September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಚ್ಚಿನ ಮಾರಿಗುಡಿ ಶ್ರೀ ಮಾರಿಕಾಂಬ ದೇವಿ ಸನ್ನಿಧಿಯಲ್ಲಿ ವರ್ಧಂತ್ಯುತ್ಸವ ಹಾಗೂ ವಾರ್ಷಿಕ ದೊಂಪದ ಬಲಿ ನೇಮೋತ್ಸವ

ಮಡಂತ್ಯಾರು : ಮಚ್ಚಿನ ಶ್ರೀ ಮಾರಿಕಾಂಬ ದೇವಿ ಸನ್ನಿಧಿ ಮಾರಿಗುಡಿ ಪಾರೆಂಕಿ ಸಪ್ತಮದಶ ಪ್ರತಿಷ್ಠ ವರ್ಧಂತ್ಯುತ್ಸವ ವಾರ್ಷಿಕ ದೊಂಪದ ಬಲಿ ನೇಮೋತ್ಸವ ಜ. 28 ಜರಗಿತು.

ಬ್ರಹ್ಮಶ್ರೀ ಶಿವಪ್ರಸಾದ್ ತಂತ್ರಿ ಟಿವಿ ಶ್ರೀಧರರಾವ್ ಪ್ರಧಾನ ಅರ್ಚಕರು ಇವರ ಪುರೋಹಿತದೊಂದಿಗೆ ಸಾಮೂಹಿಕ ದೇವತಾ ಪ್ರಾರ್ಥನೆಯೊಂದಿಗೆ ತೋರಣ ಮುಹೂರ್ತ ಕಲಶ ಪ್ರತಿಷ್ಠೆ ನವಕ ಕಳಶಾಅಭಿಷೇಕ ಮಧ್ಯಾಹ್ನ ವಿಶೇಷ ಪೂಜೆ ಅನ್ನಸಂತರ್ಪಣೆ ರಾತ್ರಿ ಮೂಡಾಯೂರು ಗುತ್ತಿನಿಂದ ಗ್ರಾಮದೈವ ಕೊಡಮನಿತ್ತಾಯ ಮತ್ತು ಇತರ ಪರಿವಾರದ ದೈವಗಳ ಬಂಡಾರ ಆಗಮಿಸಿ ನೇಮೋತ್ಸವ ನಡೆಯಲಿದೆ.

ಮಾರಿಕಾಂಬ ದೇವಿಗೆ ವಿಶೇಷ ದೀಪಲಂಕಾರ ಗದ್ದಿಗೆ ಪೂಜೆ ದರ್ಶನ. ಪ್ರಸಾದ ವಿತರಣೆ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಯಕ್ಷಗಾನ ತಾಳ ಮದ್ದಲೆ ವಾಲಿಮೋಕ್ಷ ನಡೆಯಲಿದೆ. ಕೆ ರತ್ನರಾಜ ಪಡಿವಾಳ್ ಮತ್ತು ಕೆ ರಾಜರತ್ನ ಪಡಿವಾಳ್ ಆಡಳಿತ ಮೊಕ್ತೇಶರರು ಡಾ. ಕೆ. ಯಸ್ ಬಲ್ಲಾಳ್, ಕೋಶಾಧಿಕಾರಿ ಬಾಲಚಂದ್ರ ಹೆಗ್ಡೆ, ಅಧ್ಯಕ್ಷರು ವಿಠಲ್ ಶೆಟ್ಟಿ ಮುಡಯೂರು, ಗೌರವಾಧ್ಯಕ್ಷರು ಜಯಂತಿ ಹಾರಬೆ, ಕಿಶೋರ್ ಕುಮಾರ್ ಶೆಟ್ಟಿ, ಹೆಚ್ ಕಾಂತಪ್ಪ ಗೌಡ ಹಾಗೂ ಊರ ಪರಊರ ಭಕ್ತಾದಿಗಳು ಉಪಸ್ಥಿತರಿದ್ದರು.

Related posts

ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ್ಯ ವೃತ: ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಭೇಟಿ

Suddi Udaya

ಸರ್ವೋದಯ ಪಕ್ಷದಿಂದ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು :ಆದಿತ್ಯ ನಾರಾಯಣ್

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲಾ ಮಂತ್ರಿಮಂಡಲ ರಚನೆ

Suddi Udaya

ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿ ಅಂಕ ಹಾಗೂ ರಾಜ್ಯಕ್ಕೆ 5ನೇ ಸ್ಥಾನ

Suddi Udaya

ಗುರುವಾಯನಕೆರೆ: ನವರಾತ್ರಿ, ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀ ಶಿವಂ ಟೆಕ್ಸ್‌ಟೈಲ್ಸ್ & ರೆಡಿಮೇಡ್ಸ್‌ನಲ್ಲಿ ಡಿಸ್ಕೌಂಟ್ ಆಫರ್

Suddi Udaya

ಕಾಶಿಪಟ್ಣ ನಿವಾಸಿ ರವೀಂದ್ರ ಆಚಾರ್ಯ ನಾಪತ್ತೆ

Suddi Udaya
error: Content is protected !!