
ಬೆಳ್ತಂಗಡಿ: ರಾಜ್ಯ ಪ್ರಶಸ್ತಿ ಪುರಸ್ಕೃತ ಸಂದೇಶ್ ಮದ್ದಡ್ಕ ಇವರ ನೇತೃತ್ವದಲ್ಲಿ ಪೆರ್ಮುಡ ಶ್ರೀ ಜಗದೀಶ್ವರ ಭಜನಾ ಮಂಡಳಿಯ ಸದಸ್ಯರು ಹಾಗೂ ಸವಣಾಲು ಪಲ್ಗುಣಿ ಭಜನಾ ತಂಡದ ಸದಸ್ಯರಿಂದ ಎ. 6 ರಂದು ಬೆಂಗಳೂರಿನ ಶ್ರೀ ಪ್ರಸನ್ನ ಕಾರ್ಯಸಿದ್ದಿ ಬೈಲಾಂಜನೇಯ ದೇವಾಲಯ ದಾಸನಪುರ ಇಲ್ಲಿ ವಿಶೇಷ ಭಜನಾ ಕಾರ್ಯಕ್ರಮ ನಡೆಯಲಿದೆ.

ಪೆರ್ಮುಡ ಶ್ರೀ ಜಗದೀಶ್ವರ ಭಜನಾ ಮಂಡಳಿಯ ನೇತೃತ್ವ ವಹಿಸಿದ್ದ ಭಜನಾ ಮಂಡಳಿಯ ಅಧ್ಯಕ್ಷ ವರದ ಕುಲಾಲ್ ಭಜನಾ ತರಬೇತುದಾರಾದ ಆಕಾಶ್ ಗುರುವಾಯನಕೆರೆ, ಗಗನ್ ಪಣೆಜಾಲ್, ಸುಶಾಂತ್ ಪಣೆಜಾಲ್ ಹಾಗೂ ಭಜನಾ ತಂಡದ ಸದಸ್ಯರು ಕಾರ್ಯಕ್ರಮ ನೀಡಲಿದ್ದಾರೆ. ಹಾಗೂ ಪಲ್ಗುಣಿ ಭಜನಾ ತಂಡದ ನೇತ್ರತ್ವ ವಹಿಸಿದ್ದ ಭಜನಾ ತಂಡದ ಅಧ್ಯಕ್ಷರಾದ ಜಯಲಕ್ಷ್ಮಿ ಹಾಗೂ ಪಲ್ಗುಣಿ ಮಹಿಳಾ ತಂಡದ ಸದಸ್ಯರು ಕಾರ್ಯಕ್ರಮ ನೀಡಲಿದ್ದಾರೆ.













