶ ಪ್ರತಿಷ್ಠೆ ನವಕ ಕಳಶಾಅಭಿಷೇಕ ಮಧ್ಯಾಹ್ನ ವಿಶೇಷ ಪೂಜೆ ಅನ್ನಸಂತರ್ಪಣೆ ರಾತ್ರಿ ಮೂಡಾಯೂರು ಗುತ್ತಿನಿಂದ ಗ್ರಾಮದೈವ ಕೊಡಮನಿತ್ತಾಯ ಮತ್ತು ಇತರ ಪರಿವಾರದ ದೈವಗಳ ಬಂಡಾರ ಆಗಮಿಸಿ ನೇಮೋತ್ಸವ ನಡೆಯಲಿದೆ.

ಮಾರಿಕಾಂಬ ದೇವಿಗೆ ವಿಶೇಷ ದೀಪಲಂಕಾರ ಗದ್ದಿಗೆ ಪೂಜೆ ದರ್ಶನ. ಪ್ರಸಾದ ವಿತರಣೆ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಯಕ್ಷಗಾನ ತಾಳ ಮದ್ದಲೆ ವಾಲಿಮೋಕ್ಷ ನಡೆಯಲಿದೆ. ಕೆ ರತ್ನರಾಜ ಪಡಿವಾಳ್ ಮತ್ತು ಕೆ ರಾಜರತ್ನ ಪಡಿವಾಳ್ ಆಡಳಿತ ಮೊಕ್ತೇಶರರು ಡಾ. ಕೆ. ಯಸ್ ಬಲ್ಲಾಳ್, ಕೋಶಾಧಿಕಾರಿ ಬಾಲಚಂದ್ರ ಹೆಗ್ಡೆ, ಅಧ್ಯಕ್ಷರು ವಿಠಲ್ ಶೆಟ್ಟಿ ಮುಡಯೂರು, ಗೌರವಾಧ್ಯಕ್ಷರು ಜಯಂತಿ ಹಾರಬೆ, ಕಿಶೋರ್ ಕುಮಾರ್ ಶೆಟ್ಟಿ, ಹೆಚ್ ಕಾಂತಪ್ಪ ಗೌಡ ಹಾಗೂ ಊರ ಪರಊರ ಭಕ್ತಾದಿಗಳು ಉಪಸ್ಥಿತರಿದ್ದರು.

Related posts

ಸೇವಾಭಾರತಿಯಿಂದ ಶಾಲಾ ಮಕ್ಕಳಿಗೆ ಕಿಟ್ ವಿತರಣೆ

Suddi Udaya

ಗುರುವಾಯನಕೆರೆ: ಶಕ್ತಿನಗರ ನಿವಾಸಿ ಅಬ್ದುಲ್ ರಝಾಕ್ ಹೃದಯಾಘಾತದಿಂದ ನಿಧನ

Suddi Udaya

ಬಿಯರ್ ಬಾಟಲಿಯಿಂದ ಇರಿದು ಚಿಕ್ಕಪ್ಪನನ್ನೇ ಕೊಲೆಗೈದ ಯುವಕ

Suddi Udaya

ಅರುವ ನಮ ಮಾತೆರ್ಲ ಒಂಜೇ ಕಲಾ ತಂಡದ ಪದಾಧಿಕಾರಿಗಳ ಆಯ್ಕೆ

Suddi Udaya

ಕಣಿಯೂರು ವಲಯದ ಇಳಂತಿಲ ಮತ್ತು ಅಂಡೆತ್ತಡ್ಕ ಒಕ್ಕೂಟದ ಪದಗ್ರಹಣ ಸಮಾರಂಭ

Suddi Udaya

ಮೇ. 16 : ತುರ್ತು ಕಾಮಗಾರಿ ಪ್ರಯುಕ್ತ ನಾನಾ ಕಡೆಗಳಲ್ಲಿ ವಿದ್ಯುತ್ ಕಡಿತ

Suddi Udaya
error: Content is protected !!