ಸಾವ್ಯ : ಶುಭೋದಯ ಹಿಂದೂ ಸೇವಾ ಟ್ರಸ್ಟ್ ಸಾವ್ಯ ಹಾಗೂ ಜೆ ಜೆ ಫ್ರೆಂಡ್ಸ್ ಸಾವ್ಯ ಇದರ ವತಿಯಿಂದ ನಡೆದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವಾಲಿಬಾಲ್ ಪಂದ್ಯಾಟ ಜೆ ಜೆ ಕ್ರೀಡಾಂಗಣ ಸಾವ್ಯ ಇಲ್ಲಿ ನಡೆಯಿತು.



ಟೂರ್ನಮೆಂಟ್ ನ ಉದ್ಘಾಟನೆಯನ್ನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್ ನೆರವೇರಿಸಿದರು. ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಯುವಮೋರ್ಚಾ ಬಿಜೆಪಿ ಬೆಳ್ತಂಗಡಿ ಅಧ್ಯಕ್ಷ ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಉದಯ ಹೆಗ್ಡೆ ನಾರಾವಿ, ಅಭಿಜೀತ್ ಜೈನ್ ನಾರಾವಿ, ಗಣೇಶ್ ಹೆಗ್ಡೆ, ರಂಜಿತ್ ಪಾರಿಜಾತಾ , ಹರೀಶ್ ಹೆಗ್ಡೆ, ಶ್ರೀಮತಿ ಸರೋಜ, ಶೀನ ಪೂಜಾರಿ ಸಂತ್ಯಾಲ್, ಗಣೇಶ್ ಕೋಟ್ಯಾನ್ ಸಂತ್ಯಾಲ್, ಟ್ರಸ್ಟ್ ಅಧ್ಯಕ್ಷ ರಕ್ಷಿತ್ ಟ್ರಸ್ಟ್ ನ ಕಾರ್ಯಕಾರಣಿ ಅಧ್ಯಕ್ಷ ಹರೀಶ್ ಕುಲಾಲ್ ಮರೆಜಲ್ ಭಾಗವಹಿಸಿದ್ದರು.













