31.2 C
ಪುತ್ತೂರು, ಬೆಳ್ತಂಗಡಿ
April 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವೇಣೂರು: ಶಿಕ್ಷಣ ಮಾರ್ಗದರ್ಶನ – ಡಾ. ಆಳ್ವರಿಗೆ ನಾಗರೀಕ‌ ಸನ್ಮಾನ

ವೇಣೂರು: ಎಸ್.ಎಸ್.ಎಲ್.ಸಿ ಎಂಬುದು ಶಿಕ್ಷಣದ ಪ್ರಮುಖ. ಹಂತ. ಪಿ.ಯು.ಸಿ ಶಿಕ್ಷಣದ ಹಂತದಲ್ಲಿ ಬರುವ ಬಹು ಬಗೆಯ ಸ್ಪರ್ಧಾತ್ಮಕ. ಪರೀಕ್ಷೆಗಳ. ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗೆ ಸರಿಯಾದ ಮಾಹಿತಿ ಅಗತ್ಯ. ಪಿಯುಸಿಯನ್ನು ಪೂರೈಸುವುದಷ್ಟೆ ಧ್ಯೇಯವಲ್ಲ. ಸ್ಪರ್ಧಾತ್ಮಕ‌ ಪರೀಕ್ಷೆಗಳನ್ಬು ಸಮರ್ಥವಾಗಿ ಎದರಿಸಿ ಭವಿಷ್ಯ ರೂಪಿಸುವಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸೋಲಬಾರದು. ಸಕಾಲದಲ್ಲಿ ಮಾಡುವ ಸರಿಯಾದ ನಿರ್ಧಾರದಲ್ಲಿ ನಮ್ಮ ಯಶಸ್ಸು ನಿಂತಿದೆ ಎಂದು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಡಾ.ಎಂ.ಮೋಹನ. ಆಳ್ವ ನುಡಿದರು.

ಅವರು ವೇಣೂರಿನ ಬಾಹುಬಲಿ ಸಮುದಾಯ ಭವನದಲ್ಲಿ ನಡೆದ ಪರೀಕ್ಷೆ ಶಿಕ್ಷಣ ಮಾರ್ಗದರ್ಶನದಲ್ಲಿ ಮಾತಾಡುತ್ತಿದ್ದರು. ವಿದ್ಯಾರ್ಥಿಗಳ. ದೈಹಿಕ ಮತ್ತು ಮಾನಸಿಕ ಕ್ಷಮತೆಯೂ ಬಹುಮುಖ್ಯ ಅಂಶ ಕಲೆ , ವಾಣಿಜ್ಯ ಮತ್ತು ವಿಜ್ಞಾನ ಎಂಬ ಮೂರು ಪ್ರಮುಖ ಧಾರೆಗಳಲ್ಲಿ ಗುರುತಿಸುವ ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳ ಬುದ್ದಿಮತ್ತೆ ಮತ್ತು ಆಸಕ್ತಿಯನುಸಾರ ವಿಪುಲ ಅವಕಾಶಗಳ ಹೆಬ್ಬಾಗಿಲು” ಎಂದರು.

ವೇದಿಕೆಯಲ್ಲಿ ಗಣ್ಯರಾದ ಶಿವರಾಮ ಹೆಗ್ಡೆ, ಭಾಸ್ಕರ ಪೈ, ಜಗದೀಶ ನಾಯಕ್, ಜಯರಾಮ ಶೆಟ್ಟಿ, ಹರೀಶ್ ಕುಮಾರ್, ಜಗದೀಶ್ಚಂದ್ರ.ಡಿಕೆ, ಎಲ್.ಜೆ ಪೆರ್ನಾಂಡೀಸ್, ಡಾ.ಸಂತೋಷ್ ರೇಗೊ, ಡಾ. ಜಗದೀಶ್ ಚೌಟ, ಡಾ. ಶಾಂತಿ ಪ್ರಸಾದ್ ಹೆಗ್ಡೆ,ಸುಂದರ ಹೆಗ್ಡೆ, ಎಚ್ ಮಹಮ್ಮದ್, ಮಲ್ಲಿಕಾ ಕಾಶಿನಾಥ್ ಹೆಗ್ಡೆ,ಸುಭಾಷಿನಿ , ವಿಜಯ ಗೌಡ ಉಪಸ್ಥಿತರಿದ್ದರು.

ಡಾ.ಮೋಹನ ಆಳ್ವ ಅವರನ್ನು‌‌ ನಾಗರೀಕರ ಪರವಾಗಿ ಸನ್ಮಾನಿಸಲಾಯಿತು.

ಪ್ರವೀಣ್ ಕುಮಾರ್ ಇಂದ್ರ ಸ್ವಾಗತಿಸಿದರು. ಗುಣಪ್ರಸಾದ್ ಕಾರಂದೂರು ವಂದಿಸಿದರು. ಆಳ್ವಾಸ್ ಕಾಲೇಜಿನ. ಕನ್ನಡ ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.

Related posts

ಸಾಮಾಜಿಕ ಜಾಲಾತಾಣದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ವಿರುದ್ಧ ನಿಂದನಾತ್ಮಕ ಹೇಳಿಕೆ ಪ್ರಸಾರ ಆರೋಪ : ಖಾಸಗಿ ವೆಬ್ ನ್ಯೂಸ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

Suddi Udaya

ಬೆಳ್ತಂಗಡಿ: ನಗರ ಬ್ಲಾಕ್ ಕಾಂಗ್ರೆಸ್‌ನ ವೀಕ್ಷಕರಾಗಿ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್. ಮಹಮ್ಮದ್ ಅಲಿ ನೇಮಕ

Suddi Udaya

ಕುಣಿತ ಭಜನೆಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಆಗ್ರಹಿಸಿ ಭಜಕರ ಬೃಹತ್ ಸಮಾವೇಶ: ಬೆಳ್ತಂಗಡಿ ಸಂತೆಕಟ್ಟೆ ಅಯ್ಯಪ್ಪ ದೇವಸ್ಥಾನದ ಬಳಿಯಿಂದ ಖಂಡನಾ ಮೆರವಣಿಗೆ

Suddi Udaya

ಉಜಿರೆ 45ನೇ ವರ್ಷದ ಶಾರದಾ ಪೂಜಾ ಸಮಿತಿ ನೂತನ ಸಮಿತಿ ರಚನೆ

Suddi Udaya

ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರು ಮತದಾನ ಕೇಂದ್ರಗಳಿಗೆ ಭೇಟಿ

Suddi Udaya

ಮಾ.14-19: ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರೋತ್ಸವ

Suddi Udaya
error: Content is protected !!