July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮುಳಿಕ್ಕಾರುನಲ್ಲಿ ದೈವ ವ್ಯಾಘ್ರ ಚಾಮುಂಡಿ, ಪರಿವಾರ ದೈವಗಳ ನೇಮೋತ್ಸವ

ಧರ್ಮಸ್ಥಳ : ಇಲ್ಲಿಯ ಮುಳಿಕ್ಕಾರು ಬೈಲಿನ ಶ್ರೀ ವ್ಯಾಘ್ರ ಚಾಮುಂಡಿ ಹಾಗೂ ಪರಿವಾರ ದೈವಗಳ ನೇಮೋತ್ಸವ ಸಂಭ್ರಮದಿಂದ ಸಂಪನ್ನಗೊಂಡಿತ್ತು.

ಎ.10 ರಂದು ಬೆಳಿಗ್ಗೆ ಮುಳಿಕ್ಕಾರು ನಿಡ್ಲೆ ಮಧ್ಯೆ ಮಾಡಾಂಗಳ್ ಎಂಬಲ್ಲಿ ಹರಿಯುತ್ತಿರುವ ಸಂಪಿಗೆ ನದಿ ಮದ್ಯದಲ್ಲಿರುವ ಬೆರ್ಮೆರ್ ( ನಾಗ ಬ್ರಹ್ಮ) ಸಾನಿಧ್ಯ ದಲ್ಲಿ ನಾಗ ಬ್ರಹ್ಮದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ನಂತರ ಕಲ್ಲಾಜೆ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಪಿಗೆ ನದಿ ತಟದಲ್ಲಿ ವನ ಭೋಜನ ನಡೆಯಿತು. ರಾತ್ರಿ 9 ಗಂಟೆಗೆ ಕಲ್ಲಾಜೆ ಶ್ರೀ ಪಿಲಿ ಚಾಮುಂಡಿ ದೈವಸ್ಥಾನದಿಂದ ದೈವಗಳ ವೈಭವದ ಭಂಡಾರ ಹೊರಟು ಕಾಡಿನ ಮದ್ಯೆ ಇರುವ ನೆಲ್ಲಿಕಟ್ಟೆ ಎಂಬಲ್ಲಿ ನೇಮೋತ್ಸವ ಜರಗಿತು.

ಈ ಸಂದರ್ಭದಲ್ಲಿ ಗ್ರಾಮದ ಗುತ್ತಿನರಾರಾರು ಸೇರಿದಂತೆ ದೈವಸ್ಥಾನ ಸಮಿತಿ ಸರ್ವ ಸದಸ್ಯರು, ಊರ ಪ್ರಮುಖರು, ಹಾಗೂ ಊರ, ಪರವೂರ ಭಕ್ತ ಭಾಂದವರು ಉಪಸ್ಥಿತರಿದ್ದರು.

Related posts

ಬಿ.ಸಿ ರೋಡ್‌ನಲ್ಲಿ ಯುವತಿಯ ಬರ್ಬರ ಹತ್ಯೆ ಪ್ರಕರಣ; ಆರೋಪಿಗೆ ಕಠಿಣ ಕಾನೂನು ಕ್ರಮ ಜರುಗಿಸಲು ಸಂಸದ ಕ್ಯಾ. ಚೌಟರಿಂದ ಪೊಲೀಸ್ ಇಲಾಖೆಗೆ ಆಗ್ರಹ

Suddi Udaya

ಗರ್ಡಾಡಿ ಜನಮಂಗಳ ಕಾರ್ಯಕ್ರಮದಡಿಯಲ್ಲಿ ವೀಲ್ ಚೇರ್ ವಿತರಣೆ

Suddi Udaya

ಕರುಂ ಬಿತ್ತಿಲು ಸಂಗೀತ ಶಿಬಿರ ಸಮಾರೋಪ

Suddi Udaya

ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಅವರಿಗೆ ಶಿಷ್ಯಂದಿರಿಂದ ಬೀಳ್ಕೊಡುಗೆ- ಸನ್ಮಾನ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಬ್ಯಾಂಕ್ ಆಫ್ ಬರೋಡದ ಎಜಿಎಂ ಅಮಿತ್ ಶೆಟ್ಟಿ ದಂಪತಿ ಭೇಟಿ

Suddi Udaya

ಹುಣ್ಸೆಕಟ್ಟೆ: ಶ್ರೀ ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ 26ನೇ ಸಾಮೂಹಿಕ ಸತ್ಯನಾರಾಯಣ ಪೂಜೆ

Suddi Udaya
error: Content is protected !!