25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಮಹಿಳಾ ಪ್ರಕಾರ ತಾಲೂಕು ಘಟಕದ ನೇತೃತ್ವದಲ್ಲಿ ಅಹಲ್ಯಾಬಾಯಿ ಹೋಳ್ಕರ್ ಕುರಿತು ಉಪನ್ಯಾಸ

ಬೆಳ್ತಂಗಡಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಮಹಿಳಾ ಪ್ರಕಾರ ತಾಲೂಕು ಘಟಕದ ನೇತೃತ್ವದಲ್ಲಿ
ಅಹಲ್ಯ ಬಾಯಿ ಹೋಳ್ಕರ್ – ಜೀವನಗಾಥೆ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ಉಜಿರೆಯ ಶಾರದಾ ಮಂಟಪದಲ್ಲಿ ಜರುಗಿತು.

ಸಂಪನ್ಮೂಲ ವ್ಯಕ್ತಿಯಾಗಿ ಮುಂಡಾಜೆ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ ಸಹಶಿಕ್ಷಕಿ ಭವ್ಯಾ ಮಾತನಾಡಿ “ಪತಿಯ ಮರಣ ಮೃದಂಗದೊಡನೆ ಕಾರ್ಮೋಡ ಕವಿದರೂ, ತನ್ನವರ ಅಗಲುವಿಕೆಯ ಬಿಸಿಯ ಶಾಖವಿದ್ದರೂ, ವಿರಕ್ತಿಯ ಬೇಗೆಯಲ್ಲಿ ಬೆಂದು ನೊಂದು ಭಾವ ಬರಿದಾದರೂ ಎದೆಗುಂದದೆ ದಿಟ್ಟತನದಿಂದ ಸುಂಟರಗಾಳಿಯಂತೆ ರಾಜ್ಯೋದ್ಧಾರದ ಕಡೆಗೆ, ಪ್ರಜೆಗಳ ಹಿತ ದೃಷ್ಟಿಯಿಂದ ಎದ್ದು ನಿಂತವಳು ಅಹಲ್ಯಾ ಬಾಯಿ ಹೋಳ್ಕರ್. ಜನರ ಒಳಿತಿಗಾಗಿ ಜನಜನಿತರಾದ ಅಹಲ್ಯಾಬಾಯಿ ಎಂಬ ಅರುಂಧತಿ ನಕ್ಷತ್ರ ಭಾರತೀಯ ಚರಿತೆಯ ನಂದಾದೀಪ”ಎಂದರು.


ಮಹಿಳಾ ಪ್ರಕಾರ ತಾಲೂಕು ಘಟಕದ ಅಧ್ಯಕ್ಷೆ ಆಶಾ ಅಡೂರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅ.ಭಾ.ಸ.ಪ ತಾಲೂಕು ಸಮಿತಿ ಅಧ್ಯಕ್ಷ ಪ್ರೊ. ಗಣಪತಿ ಭಟ್ ಕುಳಮರ್ವ,ವಿಭಾಗ ಸoಯೋಜಕ ಸುಂದರ ಶೆಟ್ಟಿ ಇಳಂತಿಲ, ಕಾರ್ಯಕಾರಿಣಿ ಸದಸ್ಯ ಗುರುನಾಥ್ ಪ್ರಭು, ಸಮಿತಿಯ ಸಹ ಕಾರ್ಯದರ್ಶಿ ಸಂತೋಷಿನಿ, ಘಟಕದ ಸಹಕಾರ್ಯದರ್ಶಿ ವನಜಾ ಜೋಷಿ,ರಾಜೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.


ತಾಲೂಕು ಸಮಿತಿಯ ಕಾರ್ಯದರ್ಶಿ ಸುಭಾಷಿಣಿ ಪ್ರಾಸ್ತವಿಕವಾಗಿ ಮಾತನಾಡಿದರು. ಸಹಕಾರ್ಯದರ್ಶಿ ವಿನುತಾ ರಜತ್ ಗೌಡ ಸ್ವಾಗತಿಸಿದರು.ಮಹಿಳಾ ಪ್ರಕಾರದ ಪ್ರಮುಖ್ ವನಿತಾ ಶೆಟ್ಟಿ ವಂದಿಸಿದರು. ತಾಲೂಕು ಸಮಿತಿಯ ಸಾಹಿತ್ಯ ಕೂಟ್ ಪ್ರಮುಖ್ ಅಶ್ವಿಜಾ ಶ್ರೀಧರ್ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಆಗುಂಬೆ ವರ್ಗಾವಣೆ ಆದೇಶ ರದ್ದು: ಉಜಿರೆ ಗ್ರಾ.ಪಂ ಪಿಡಿಒ ಆಗಿ ಪಿ.ಹೆಚ್. ಪ್ರಕಾಶ್ ಶೆಟ್ಟಿ ಮುಂದುವರಿಕೆ

Suddi Udaya

ಇಳಂತಿಲ ಗ್ರಾ.ಪಂ.ಅಧ್ಯಕ್ಷರಾಗಿ ವಸಂತ ಶೆಟ್ಟಿ ಅವಿರೋಧವಾಗಿ ಆಯ್ಕೆ

Suddi Udaya

ಮಚ್ಚಿನ : ಕಲಾಯಿ ರಸ್ತೆ ಪುಂಚಪಾದೆಯಲ್ಲಿ ವಾರಿಸುದಾರರಿಲ್ಲದೆ ಪತ್ತೆಯಾದ ಎರಡು ಬೈಕ್ ಗಳು

Suddi Udaya

ಕಣಿಯೂರು ವಿಸ್ತೃತ ಡೈರಿ ಉದ್ಘಾಟನೆ-ಹೈನುಗಾರಿಕಾ ಮಾಹಿತಿ

Suddi Udaya

ಪ್ರಧಾನಿ ಮೋದಿಯವರ ಜನ್ಮದಿನದ ಅಂಗವಾಗಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರಿಂದ ದೇವರಿಗೆ ವಿಶೇಷ ಪೂಜೆ

Suddi Udaya

ಕಾಪಿನಡ್ಕ: ಕೊಂಕಡ್ಡ ನಿವಾಸಿ ಸುರೇಶ್ ಪೂಜಾರಿ ನಿಧನ

Suddi Udaya
error: Content is protected !!