September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಗಮಕ ವಾಚನ

ಬೆಳ್ತಂಗಡಿ ಸರಕಾರಿ ಜೂನಿಯರ್ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ 8ನೇ ಮತ್ತು ಒಂಭತ್ತನೇ ತರಗತಿಯ ಮಕ್ಕಳಿಗಾಗಿ 10ನೇ ತರಗತಿಯ ಪಠ್ಯ ಭಾಗ ‘ಕರ್ಣ ಭೇದನ ‘ವನ್ನು ಗಮಕಿ ಮಧೂರು ವಿಷ್ಣು ಪ್ರಸಾದ ಕಲ್ಲೂರಾಯ ವಾಚನ ಮಾಡಿ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯ ವ್ಯಾಖ್ಯಾನ ಮಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡಿದ ದ.ಕ ಜಿಲ್ಲ ಗಮಕ ಕಲಾಪರಿಷತ್ ಅಧ್ಯಕ್ಷ ಮೋಹನ ಕಲ್ಲೂರಾಯರು ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ತರಗತಿಯನ್ನು ತೆಗೆದುಕೊಂಡರು. ಕಾರ್ಯದಕ್ಷತೆ, ಶ್ರದ್ಧೆ, ಶ್ರಮ, ಗುರು ಹಿರಿಯರಲ್ಲಿ ಗೌರವ, ಒಳ್ಳೆಯ ವ್ಯಕ್ತಿತ್ವದ ನಡವಳಿಕೆ, ದೇಶಭಕ್ತಿ, ಪರೋಪಕಾರ ಮೊದಲಾದ ವಿಚಾರಗಳ ಬಗ್ಗೆ ದೃಷ್ಟಾಂತವನ್ನು ನೀಡಿ ಮಕ್ಕಳಿಗೆ ಸತ್ಪ್ರೇರಣೆ ನೀಡಿದರು.

ಶಾಲಾ ಮುಖ್ಯಸ್ಥೆ ಶ್ರೀಮತಿ ಪೂರ್ಣಿಮಾ ಉಪಾಧ್ಯಾಯ ಸ್ವಾಗತಿಸಿ, ಕನ್ನಡ ಅಧ್ಯಾಪಿಕೆ ಪೂರ್ಣಿಮಾ ಕೆ ಕೆ ವಂದಿಸಿದರು . ಪಿ ಟಿ ಟೀಚರ್ ಕುಮುದ ಕಾರ್ಯಕ್ರಮ ನಿರೂಪಿಸಿದರು.

Related posts

ಆರಂಬೋಡಿ: ಪಾಲ್ಯ ನಿವಾಸಿ ಓಡಿ ಕೊರಗ ನಿಧನ

Suddi Udaya

ಪುನರ್ವಸು 2.0 – ಇಂದ್ರಿಯ ಆರೋಗ್ಯವನ್ನು ಮುನ್ನೆಲೆಗೆ ತರುವ ಅಂತಾರಾಷ್ಟ್ರೀಯ ಆಯುರ್ವೇದ ಸಮ್ಮೇಳನ

Suddi Udaya

ಮಾಡ ಪ್ರೀಮಿಯರ್ ಲೀಗ್ – ಶಾರದಾಂಭ ಕ್ರಿಕೆಟರ್ಸ್ ಪ್ರಥಮ

Suddi Udaya

ದ.ಕ ಜಿಲ್ಲಾ ಪ.ಪೂ ಕಾಲೇಜುಗಳ ಸಂಸ್ಕೃತ ಭಾಷಾ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಡಾ. ಪ್ರಸನ್ನಕುಮಾರ ಐತಾಳ್ ಆಯ್ಕೆ

Suddi Udaya

ವಂದೇ ಮಾತರಂ’ ನನ್ನ ಸೇವೆ ದೇಶಕ್ಕಾಗಿ.. ನೇತ್ರಾವತಿ ನದಿ ಸ್ವಚ್ಛತಾ ಕಾರ್ಯಕ್ರಮ ಆರಂಭ : ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ ಸೇರಿದಂತೆ ಹಲವು ಸಂಘಟನೆಗಳ ಸಾಥ್

Suddi Udaya

ಶ್ರೀ ಉಳ್ಳಾಲ್ತಿ ಗೆಳೆಯರ ಬಳಗದಿಂದ ಸಹಾಯ ಧನ

Suddi Udaya
error: Content is protected !!