25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ವಿಧಾನ ಪರಿಷತ್ ಕಲಾಪ; ಬಿ-ಖಾತೆಯಿಂದ ಪ್ರಯೋಜನವಾಗುತ್ತಿಲ್ಲ, ಫಾರ್ಮ್-3 ನೀಡಲು ಪ್ರತಾಪಸಿಂಹ ನಾಯಕ್ ಆಗ್ರಹ

ಬೆಳ್ತಂಗಡಿ: ಬಿ-ಖಾತೆಯಿಂದ ಸರಕಾರಕ್ಕೆ ತೆರಿಗೆ ಬರುತ್ತಿದೆ ಹೊರತು ಮನೆ ಕಟ್ಟಲು ಪರವಾನಿಗೆ, ಬ್ಯಾಂಕ್ ಸಾಲ ಪಡೆಯಲು, ಜಾಗ ಮಾರಾಟ ಮಾಡಲು ಬಿ-ಖಾತೆಯಿಂದ ಪ್ರಯೋಜನವಾಗುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದರು. ರಾಜ್ಯದ ವಿಧಾನ ಮಂಡಲ ಅಧಿವೇಶನ ಆರಂಭಗೊಂಡಿದ್ದು ಮಂಗಳವಾರ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಬಿ-ಖಾತೆಯಿಂದ ಆಗುತ್ತಿರುವ ತೊಂದರೆ ಕುರಿತು ವಿಷಯ ಪ್ರಸ್ತಾಪಿಸಿದರು.

ಮೂಡದಲ್ಲಿ ಸಿಬ್ಬಂದಿಗಳು ಇಲ್ಲ. ವಿನ್ಯಾಸ ನಕ್ಷೆ ನೀಡಿದರೆ ಮನೆ ನಿರ್ಮಾಣಕ್ಕೆ ಅವಕಾಶ ಮಾಡಲು ಆಗುತ್ತದೆ. ಬೆಂಗಳೂರನ್ನು ಇಟ್ಟಕೊಂಡು ರಾಜ್ಯವನ್ನು ತುಲಣೆ ಮಾಡುವುದು ಬೇಡ. ಗ್ರಾಮದಲ್ಲಿ ಕಂದಾಯ ಇಲಾಖೆ ಕರ್ನ್ವ್ಷನ್ ಮಾಡಿರುವ ಜಾಗ. ಮನೆ ಕಟ್ಟಿರುವ ಜಾಗಗಳಿಗೆ ಫಾರ್ಮ-3ಎ ನೀಡಿ. ಈಗ ಡೋರ್ ನಂಬ್ರ ಸಿಕ್ಕಿದೆ ಸರಕಾರಕ್ಕೆ ತೆರಿಗೆ ಸಿಕ್ಕಿದೆ ಇದರಿಂದ ಏನು ಪ್ರಯೋಜನ. ಬೆಂಗಳೂರಿನಲ್ಲಿ ನಡೆಯುವ ಅವಾಂತರಗಳಿಗೆ ಗ್ರಾಮೀಣ ಪ್ರದೇಶದ ಸಣ್ಣ ಸೈಟ್‌ಗಳಿಗೆ ಅನ್ವಯ ಮಾಡಬೇಡಿ. ಅಂತವರಿಗೆ ವಿಶೇಷ ರಿಯಾಯಿತಿ ನೀಡಿ. ಫಾರ್ಮ್ ನಂಬ್ರ-3 ನೀಡಿ ಎಂದು ಒತ್ತಾಯಿಸಿದ ಅವರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

ಈ ಬಗ್ಗೆ ಗಮನಹರಿಸಲಾಗುವುದು. ಎಲ್ಲ ಜನರ ಸಮಸ್ಯೆ ಬಗೆಹರಿಯಬೇಕು. ಸಲಹೆಯನ್ನು ಸ್ವೀಕರಿಸಲಾಗುವುದು ಎಂದು ಪೌರಡಳಿತ ಸಚಿವರು ಉತ್ತರಿಸಿದರು.

Related posts

ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಬಸ್ಸು ಹತ್ತುವ ವೇಳೆ ಮಹಿಳೆಯ ಕೊರಳಿನಿಂದ ರೂ.1.44 ಲಕ್ಷ ಮೌಲ್ಯದ 36 ಗ್ರಾಂ ಚಿನ್ನದ ಸರ ಕಳವು

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಗೆ ಪ್ರಗತಿ ಪರಿಶೀಲನ ತಂಡ ಭೇಟಿ

Suddi Udaya

ಎಸ್.ವೈ.ಎಸ್ ಬೆಳ್ತಂಗಡಿ ಝೋನ್ ಕೌನ್ಸಿಲರ್ಸ್ ಕಾoಕ್ಲೇವ್

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ‌ ಸ್ಥಾನ: ಸೈಂಟ್ ಮೆರೀಸ್ ಆಂ.ಮಾ. ಶಾಲಾ ವಿದ್ಯಾರ್ಥಿನಿ ಸಂಜನಾ ಎಂ.ಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ನಾವೂರು: ಮುರ ಮದರಸದಲ್ಲಿ ಮಾದಕ ದ್ರವ್ಯ ವಿರುದ್ಧದ ಅಭಿಯಾನ ಹಾಗೂ ಸ್ನೇಹ ಸಹವಾಸ ಶಿಬಿರ

Suddi Udaya

ನಿಡ್ಲೆ ಅನ್ನಪೂರ್ಣ ನಿಲಯದ ಪುಷ್ಪಾವತಿ ಶೆಟ್ಟಿ ನಿಧನ

Suddi Udaya
error: Content is protected !!