ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಸಾವ್ಯ ನೂಜಿಲೋಡಿ ಎಂಬಲ್ಲಿ ನದಿಯ ಪಕ್ಕದಲ್ಲಿ ದನದ ಕರುವಿನ ಅವಶೇಷ ಪತ್ತೆ: ಕೇರಳ ಮೂಲದ ವ್ಯಕ್ತಿಯ ಮೇಲೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು

ಸಾವ್ಯ : ಇಲ್ಲಿಯ ನೂಜಿಲೋಡಿ ಎಂಬಲ್ಲಿ ನದಿಯ ಪಕ್ಕದಲ್ಲಿ ದನದ ಕರುವನ್ನು ಕೇರಳ ಮೂಲದ ವ್ಯಕ್ತಿಯು ಮಾಂಸಕ್ಕಾಗಿ ಅಥವಾ ಇನ್ನಾವುದೋ ಉದ್ದೇಶದಿಂದ ಹತ್ಯೆ ಮಾಡಿ ದನದ ಅವಶೇಷಗಳು ಹೂತು ಹಾಕಿದ ಬಗ್ಗೆ ಫೆ.4 ರಂದು ವೇಣೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆ ವಿವರ: ಫೆ.05 ರಂದು ಸಾವ್ಯ ಗ್ರಾಮದ ನೂಜಿಲೋಡಿ ಎಂಬಲ್ಲಿ ಆಗ್ನೇಶ್ ಎಂಬವರ ದೂರಿನಂತೆ ನೆರೆ-ಮನೆಯ ವಿಜಯ ಹೆಗ್ಡೆ ಎಂಬವರ ಮನೆಯ ಅಂಗಳದಲ್ಲಿ ನಾಯಿಯೊಂದು ನದಿಬದಿಯಿಂದ ದನದಂತೆ ಕಾಣುವ ಯಾವುದೋ ಪ್ರಾಣಿಯ ಕಾಲನ್ನು ಬಾಯಿಯಲ್ಲಿ ಕಚ್ಚಿ ಎಳೆದುಕೊಂಡು ಬರುತ್ತಿದ್ದುದನ್ನು ಆಗ್ನೇಶ್ ತಂದೆ ಅಮ್ಮಿ ಪೂಜಾರಿ ಎಂಬವರು ನೋಡಿ ವಿಜಯ ಹೆಗ್ಡೆಯರಿಗೆ ಮಾಹಿತಿ ತಿಳಿಸಿ ಬಳಿಕ ವಿಜಯ ಹೆಗ್ಡೆಯವರೊಂದಿಗೆ ನದಿ ಬದಿಗೆ ತೆರಳಿ ನೋಡಲಾಗಿ ಪ್ರಾಣಿಯ ಅವಶೇಷಗಳನ್ನು ಮಣ್ಣಿನಲ್ಲಿ ಹೂತು ಹಾಕಿದ್ದುದನ್ನು ಯಾವುದೋ ಪ್ರಾಣಿಗಳು ಕೆಡವಿರುವಂತೆ ಕಂಡುಬರುತ್ತಿದ್ದು, ನೂಜಿಲೋಡಿ ಮನೆಯಲ್ಲಿ ವಾಸವಿದ್ದ ಕೇರಳ ಮೂಲದ ವ್ಯಕ್ತಿಯ ಬಾಬ್ತು ಗಂಡು ಕರುವು ಈ ದಿನ ತೋಟದಲ್ಲಿ ಕಾಣಿಸದೇ ಇರುವುದರಿಂದ ಸದ್ರಿ ಜಾನುವಾರನ್ನು ಫೆ.04 ರಂದು ಕೇರಳ ಮೂಲದ ವ್ಯಕ್ತಿಯು ಮಾಂಸಕ್ಕಾಗಿ ಅಥವಾ ಇನ್ನಾವುದೋ ಉದ್ದೇಶದಿಂದ ಹತ್ಯೆ ಮಾಡಿ ಅವಶೇಷಗಳನ್ನು ನದಿ ಬದಿಯಲ್ಲಿ ಮಣ್ಣಿನಲ್ಲಿ ಹೂತುಹಾಕಿರುವ ಬಗ್ಗೆ ಶಂಕಿಸಲಾಗಿದೆ.

ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಯುದ್ದ ಖಂಡಿಸಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಸಿಐಟಿಯು ಸೇರಿದಂತೆ ವಿವಿಧ ಸಂಘಟನೆಗಳ‌ ಪ್ರತಿಭಟನೆ

Suddi Udaya

ರೆಖ್ಯಾ: ಮಕ್ಕಳ ಕುಣಿತ ಭಜನಾ ಸಮಾರೋಪದ ಉದ್ಘಾಟನಾ ಸಮಾರಂಭ

Suddi Udaya

ಕುವೆಟ್ಟು: ಶಕ್ತಿನಗರದ ಬಳಿ ಪಾದಾಚಾರಿಗೆ ಬೈಕ್ ಡಿಕ್ಕಿ

Suddi Udaya

ಬೆಳ್ತಂಗಡಿ: ಹುಣ್ಸೆಕಟ್ಟೆ ನಿವಾಸಿ ಆಟೋ ಚಾಲಕ ಆನಂದ ಗೌಡ ಹೃದಯಾಘಾತದಿಂದ ನಿಧನ

Suddi Udaya

ಜಿಲ್ಲಾಮಟ್ಟದ ಕರಾಟೆ ಪಂದ್ಯಾಟ: ಬೆಳ್ತಂಗಡಿ ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya

ಕಡಬದ ಮರ್ದಾಳ ಜಂಕ್ಷನ್ ನಲ್ಲಿ ಅಕ್ರಮ ಗೋಸಾಗಾಟದ ಕಾರು ಡಿಕ್ಕಿ, ಗಂಭೀರ ಗಾಯಗೊಂಡ ವ್ಯಕ್ತಿ ಸಾವು: ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ಪ್ರತಿಭಟನೆ,

Suddi Udaya
error: Content is protected !!