36.4 C
ಪುತ್ತೂರು, ಬೆಳ್ತಂಗಡಿ
February 23, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಂದಿರಗಳ ರಕ್ಷಣೆ ದೃಷ್ಟಿಯಿಂದ ಕರ್ನಾಟಕ ಮಂದಿರ ಮಹಾಸಂಘದ ವತಿಯಿಂದ ಬೆಳ್ತಂಗಡಿ ತಹಶೀಲ್ದಾರರಿಗೆ ಮನವಿ

ಕರ್ನಾಟಕ ಮಂದಿರ ಮಹಾಸಂಘವು 15 ಫೆಬ್ರವರಿ 2025 ರಂದು ಬೆಳ್ತಂಗಡಿ ಲಾಯಿಲದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾಭವನದಲ್ಲಿ 1 ದಿನದ ತಾಲೂಕು ಮಟ್ಟದ ಮಂದಿರ ಅಧಿವೇಶನವನ್ನು ಏರ್ಪಡಿಸಲಾಗಿತ್ತು. ಈ ಅಧಿವೇಶನದಲ್ಲಿ 80 ಕ್ಕೂ ಅಧಿಕ ದೇವಸ್ಥಾನಗಳ ವಿಶ್ವಸ್ಥರು, ಅರ್ಚಕರು ಭಾಗವಹಿಸಿದ್ದರು. ದೇವಸ್ಥಾನಗಳ ರಕ್ಷಣೆ ದೃಷ್ಟಿಯಿಂದ ಅಧಿವೇಶನದಲ್ಲಿ ಕೆಲವು ಮುಖ್ಯ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಈ ನಿರ್ಣಯವನ್ನು ಸರಕಾರವು ಅನುಷ್ಠಾನಕ್ಕೆ ತರಬೇಕೆಂದು ಬೆಳ್ತಂಗಡಿ ತಹಶೀಲ್ದಾರರಾದ ಪೃಥ್ವಿ ಸಾನಿಕಂ ಇವರಿಗೆ ಮನವಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮಂದಿರ ಮಹಾ ಸಂಘದ ತಾಲೂಕಿನ ಸಮನ್ವಯಕರು ಜಯಸಾಲಿಯಾನ್ ಬಲೆಂಜ, ಸದಾಶಿವ ಹೊಳ್ಳ , ಗಣಪತಿ ಸುಬ್ರಮಣ್ಯ ದೇವಸ್ಥಾನ ಮಲೆಬೆಟ್ಟು. ವಾಮನ ಬಾಳಿಗ, ಶ್ರೀ ಮೂಜುಲ್ನಾಯ ಬ್ರಹ್ಮ ದೈವಸ್ಥಾನ ಪಡಂಗಡಿ . ಸಂತೋಷ್ ಕುಮಾರ್ ಶ್ರೀ ನಾಗಂಬಿಕಾ ದೇವಸ್ಥಾನ ಮುಂಡೂರು. ಹರೀಶ ಮುದ್ದಿನಡ್ಕ, ಶ್ರೀ ರಾಮ ಭಜನಾ ಮಂದಿರ ಪೆರಿಯಡ್ಕ. ಹಾಗೂ ಯೋಗೀಶ್ ಕೆಂಬರ್ಜೆ ಇವರುಗಳು ಉಪಸ್ಥಿತರಿದ್ದರು.

Related posts

ಉರುವಾಲು ಕಾರಿಂಜ ಬಾಕಿಮಾರು ದೈವಸ್ಥಾನದ “ಕಾರಿಂಜ ಶ್ರೀ ಕಲ್ಕುಡ” ಧ್ವನಿ ಸುರುಳಿ ಬಿಡುಗಡೆ

Suddi Udaya

ವೇಣೂರು ಸರಕಾರಿ ಶಾಲೆ ಸ್ಥಳಾಂತರದ ಬಗ್ಗೆ ಹಳೆ ವಿದ್ಯಾರ್ಥಿಗಳ ವಿಚಾರ ವಿನಿಮಯ ಸಭೆ: ಕುಂದುಕೊರತೆ ನೀಗಿಸಲು ಹಳೆವಿದ್ಯಾರ್ಥಿಗಳಿಂದ ಸಹಾಯ ಯಾಚಿಸಲು ನಿರ್ಧಾರ

Suddi Udaya

ಕೊಕ್ಕಡದಲ್ಲಿ ನಿಲ್ಲಿಸಿದ್ದ ಮಾರುತಿ 800 ಕಾರು ಕಳ್ಳತನ

Suddi Udaya

ಶಿಬರಾಜೆ ಅಂಗನವಾಡಿಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ನಿಡ್ಲೆ : ಕೊಡಂಗೆಯಲ್ಲಿ ಗುಡ್ಡ ಕುಸಿತ: ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ತುರ್ತು ಕಾರ್ಯಾಚರಣೆ

Suddi Udaya

ಬೆಳ್ತಂಗಡಿ ತುಳುನಾಡು ಕೋಳಿ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕೇಂದ್ರ ಸಮಿತಿ ರಚನೆ: ಅಧ್ಯಕ್ಷರಾಗಿ ನಾರಾಯಣ ಪೂಜಾರಿ ಉಚ್ಚೂರು, ಪ್ರ.ಕಾರ್ಯದರ್ಶಿಯಾಗಿ ಅಶ್ವಿನ್ ಕುಮಾರ್ ಬಳಂಜ, ಕೋಶಾಧಿಕಾರಿಯಾಗಿ ಕೇಶವ ಕೊಯ್ಯೂರು

Suddi Udaya
error: Content is protected !!