34.9 C
ಪುತ್ತೂರು, ಬೆಳ್ತಂಗಡಿ
March 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಚ್ಚಿನ ಗ್ರಾಮದ ಪೇಟೆಯ ಶೌಚಾಲಯದ ಆದೋಗತಿ.. ಉಪಯೋಗಕ್ಕಿಲ್ಲದ ಕಟ್ಟಡ-ತುಕ್ಕು ಹಿಡಿದ ಬಾಗಿಲು…

ಮಚ್ಚಿನ: ಮಚ್ಚಿನ ಗ್ರಾಮಕ್ಕೆ ಇಲ್ಲವೇ ಶೌಚಾಲಯದ ಭಾಗ್ಯ.. ಈ ಗ್ರಾಮದಲ್ಲಿ ದೇವಸ್ಥಾನ, ಶಾಲೆ, ಬ್ಯಾಂಕುಗಳು, ಆರೋಗ್ಯ ಕೇಂದ್ರ ಇತರೆ ಎಲ್ಲ ಮೂಲಭೂತ ಸೌಕರ್ಯ ಈ ಗ್ರಾಮದಲ್ಲಿ ಇದ್ದರೂ, ಜನರಿಗೆ ಸಾರ್ವಜನಿಕ ಶೌಚಾಲಯ, ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆ ಮಾತ್ರ ಈ ಗ್ರಾಮದ ಜನರ ಪಾಲಿಗಿಲ್ಲದಂತಾಗಿದೆ.

ನಿರ್ಮಲ ಗ್ರಾಮ ಪುರಸ್ಕೃತಗೊಂಡ ಮಚ್ಚಿನ ಗ್ರಾಮದಲ್ಲಿ ಮನೆಗೊಂದು ಶೌಚಾಲಯ ಇದೆ. ಆದರೆ ಗ್ರಾಮಕ್ಕೊಂದು ಶೌಚಾಲಯ ಇದ್ದರೂ, ಇಲ್ಲದಂತಿರುವ ಸ್ಥಿತಿಯಾಗಿದೆ. ಮಚ್ಚಿನ ಹೃದಯ ಭಾಗದಲ್ಲಿ ಬಹುದೊಡ್ಡ ಶೌಚಾಲಯದ ಕಟ್ಟಡವಿದ್ದರೂ ಉಪಯೋಗಕ್ಕಿಲ್ಲದೆ ನಾರುತ್ತಿದೆ. ಗಿಡಗಂಟಿ ಪೊದೆಗಳಿಂದ ಮುತ್ತಿಹೋಗಿವೆ. ಸಾರಾಯಿ ಬಾಟಲಿಗಳ ರಾಶಿ, ರಾಶಿ ತಾಣವಾಗಿದೆ. ಬಾಗಿಲು ತುಕ್ಕು ಹಿಡಿದು ಹೋಗಿವೆ. ಸರಿಯಾದ ನೀರಿನ ವ್ಯವಸ್ಥೆಗಳೇ ಇಲ್ಲದಂತಾಗಿದೆ. ಪುರುಷರು ಶೌಚಾಲಯಕ್ಕೆ ಅಕ್ಕ ಪಕ್ಕ ಓಡಾಡಿದರೆ, ಮಹಿಳೆಯರು ಎಲ್ಲಿಗೆ ಹೋಗಲಿ ಸ್ವಾಮಿ.. ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಈ ಸಮಸ್ಯೆಯ ಬಗ್ಗೆ ಪತ್ರಿಕೆಯಲ್ಲಿ ಹಲವು ಬಾರಿ ಪ್ರಕಟಗೊಂಡರು ಎಚ್ಚೆತ್ತುಕೊಳ್ಳದೆ ಇರುವುದು ಸಾರ್ವಜನಿಕರಿಗೆ ನಿರಾಶೆಯಾಗಿದೆ. ಅಧಿಕಾರಿಗಳೆ, ಜನಪ್ರತಿನಿಧಿಗಳೇ, ಒಂದು ಸಾರಿ ಈ ಶೌಚಾಲಯ ಬಳಿ ಬಂದು ನೋಡಿ.. ಯಾಕೆ ನಿರ್ಲಕ್ಷ್ಯ… ಸಾರ್ವಜನಿಕರು, ಮಹಿಳೆಯರು, ಆಟೋ ಚಾಲಕರು, ಶೌಚಾಲಯಕ್ಕಾಗಿ ಪೇಟೆ ಬದಿಯಲ್ಲಿ ಇರುವ ಮನೆಗಳಿಗೆ ತೆರಳಿ ಬೇಡುವಂತ ಸ್ಥಿತಿ ನಿರ್ಮಾಣಗೊಂಡಿದೆ.

ಪೇಟೆಯಲ್ಲಿ ಹೆಸರಿಗೊಂದು ಶೌಚಾಲಯ ಕಟ್ಟಡ ಇದೆ ಆದರೆ ಜನರಿಗೆ ಉಪಯೋಗಕ್ಕಿಲ್ಲ, ಈ ಕಟ್ಟಡ ಇದ್ದರೇನು ಇಲ್ಲದಿದ್ದರೇನು ಎನ್ನುತ್ತಾರೆ ಜನರು. ಸಾರ್ವಜನಿಕರಿಗೆ ಕುಡಿಯಲು ನೀರು ಇಲ್ಲ ಹಲವಾರು ಜನರು ಓಡಾಡುವ ಮಚ್ಚಿನ ಪೇಟೆಯಲ್ಲಿ ಇನ್ನಾದರೂ ಒಂದು ಉತ್ತಮ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಈ ಗ್ರಾಮದ ಜನರು ಉಪಯೋಗಿಸುವಂತಾಗಲಿ ಶೌಚಾಲಯದ ನಿರ್ವಹಣೆಗೆ ಜನ ನೇಮಕಗೊಳಿಸಿ, ಜನರಿಗೆ ಒಂದು ಸುಂದರ ಶೌಚಾಲಯ ಮರುಬಳಕೆ ಮಾಡುವಂತೆ. ಕುಡಿಯುವ ನೀರಿನ ವ್ಯವಸ್ಥೆ ಈ ಎಲ್ಲ ಮೂಲಭೂತ ಸೌಕರ್ಯಗಳು ಸಿಗುವಂತಾಗಲಿ ಎನ್ನುತ್ತಾರೆ ಸಾರ್ವಜನಿಕರು.


ವರದಿ: ಹರ್ಷ ಬಳ್ಳಮಂಜ

Related posts

ಬೆಳ್ತಂಗಡಿ ತಾಲೂಕು ಜನಜಾಗೃತಿ ವೇದಿಕೆ ಸಭೆ: ವಲಯವಾರು ಸಾಧನಾ ವರದಿ ಪ್ರಸ್ತುತಿ: ವಲಯವಾರು ನವಜೀವನೋತ್ಸವಕ್ಕೆ ಸಂಕಲ್ಪ

Suddi Udaya

ನಾಲ್ಕೂರು: ನಿಟ್ಟಡ್ಕ ಪಲ್ಕೆಯಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯ ರಾಶಿಪೂಜೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಐತಿಹಾಸಿಕ ಕಾರ್ಯಕ್ರಮ: ಸ್ವಸಹಾಯ ಸಂಘಗಳಿಗೆ ರೂ.605 ಕೋಟಿ ಲಾಭಾಂಶ ವಿತರಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

Suddi Udaya

ತಾಲೂಕು ಮಟ್ಟದ ಕರಾಟೆ ಪಂದ್ಯಾಟ: ಪಿಲ್ಯ ಗುಡ್ ಫ್ಯೂಚರ್ ಚೈಲ್ಡ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ನಿಡ್ಲೆ: ಬರೆಂಗಾಯ ವಣಸಾಯದಲ್ಲಿ ವನದುರ್ಗಾರಾಧನೆ, ಬ್ರಾಹ್ಮಣ ಸಂತರ್ಪಣೆ ಹಾಗೂ ವನಭೋಜನ

Suddi Udaya

ಮಚ್ಚಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಾಣಿಜನ್ಯ ರೋಗಗಳ ಬಗ್ಗೆ ಮಾಹಿತಿ ಕಾರ್ಯಾಗಾರ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ