July 23, 2026
Uncategorized

ಆರ್ ಟಿ ಓ ಫ್ರೆಂಡ್ಸ್ ಕಾರ್ಕಳ ಇವರ ಆಶ್ರಯದಲ್ಲಿ: ಆರ್ ಟಿ ಓ ಟ್ರೋಫಿ 2025 ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ

ಕಾಕ೯ಳ: ಕಾರ್ಕಳ ಸ್ವರಾಜ್ ಮೈದಾನದಲ್ಲಿ ಆರ್ ಟಿ ಓ ಫ್ರೆಂಡ್ಸ್ ಕಾರ್ಕಳ ಇವರ ಆಶ್ರಯದಲ್ಲಿ ಆರ್ ಟಿ ಓ ಟ್ರೋಫಿ 2025 ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಫೆ.22ರಂದು ನಡೆಯಿತು.
ಹಿರಿಯ ಮೋಟಾರ್ ವಾಹನ ನೀರಿಕ್ಷಕರು ಸಂತೋಷ ಶೆಟ್ಟಿ ಪಂದ್ಯಾಟ ಉದ್ಘಾಟನೆ ಮಾಡಿದರು. ನೇಮಿರಾಜ್ ಅರಿಗ, ಶಿವರಾಮ್ ಹೆಗ್ಡೆ, ಗೋಪಾಲ್ ಪೈ, ಅಂಬಾ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಜೆ ಸಮಾರೋಪ ಸಮಾರಂಭದ ಅಧ್ಯಕ್ಷರಾಗಿ ನೇಮಿರಾಜ್ ಅರಿಗ ವಹಿಸಿದರು ಅತಿಥಿಗಳಾಗಿ ಪ್ರಾದೇಶಿಕ ಸಾರಿಗೆ ಕಚೇರಿಯ ಹಿರಿಯ ಮೋಟಾರ್ ವಾಹನ ನಿರೀಕ್ಷಿಕರಾದ ಶಯ ಸಂತೋಷ ಶೆಟ್ಟಿ, ಸಿಬಂದಿಗಳಾದ ರಾಜೇಶ್ ಶೇಟ್, ಶಾಂತರಾಜ್, ಅಮರ್, ಶಯ ಶುದಂಷು, ರಕ್ಷಿತ್, ಉಪಸ್ಥಿತರಿದ್ದರು. ಹಾಗೂ ಶಿವರಾಮ್ ಹೆಗ್ಡೆ, ರಮೇಶ್ ದೇವಾಡಿಗ, ಗೋಪಾಲ್ ಪೈ ಉಪಸ್ಥಿತರಿದ್ದರು. ನೇಮಿರಾಜ್ ಮಾತಾಡಿ ಈ ತರಹದ ಪಂದ್ಯಾಟ ದಿಂದ ಕೆಲಸದ ಒತ್ತಡ ಕಡಿಮೆ ಆಗುತದೆ. ಆದುದರಿಂದ ವರ್ಷ ದಲ್ಲಿ ಎರಡು ಮೂರು ಮ್ಯಾಚ್ ಮಾಡುವಂತೆ ಹೇಳಿದರು. ಉಡುಪಿ ತಂಡವು ಪ್ರಥಮ, ಕಾರ್ಕಳ ತಂಡವು ದ್ವಿತೀಯ, ಹಾಗೂ ಕುಂದಾಪುರ ತಂಡವು ತೃತೀಯ ಬಹುಮಾನ ಪಡೆಯಿತು. ಆಡಿದ ಎಲ್ಲಾ ತಂಡದ ಆಟಗಾರರಿಗೆ ವೈಯಕ್ತಿಕ ಬಹುಮಾನ ನೀಡಲಾಯಿತು. ರವಿ ಅಲೆಯೂರು ಕಾರ್ಯಕ್ರಮ ನಿರೂಪಿದರು. ಅಂಬಾ ಪ್ರಸಾದ್ ಸ್ವಾಗತಿಸಿದರು ಹಾಗೂ ಧನ್ಯವಾದ ಅರ್ಪಿದರು.

Related posts

ನಾವೂರು ಜಾತ್ರೆಗೆ ವಿಧ್ಯುಕ್ತ ಚಾಲನೆ – ಡಾ. ವೀಣಾ ಬನ್ನಂಜೆ ಅವರಿಂದ ಶ್ರೀ ಕೃಷ್ಣ ಕಥಾಮೃತ ಪ್ರವಚನದ ಆರಂಭ: ಭಕ್ತರಿಂದ ಅದ್ಬುತ ಪ್ರತಿಕ್ರಿಯೆ

Suddi Udaya

ಮಿತ್ತಬಾಗಿಲು ಚೌಕಿಬೆಟ್ಟು ನಿವಾಸಿ ತನಿಯಪ್ಪ ಪೂಜಾರಿ ನಿಧನ

Suddi Udaya

ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಪದಾಧಿಕಾರಿಗಳ ಹಾಗೂ ಜಿಲ್ಲಾ ಅಧ್ಯಕ್ಷರುಗಳ ತರಬೇತಿ ಶಿಬಿರ

Suddi Udaya

ಗೇರುಕಟ್ಟೆ: ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ವಸಂತ ಮಜಲು, ಉಪಾಧ್ಯಕ್ಷರಾಗಿ ರಾಜ್ ಪ್ರಕಾಶ್ ಶೆಟ್ಟಿ

Suddi Udaya

ಇಂದಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಆದಿವಾಸಿ ಸಮುದಾಯದ ಎದುರಿಸುತ್ತಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಮಹತ್ವದ ಸಭೆ ಕರೆದಿರುವ ರಾಜ್ಯ ಸರ್ಕಾರ

Suddi Udaya
error: Content is protected !!