25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಮಲೆಕುಡಿಯರಿಗೆ ಅವಕಾಶ ನೀಡದೆ ಇದ್ದಲ್ಲಿ ಕ್ಷೇತ್ರದಲ್ಲಿ ಚಾಕರಿ ಕೆಲಸ ಮತ್ತು ರಥ ಕಟ್ಟುವ ಕೆಲಸವನ್ನು ನಿಲ್ಲಿಸ ಬೇಕಾದೀತು: ಜಿಲ್ಲಾ ಮಲೆಕುಡಿಯ ಸಂಘ

ಮಲೆಕುಡಿಯ ಸಮುದಾಯ ಕುಕ್ಕೆ ಮತ್ತು ಲಿಂಗ ಎಂಬ ದೈವಿ ಪುರುಷರಿಂದ ಸ್ಥಾಪಿಸಲ್ಪಟ್ಟ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮರಥ ಕಟ್ಟುವುದರಿಂದ ಹಿಡಿದು ಪಂಚ ಪರ್ವ ಸೇವೆಗಳಲ್ಲಿ ಕೂಡ ಮಲೆಕುಡಿಯ ಸಮುದಾಯದವರು ಭಕ್ತಿ ಶ್ರದ್ಧೆಯಿಂದ ಸೇವೆಯನ್ನು ಮಾಡುತ್ತಿದ್ದು. ಪ್ರತಿ ಬಾರಿಯೂ ಮಲೆಕುಡಿಯ ಸಮುದಾಯಕ್ಕೆ ಆಡಳಿತ ಮಂಡಳಿಯಲ್ಲಿ ಒಂದು ಸ್ಥಾನವನ್ನು ನೀಡಲಾಗುತ್ತಿತ್ತು.

ಪ್ರಸ್ತುತ ಮಾನ್ಯ ಉಸ್ತುವಾರಿ ಸಚಿವರು ಶಿಫಾರಸ್ಸು ಮಾಡಿದ ಪಟ್ಟಿಯಲ್ಲಿ ಮಲೆಕುಡಿಯ ಸಮುದಾಯದವರ ಹೆಸರು ಇಲ್ಲದೆ ಇರುವುದು ಆಘಾತವನ್ನುಂಟು ಮಾಡಿದೆ . ಸಂಬಂಧ ಪಟ್ಟ ಇಲಾಖೆ ಮತ್ತು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಮಲೆಕುಡಿಯ ಸಮುದಾಯದವರಿಗೆ ಒಂದು ಸ್ಥಾನವನ್ನು ಕೊಡಬೇಕು. ಒಂದು ವೇಳೆ ಸಮುದಾಯವನ್ನು ಕಡೆಗಣಿಸಿ ಸರ್ಕಾರ ನಮ್ಮ ಭಾವನೆಗಳಿಗೆ ಘಾಸಿಗೊಳಿಸುವ ಪ್ರಯತ್ನವನ್ನು ಮಾಡಿದರೆ. ಕ್ಷೇತ್ರದಲ್ಲಿ ಸಮುದಾಯ ಚಾಕರಿ ಮಾಡುವುದನ್ನು ನಿಲ್ಲಿಸಿ ದೇವಸ್ಥಾನದ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಹರೀಶ್ ಎಳನೀರ್ ಹಾಗೂ ಪ್ರಧಾನ ಕಾರ್ಯದರ್ಶಿ ಜಯೇಂದ್ರ ನಿಡ್ಲೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಮುಗುಳಿ ಅಂಗನವಾಡಿ ಕೇಂದ್ರದಲ್ಲಿ ಎಲ್.ಕೆ.ಜಿ ಮತ್ತು ಯುಕೆಜಿ ತರಗತಿಗಳ ಉದ್ಘಾಟನೆ

Suddi Udaya

ಗಾಳಿ ಮಳೆಗೆ ಚಲಿಸುತ್ತಿದ್ದವಾಹನ ಮೇಲೆ ಬಿದ್ದ ಮರದ ಗೆಲ್ಲು

Suddi Udaya

ಬಾರ್ಯ ಮಂಡಲದ ಹಿಂದೂ ಸಂಗಮ

Suddi Udaya

ಉಜಿರೆ ಅನುಗ್ರಹ ಪೂರ್ವ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಸುದ್ದಿ ಉದಯ ಪತ್ರಿಕೆ ಹಾಗೂ ದೀಪಾವಳಿ ವಿಶೇಷಾಂಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಚಿತ್ರನಟಿ ಶ್ರುತಿ

Suddi Udaya

ಎ.28-ಮೇ 3: ಮೊಗ್ರು ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ವತಿಯಿಂದ ಬೇಸಿಗೆ ಶಿಬಿರ ಹಾಗೂ ಯೋಗ ಶಿಬಿರ

Suddi Udaya
error: Content is protected !!