38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಿಸಿಲ ಝಳಕ್ಕೆ ವರುಣ ಕೃಪೆ, ಬೆಳ್ತಂಗಡಿ ತಾಲೂಕಿನ ನಾನಾ ಭಾಗದಲ್ಲಿ ಮಳೆ- ಜನತೆ ಕೂಲ್ ಕೂಲ್

ಬೆಳ್ತಂಗಡಿ: ಬಿಸಿಲ ಬೇಗೆಯಿಂದ ತತ್ತರಿಸಿ ಹೋಗಿ ಬಸವಳಿದಿದ್ದ ಬೆಳ್ತಂಗಡಿ ತಾಲೂಕಿನ ಮಂದಿಗೆ ವರುಣ ಬಂದು ತಂಪೆರೆದಿದ್ದ ಈ ವರ್ಷದ ಮೊದಲ ಮಳೆ ಸುರಿದಿದೆ. ತಾಲೂಕಿನ ಹಲವೆಡೆ ದಿಢೀರ್ ಮಳೆಯಾಗಿದ್ದು, ಜನ ಝಳ ಝಳ ಬಿಸಿಲಿನಿಂದ ಚುಮು ಚುಮು ಚಳಿಯ ಆನಂದ ಕ್ಷಣಗಳ ಕಂಡು ಬಂತು. ಮಾ.11 ರಂದು 41 ಡಿಗ್ರಿ:ಸಿ ತಾಪಮಾನವಿದ್ದು ಜನತೆ ಬಿಸಿಲ ಝಳಕ್ಕೆ ಬೆಂದು ಬಸವಳಿದಿದ್ದರು, ಮಾ.12 ರಂದು ಬಿಸಿಲ ತಾಪ ಅಧಿಕವಾಗಿತ್ತು ಆದರೆ ಸಂಜೆ ವೇಳೆ ವರುಣ ಕೃಪೆಯಿಂದ ಬಿಸಿಲ ಕಾವಿಗೆ ಬೆಂದಿದ್ದ ಇಳೆ, ಜನತೆಗೆ ಮಳೆಯ ಸಿಂಚನದಿಂದ ತಂಪೆರೆದಿದೆ. ಮಾ.12ರಂದು ಮೋಡ ಕವಿದ ವಾತವಾರಣ ತಾಲೂಕಿನ ನಾನಾ ಕಡೆಗಳಲ್ಲಿತ್ತು. ಜನರ ಮಳೆಯ ನೀರಿಕ್ಷೆಯನ್ನು ಆಪೇಕ್ಷಿಸುತ್ತಿದ್ದ ಘಟನೆಗಳು ಕಂಡು ಬಂತು.

ಬಿಸಿಲ ಕಾವು ಕೃಷಿ ಭೂಮಿಗೂ ವ್ಯಾಪಿಸಿ ಬಿಸಿಮುಟ್ಟಿಸಿತ್ತು. ಕೃಷಿಕ ಮೊದಲೇ ಲೋ ವಾಲ್ಟೆಜ್ ಬಾದೆಯಿಂದ ಕಂಗೆಟ್ಟು ಹೋಗಿದ್ದು ಇದರ ನಡುವೆ ಬಿಸಿಲ ಪ್ರತಪಕ್ಕೆ ಬೇಸತ್ತು ಹೋಗಿದ್ದರು. ವರುಣ ಆಗಮನದಿಂದ ಧರೆ ತಂಪೆರದ್ದಂತಾಗಿದೆ.

ಶಿಶಿಲ, ಶಿಬಾಜೆ, ಅರಸಿನಮಕ್ಕಿ, ರೆಖ್ಯಾ, ಕಳೆಂಜ, ನೆರಿಯ, ಉಜಿರೆ ಗಡುಗು ಸಹಿತ ಗಾಳಿ ಮಳೆ ಸುರಿದಿದೆ. ಕೊಕ್ಕಡ ಸಹಿತ ವಿವಿಧೆಡೆ ತುಂತುರು ಮಳೆಯಾಗಿದೆ. ಧರ್ಮಸ್ಥಳ ಭಾಗದಲ್ಲಿ ಅಲಿಕಲ್ಲು ಮಳೆಯಾಗಿದೆ. ಬೆಳ್ತಂಗಡಿ ಭಾಗದಲ್ಲಿ ಸಂಜೆ ಹೊತ್ತಿಗೆ ಗಾಳಿ ಸಹಿತ ಸಡಿಲುನೊಂದಿಗೆ ಮಳೆಯಾಗಿದೆ.

Related posts

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಅಳದಂಗಡಿ ಶಾಖೆಯ 3ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆ

Suddi Udaya

ಪಡಂಗಡಿ ಶಾಲೆಯ ಪಕ್ಕದಲ್ಲಿರುವ ಮರಕ್ಕೆ ಸಿಡಿಲು ಬಡಿತ

Suddi Udaya

ರಾಷ್ಟ್ರ ಮಟ್ಟದ ವಿದ್ಯಾ ಭಾರತಿ ಗಣಿತ ಮಾದರಿ ಸ್ಪರ್ಧೆಯಲ್ಲಿ ತಣ್ಣೀರುಪಂತದ ವಿನ್ಯಾ ಪಿ.ಸಿ ಪ್ರಥಮ

Suddi Udaya

ಎಸ್‌ಡಿಎಂ ಪಾಲಿಟೆಕ್ನಿಕ್ ಅಂತಿಮ ವರ್ಷದ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಉಜಿರೆ ಪಂಚಾಯತ್‌ನ ಎಂಆರ್‌ಎಫ್ ಘಟಕಕ್ಕೆ ಭೇಟಿ

Suddi Udaya

ಕಲ್ಮಂಜ ದ.ಕ.ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತ ಸಂಭ್ರಮ: ಗುರುನಮನ ಕಾರ್ಯಕ್ರಮ

Suddi Udaya

ಅರಸಿನಮಕ್ಕಿ ಶಿವಾನಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಮಹಾಸಭೆ

Suddi Udaya
error: Content is protected !!