July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ: ರತ್ನಮಾನಸ ಜೀವನ ಶಿಕ್ಷಣ ವಸತಿ ನಿಲಯದಲ್ಲಿ ಭೂಮಿ ಹುಣ್ಣಿಮೆ ಆಚರಣೆ

ಉಜಿರೆ: ರತ್ನಮಾನಸ ಜೀವನ ಶಿಕ್ಷಣ ವಸತಿ ನಿಲಯದಲ್ಲಿ ಭೂಮಿ ಹುಣ್ಣಿಮೆಯನ್ನು ಫೆ.12 ರಂದು ಆಚರಿಸಲಾಯಿತು.
ಶ್ರೀ .ಧ .ಮ. ಪದವಿ ಕಾಲೇಜಿನ ಸಂಸ್ಕೃತ ಮುಖ್ಯಸ್ಥರಾದ ಶ್ರೀಧರ್ ಭಟ್ ರವರು ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತ ಭೂಮಿಯು ನಮ್ಮ ಬದುಕಿಗೆ ಆಧಾರವಾಗಿದೆ. ಗಿಡಮರಗಳು ಬೆಳೆಯಲು ಮತ್ತು ಒಳ್ಳೆಯ ಫಲವನ್ನು ನೀಡಲು ಮಣ್ಣು ಬೇಕು ಈ ಭೂಮಿ ಹುಣ್ಣಿಮೆಯಂದು ಭೂಮಿ ತಾಯಿ ಪೂಜೆಯನ್ನು ಹಿಂದಿನಿಂದಲೂ ಮಾಡುತ್ತಾ ಬಂದಿರುತ್ತಾರೆ . ಇಂದಿನಿಂದ ಭೂಮಿ ತಾಯಿ ಫಲವತ್ತತೆಗೆ ತಯಾರಾಗಿದ್ದಾಳೆ ಎಂಬ ಮಾತಿದೆ . ಈ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಹೇಳಿಕೊಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ರತ್ನಮಾನಸ ವಸತಿ ನಿಲಯದ ಪಾಲಕರಾದ ಯತೀಶ್ ಕೆ ಬಳಂಜ ಮಾತನಾಡುತ್ತಾ ಈ ದಿನ ಭೂಮಿ ತಾಯಿ ರುತುಮತಿ ಆಗುವ ದಿನ. ಈ ದಿನ ಭೂಮಿಗೆ ಯಾವುದೇ ತೊಂದರೆ ಆಗುವ ಕೆಲಸ ಮಾಡಬಾರದು ಎಂದು ಹೇಳುತ್ತಾರೆ . ಈ ದಿನ ಭೂಮಿ ತಾಯಿಗೆ ನಮಸ್ಕರಿಸಿ ಕ್ಷಮೆಯನ್ನು ಕೇಳಬೇಕು ಎಂದು ವಿದ್ಯಾರ್ಥಿಗಳಿಗೆ ಅರ್ಥಪೂರ್ಣವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ರತ್ನಮಾನಸದ ಎದುರುಗಡೆ ಸೆಗಣಿ ಸಾರಿಸಿ ಭೂಮಿಗೆ ಎಣ್ಣೆ ಹೊಯ್ದು ಕುಂಕುಮ, ಧೂಪ, ದೀಪ ಇಟ್ಟು ಹಾಗೂ ಅಕ್ಕಿ ಮತ್ತು ಹುರುಳಿಯಿಂದ ಮಾಡಲಾದ ಪುಡಿ ( ನನ್ನರಿ) ಮತ್ತು ಗೋಳಿ ಎಲೆಯಿಂದ ಮಾಡಲಾದ ಕಡಬುವನ್ನಿಟ್ಟು ಭೂಮಿತಾಯಿನ್ನು ಪೂಜಿಸಲಾಯಿತು.

Related posts

ನಯನಾಡು: ಅರೆಪ್ರಜ್ಞಾ ಸ್ಥಿತಿಯಲ್ಲಿ ಒಂದುವರೆ ವರ್ಷದ ಚಿರತೆ ಪತ್ತೆ

Suddi Udaya

ಐಸಮ್ಮರವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಉಚಿತ ವೀಲ್ ಚೇರ್ ವಿತರಣೆ

Suddi Udaya

ವ್ಯಾಪಕ ಮಳೆ : ದಕ್ಷಿಣ ಕನ್ನಡದಲ್ಲಿ ಜೂನ್ 28 ಎಲ್ಲ ಪ್ರೌಢಶಾಲೆಗಳಿಗೆ ಹಾಗೂ ಪ.ಪೂ. ಕಾಲೇಜುಗಳಿಗೆ ರಜೆ ಘೋಷಣೆ

Suddi Udaya

ನಾರಾವಿ:ಸಂತ ಅಂತೋನಿ ಶಿಕ್ಷಣ ಸಂಸ್ಥೆಯಲ್ಲಿ ಚಿಣ್ಣರ ಕಲರವ – ಕ್ರೀಡಾಸಂಗಮ

Suddi Udaya

ಮದ್ದಡ್ಕದಿಂದ ಬಸ್ಸು ಇಲ್ಲದೆ ಪ್ರಯಾಣಿಕರು ನೇತಾಡಿ‌ಕೊಂಡು ಹೋಗುವ ಪರಿಸ್ಥಿತಿ: ಅಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ಜನರ ಮನವಿ

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya
error: Content is protected !!