26.9 C
ಪುತ್ತೂರು, ಬೆಳ್ತಂಗಡಿ
June 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಮಹಿಳಾ ಪ್ರಕಾರ ತಾಲೂಕು ಘಟಕದ ನೇತೃತ್ವದಲ್ಲಿ ಅಹಲ್ಯಾಬಾಯಿ ಹೋಳ್ಕರ್ ಕುರಿತು ಉಪನ್ಯಾಸ

ಬೆಳ್ತಂಗಡಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಮಹಿಳಾ ಪ್ರಕಾರ ತಾಲೂಕು ಘಟಕದ ನೇತೃತ್ವದಲ್ಲಿ
ಅಹಲ್ಯ ಬಾಯಿ ಹೋಳ್ಕರ್ – ಜೀವನಗಾಥೆ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ಉಜಿರೆಯ ಶಾರದಾ ಮಂಟಪದಲ್ಲಿ ಜರುಗಿತು.

ಸಂಪನ್ಮೂಲ ವ್ಯಕ್ತಿಯಾಗಿ ಮುಂಡಾಜೆ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ ಸಹಶಿಕ್ಷಕಿ ಭವ್ಯಾ ಮಾತನಾಡಿ “ಪತಿಯ ಮರಣ ಮೃದಂಗದೊಡನೆ ಕಾರ್ಮೋಡ ಕವಿದರೂ, ತನ್ನವರ ಅಗಲುವಿಕೆಯ ಬಿಸಿಯ ಶಾಖವಿದ್ದರೂ, ವಿರಕ್ತಿಯ ಬೇಗೆಯಲ್ಲಿ ಬೆಂದು ನೊಂದು ಭಾವ ಬರಿದಾದರೂ ಎದೆಗುಂದದೆ ದಿಟ್ಟತನದಿಂದ ಸುಂಟರಗಾಳಿಯಂತೆ ರಾಜ್ಯೋದ್ಧಾರದ ಕಡೆಗೆ, ಪ್ರಜೆಗಳ ಹಿತ ದೃಷ್ಟಿಯಿಂದ ಎದ್ದು ನಿಂತವಳು ಅಹಲ್ಯಾ ಬಾಯಿ ಹೋಳ್ಕರ್. ಜನರ ಒಳಿತಿಗಾಗಿ ಜನಜನಿತರಾದ ಅಹಲ್ಯಾಬಾಯಿ ಎಂಬ ಅರುಂಧತಿ ನಕ್ಷತ್ರ ಭಾರತೀಯ ಚರಿತೆಯ ನಂದಾದೀಪ”ಎಂದರು.


ಮಹಿಳಾ ಪ್ರಕಾರ ತಾಲೂಕು ಘಟಕದ ಅಧ್ಯಕ್ಷೆ ಆಶಾ ಅಡೂರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅ.ಭಾ.ಸ.ಪ ತಾಲೂಕು ಸಮಿತಿ ಅಧ್ಯಕ್ಷ ಪ್ರೊ. ಗಣಪತಿ ಭಟ್ ಕುಳಮರ್ವ,ವಿಭಾಗ ಸoಯೋಜಕ ಸುಂದರ ಶೆಟ್ಟಿ ಇಳಂತಿಲ, ಕಾರ್ಯಕಾರಿಣಿ ಸದಸ್ಯ ಗುರುನಾಥ್ ಪ್ರಭು, ಸಮಿತಿಯ ಸಹ ಕಾರ್ಯದರ್ಶಿ ಸಂತೋಷಿನಿ, ಘಟಕದ ಸಹಕಾರ್ಯದರ್ಶಿ ವನಜಾ ಜೋಷಿ,ರಾಜೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.


ತಾಲೂಕು ಸಮಿತಿಯ ಕಾರ್ಯದರ್ಶಿ ಸುಭಾಷಿಣಿ ಪ್ರಾಸ್ತವಿಕವಾಗಿ ಮಾತನಾಡಿದರು. ಸಹಕಾರ್ಯದರ್ಶಿ ವಿನುತಾ ರಜತ್ ಗೌಡ ಸ್ವಾಗತಿಸಿದರು.ಮಹಿಳಾ ಪ್ರಕಾರದ ಪ್ರಮುಖ್ ವನಿತಾ ಶೆಟ್ಟಿ ವಂದಿಸಿದರು. ತಾಲೂಕು ಸಮಿತಿಯ ಸಾಹಿತ್ಯ ಕೂಟ್ ಪ್ರಮುಖ್ ಅಶ್ವಿಜಾ ಶ್ರೀಧರ್ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಉಜಿರೆ ಬೆನಕ ಆಸ್ಪತ್ರೆಗೆ ವಿಧಾನಸಭೆಯ ಸ್ಪೀಕರ್ ಯು. ಟಿ ಖಾದರ್ ಭೇಟಿ

Suddi Udaya

ಲಾಯಿಲ ಸಂಗಾತಿ ನಗರದಲ್ಲಿ ವಿದ್ಯುತ್ ಕಂಬದ ಮೇಲೆ ಬಿದ್ದು ರಸ್ತೆಗೆ ಅಡ್ಡಲಾಗಿ ಉರುಳಿದ 3 ಮರಗಳು

Suddi Udaya

ವೇಣೂರು: ಬಜಿರೆ ನಿವಾಸಿ ಹೊನ್ನಮ್ಮ ನಿಧನ

Suddi Udaya

ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ:ಸಹಕಾರಿ ಭಾರತಿ ಬಿಜೆಪಿ ಬೆಂಬಲಿತ- 11 ಸ್ಥಾನ ಸೌಹಾರ್ದ ಸಹಕಾರಿ ಬಂಧುಗಳ ಒಕ್ಕೂಟಕ್ಕೆ 1- ಸ್ಥಾನ: ನ್ಯಾಯಾಲಯದ ಆದೇಶದಂತೆ ಫಲಿತಾಂಶ ಘೋಷಣೆಗೆ ತಡೆ

Suddi Udaya

ಆರ್ ಟಿ ಇ ದಾಖಲಾತಿಗೆ ಅರ್ಜಿ ಆಹ್ವಾನ: ಮೇ.20 ಕೊನೆಯ ದಿನ

Suddi Udaya

ಕಳೆಂಜ ಸದಾಶಿವೇಶ್ವರ ದೇವಸ್ಥಾನದಲ್ಲಿ 6 ತೆಂಗಿನ ಕಾಯಿ ಗಣಹೋಮ ಮತ್ತು ಭತ್ತದ ತೆನೆ ವಿತರಣೆ

Suddi Udaya
error: Content is protected !!