July 23, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ವೇಣೂರು: ಮನೆಯಲ್ಲಿ ಇಟ್ಟಿದ್ದ ರೂ 2.25 ಲಕ್ಷ ನಗದು ಹಣ ಕಳವು

ವೇಣೂರು: ವೇಣೂರು ಕೆಥೋಲಿಕ್‌ ಬ್ಯಾಂಕ್‌ ಲೋನ್‌ ಕಟ್ಟುವ ಸಲುವಾಗಿ ಅಡಿಕೆ ಮಾರಾಟ ಮಾಡಿ ಮನೆಯಲ್ಲಿ ಇಟ್ಟಿದ್ದ ರೂ 2.25 ಲಕ್ಷ ನಗದು ಹಣವು ಕಳವುವಾಗಿರುವ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಫೆ.5 ರಂದು ದೂರು ದಾಖಲಾಗಿದೆ.

ಘಟನೆ ವಿವರ: ಪೆರ್ಮುಡ ನಿವಾಸಿ ಪ್ರಭಾಕರ ರವರು ವೇಣೂರು ಕೆಥೋಲಿಕ್‌ ಬ್ಯಾಂಕ್‌ ಲೋನ್‌ ಕಟ್ಟುವ ಸಲುವಾಗಿ ಅಡಿಕೆ ಮಾರಾಟ ಮಾಡಿ ಬಂದ ರೂ 2.25 ಲಕ್ಷ ನಗದು ಹಣವನ್ನು ತನ್ನ ಮನೆಯಾದ ನಿಟ್ಟಡೆ ಗ್ರಾಮದ ಪೆರ್ಮುಡ ಉದಯಸದನ ಮನೆ ಎಂಬಲ್ಲಿ ಬೆಡ್‌ ರೂಮ್‌ ಒಂದರ ಸೆಲ್ಫ್‌ ನಲ್ಲಿ ಚಾಪೆ ಅಡಿಯಲ್ಲಿ ಇಟ್ಟಿದ್ದರು.ಸದ್ರಿ ಹಣವನ್ನು ಪ್ರಭಾಕರ ರವರು ಫೆ.03 ರಂದು ಬೆಳಿಗ್ಗೆ ನೋಡಿದ್ದರು. ಆದರೆ ಅದೇ ದಿನ ಸಂಜೆ ನೋಡಿದಾಗ ಹಣವು ಕಾಣೆಯಾಗಿರುತ್ತದೆ.


ಪ್ರಭಾಕರ ಅಡಿಕೆ ಮಾರಾಟ ಮಾಡಿರುವ ವಿಚಾರ ನೆರೆಮನೆಯ ವಿಜಯ ಮೋನಿಸ್‌ ಎಂಬಾತನಿಗೆ ತಿಳಿದಿರುತ್ತದೆ. ಫೆ. 03 ರಂದು ವಿಜಯ ಮೋನಿಸ್‌ ಪ್ರಭಾಕರ ರವರ ಮನೆಗೆ ಬಂದು ಹೋಗಿದ್ದರು.
ಪ್ರಭಾಕರ ರವರು ಕಾಣೆಯಾದ ಹಣದ ಬಗ್ಗೆ ಮನೆಯಲ್ಲಿ ಹುಡುಕಾಡಿ ಮನೆಗೆ ಬಂದಿದ್ದ ವಿಜಯ ಮೋನಿಸ್‌ ನನ್ನು ವಿಚಾರಿಸಿ ಹಣ ಪತ್ತೆಯಾಗದೇ ಇರುವುದರಿಂದ ಇದೀಗ ವೇಣೂರು ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಕಾಣೆಯಾದ ಹಣವನ್ನು ವಿಜಯ ಮೋನಿಸ್‌ ಎಂಬಾತನೇ ತೆಗೆದಿರಬಹುದು ಎಂಬ ಬಗ್ಗೆ ಬಲವಾದ ಸಂಶಯ ವ್ಯಕ್ತಪಡಿಸಿದ್ದಾರೆ . ವೇಣೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ಅಗತ್ಯ ಬಿದ್ದರೆ ಸಂತ್ರಸ್ಥರ ನೆರವಿಗೆ ವಯನಾಡ್ ಗೆ ತೆರಳಲು ಸಿದ್ಧರಿದ್ದೇವೆ : ಸಮಾಜ ಸೇವಕ ಡಾ. ರವಿ ಕಕ್ಕೆಪದವು

Suddi Udaya

ತೆಕ್ಕಾರು ಗ್ರಾಮ ಪಂಚಾಯತ್ ದ್ವಿತೀಯ ಹಂತದ ಗ್ರಾಮ ಸಭೆ

Suddi Udaya

ಉಜಿರೆ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ ಮತ್ತು ರೆಡಿಮೇಡ್ಸ್‌ನಲ್ಲಿ ಸ್ಪೆಷಲ್ ಆಫರ್: ಪ್ರತಿ ಖರೀದಿಯ ಮೇಲೆ ಶೆ.50 ರಷ್ಟು ಡಿಸ್ಕೌಂಟ್

Suddi Udaya

ಸಹಕಾರಿ ಸಪ್ತಾಹದಲ್ಲಿ ಕೃಷಿ ಕ್ಷೇತ್ರದ ಸಾಧಕರಾದ ಪೆರಾಡಿ ಸೊಸೈಟಿ ಸದಸ್ಯರಿಗೆ ಸನ್ಮಾನ

Suddi Udaya

ಜೆಜೆಸಿ ಹಾಗೂ ಲೇಡಿ ಜೆಸಿ ಸಮ್ಮೇಳನದಲ್ಲಿ ಬೆಳ್ತಂಗಡಿ ಜೆಸಿಐ ಘಟಕಕ್ಕೆ ಹಲವಾರು ಪ್ರಶಸ್ತಿ

Suddi Udaya

ಶ್ರೀ ಗೆಜ್ಜೆಗಿರಿ ಕ್ಷೇತ್ರ ಆಡಳಿತ ಸಮಿತಿ ಸಭೆ

Suddi Udaya
error: Content is protected !!