22.6 C
ಪುತ್ತೂರು, ಬೆಳ್ತಂಗಡಿ
July 23, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಪೊಲೀಸ್ವರದಿ

ಪಿಲಿಗೂಡು: ಯಾಂತ್ರಡ್ಕದಲ್ಲಿ ಕಳ್ಳತನ: ನಗ‌- ನಗದು ದೋಚಿ ಪರಾರಿಯಾದ ಖದೀಮ

ಪಿಲಿಗೂಡು: ಪಿಲಿಗೂಡು ಮಾವಿನಕಟ್ಟೆ ಸಮೀಪದ ಯಾಂತ್ರಡ್ಕ ಉಸ್ಮಾನ್ ಎಂಬವರ ಮನೆಯೊಳಗೆ ಕಳ್ಳರು ಪ್ರವೇಶಿಸಿ ನಗ ಹಾಗೂ ನಗದು ಎಗರಿಸಿದ ಘಟನೆ ಎ.10 ರಂದು ನಡೆದಿದೆ.

ಮಾವಿನಕಟ್ಟೆ ಸಮೀಪದ ಯಾಂತ್ರಡ್ಕ ಉಪ್ಪಿನಂಗಡಿ – ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ಉಸ್ಮಾನ್ ಎಂಬವರ ಮನೆಯೊಳಗೆ ಹೊಕ್ಕ ಕಳ್ಳರು ಸುಮಾರು 58 ಸಾವಿರ ರೂಪಾಯಿ ಹಾಗೂ 2 ಪವನ್ ಚಿನ್ನವನ್ನು ಕಪಾಟು ಹೊಡೆದು ದೋಚಿ ಪರಾರಿಯಾಗಿದ್ದಾರೆ. ಉಸ್ಮಾನ್ ಹಾಗೂ ಮನೆಯವರು ಬೆಳ್ಳಗ್ಗೆ 10:30 ಗಂಟೆ ವೇಳೆಗೆ ಮದುವೆ ಕಾರ್ಯಕ್ರಮ ಹೋಗಿದ್ದು ಸಂಜೆ 3: 30 ಗಂಟೆ ವೇಳೆ ಬರುವಾಗ ಈ ಘಟನೆ ನಡೆದಿದೆ.

ಬಡ ವರ್ಗದ ಕುಟುಂಬ ಉಸ್ಮಾನ್ ಅವರದ್ದಾಗಿದ್ದು ಸಾಲಕ್ಕೆ ಪಡೆದುಕೊಂಡಿರುವ ಮೊತ್ತವನ್ನು ಹಿಂತಿರುಗಿಸಲು ಕಪಾಟಿನಲ್ಲಿ ಇಟ್ಟಿದ್ದರು. ಆದರೆ ಖದೀಮರು ಅದನ್ನೇ ಎಗರಿಸಿ ಮನೆಯ ಹಿಂಬದಿ ಬಾಗಿಲಿನಿಂದ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಐಪಿಎಸ್ ಅಧಿಕಾರಿ ಮನೀಷಾ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Related posts

ಇಂದಬೆಟ್ಟು ಗ್ರಾ.ಪಂ. ಅಧ್ಯಕ್ಷರಾಗಿ ಆಶಾಲತಾ ಉಪಾಧ್ಯಕ್ಷರಾಗಿ ಪ್ರೇಮ ಅವಿರೋಧ ಆಯ್ಕೆ

Suddi Udaya

ಬೆಳ್ತಂಗಡಿ : ಪ.ಪಂ. ಮತ್ತು ಬ್ಯಾಂಕ್ ಆಫ್ ಬರೋಡಾ ಸಹಯೋಗದೊಂದಿಗೆ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’

Suddi Udaya

“ಆಪರೇಶನ್ ಸಿಂಧೂರ” ಸರಿಯಾದ ಉತ್ತರವಾಗಿದೆ: ಸುಮಂತ್ ಕುಮಾರ್ ಜೈನ್

Suddi Udaya

ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆ ಕಕ್ಯಪದವು ಪದವಿ ವಿಭಾಗದಲ್ಲಿ ನಶಾಮುಕ್ತ ಭಾರತ ಅಭಿಯಾನ ಕುರಿತು ಪ್ರತಿಜ್ಞಾವಿಧಿ ಸ್ವೀಕಾರ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಿಂದನೆ ಪ್ರಕರಣ:ಸೌಜನ್ಯ ಮಾವ ವಿಠ್ಠಲ ಗೌಡನಿಗೆ ನ್ಯಾಯಾಂಗ ಬಂಧನಕ್ಕೆ ಆದೇಶ

Suddi Udaya

ಕ್ಯಾನ್ಸರ್ ಪೀಡಿತರಿಗೆ ಕೇಶದಾನಗೈದು ಮಾದರಿಯಾದ ಅಳದಂಗಡಿಯ ಹೇಮಚಂದ್ರ

Suddi Udaya
error: Content is protected !!