24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜೆಸಿಐ ಬೆಳ್ತಂಗಡಿಯ ಸದಸ್ಯರಿಗೆ ಜೆಸಿಐ ಅ್ಯಕ್ಷನ್ ಫ್ರೇಮ್ ವರ್ಕ್ ತರಬೇತಿ ಕಾರ್ಯಾಗಾರ

ಬೆಳ್ತಂಗಡಿ ತಾಲೂಕಿನಲ್ಲಿ ಜೆಸಿಐ ಬೆಳ್ತಂಗಡಿ ವತಿಯಿಂದ ಅಗತ್ಯ ಇರುವಲ್ಲಿಗೆ ಶಾಶ್ವತ ಯೋಜನೆ ಮಾಡುವ ಉದ್ದೇಶದಿಂದ
ಫೆಬ್ರವರಿ 17 ರಂದು ಜೇಸಿ ಸದಸ್ಯರಿಗೆ ಜೆಸಿಐ ಅ್ಯಕ್ಷನ್ ಫ್ರೇಮ್ ವರ್ಕ್ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದ್ದು ಜೇಸಿ ರಾಷ್ಟ್ರೀಯ ತರಬೇತುದಾರ ಮಂಗಳೂರಿನ ಜೇಸಿ ದೀಪಕ್ ರಾಜ್ ಇವರು ತರಬೇತಿಯನ್ನು ನಡೆಸಿಕೊಟ್ಟರು.

ತಾಲೂಕಿನಲ್ಲಿ ಯಾವ ಸಮಸ್ಯೆ ಇದೆ ಅದಕ್ಕೆ ಜೆಸಿಐ ಬೆಳ್ತಂಗಡಿ ಇಂದ ಯಾವ ಪರಿಹಾರ ಮಾಡಬಹುದು ಮತ್ತು ಯಾವ ಶಾಶ್ವತ ಯೋಜನೆಯಿಂದ ಸಾರ್ವಜನಿಕರಿಗೆ ಉಪಯೋಗ ಆಗಬಹುದು, ಪರಿಣಾಮಕಾರಿಯಾಗಬಲ್ಲುದು ಎಂಬುದರ ಬಗ್ಗೆ ಸವಿಸ್ತಾರವಾಗಿ ತರಬೇತಿಯನ್ನು ನಡೆಸಿಕೊಟ್ಟರು. ಜೆಸಿಐ ಬೆಳ್ತಂಗಡಿ ಅಧ್ಯಕ್ಷೆ ಜೇಸಿ ಆಶಾಲತಾ ಪ್ರಶಾಂತ್ ಇವರು ಸಭಾಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಜೇಸಿ ಅರುಣಾ ಜಯರಾಜ್ ಕಾರ್ಯಕ್ರಮವನ್ನು ಸಂಯೊಜಿಸಿದರು. ಜೇಸಿ ರಜತ್ ಮೋರ್ತಾಜೆ ತರಬೇತುದಾರರನ್ನು ಪರಿಚಯಿಸಿದರು. ಕಾರ್ಯದರ್ಶಿ ಶೈಲೇಶ್ ಕೆ ಇವರು ವಂದಿಸಿದರು.


ತರಬೇತಿ ಕಾರ್ಯಕ್ರಮದಲ್ಲಿ ಮಹಿಳಾ ಜೇಸಿ ಸಂಯೋಜಕಿ ಚಿತ್ರಪ್ರಭ , ಜೂನಿಯರ್ ಜೇಸಿ ಅಧ್ಯಕ್ಷೆ ದೀಪ್ತಿ ಕುಲಾಲ್, ನಿಕಟ ಪೂರ್ವಾಧ್ಯಕ್ಷರಾದ ರಂಜಿತ್ ಎಚ್‌ಡಿ ಮತ್ತು ಪೂರ್ವಾಧ್ಯಕ್ಷರು, ಜೇಸಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Related posts

ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭೀಷೇಕ ‘ಶ್ರೀಮುಖ ಪತ್ರಿಕೆ’ ಬಿಡುಗಡೆ

Suddi Udaya

ಜಿನಭಜನಾ ಸ್ಪರ್ಧೆ :ಮಂಗಳೂರು ವಲಯ ಮಟ್ಟದಲ್ಲಿ ಅಳದಂಗಡಿ ತಂಡ ತೃತೀಯ ಸ್ಥಾನ

Suddi Udaya

ಶುಲ್ಕ ಪಾವತಿ ಮಾಡದ ಮನೆಯವರ ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸಿದ ಇಂದಬೆಟ್ಟು ಗ್ರಾಮ ಪಂಚಾಯತ್

Suddi Udaya

ಮಡಂತ್ಯಾರು ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಹೃದಯಾಘಾತದಿಂದ ನಿಧನ

Suddi Udaya

ತುಳುನಾಡ ಪೊರ್ಲು ಸೇವಾ ಟ್ರಸ್ಟ್ ವತಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ರೂ. 20 ಸಾವಿರ ಹಸ್ತಾಂತರ

Suddi Udaya

ಪುದುವೆಟ್ಟುಶ್ರೀ.ಧ.ಮಂ.ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

Suddi Udaya
error: Content is protected !!