April 15, 2025
Uncategorized

ಮುಂಡಾಜೆ: ಶಾರ್ಟ್ ಸರ್ಕ್ಯೂಟ್ – ಕೇಬಲ್ ಗೆ ಹಾನಿ


ಬೆಳ್ತಂಗಡಿ: ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ದೂರವಾಣಿ ಕೇಬಲ್ ಹೊತ್ತಿ ಉರಿದ ಘಟನೆ ಮುಂಡಾಜೆಯಲ್ಲಿ ಭಾನುವಾರ ನಡೆದಿದೆ.
ಇಲ್ಲಿಯ ಮಲ್ಲಿಕಟ್ಟೆ ಪರಿಸರದ ದೂರವಾಣಿ ಸಂಪರ್ಕದ ಕೇಬಲ್ ಗಳನ್ನು ವಿದ್ಯುತ್ ಕಂಬಕ್ಕೆ ಅಳವಡಿಸಲಾಗಿದ್ದು, ಘಟನೆಯಲ್ಲಿ ಸುಮಾರು 20 ಮೀ.ನಷ್ಟು ಕೇಬಲ್ ಸುಟ್ಟು ಹೋಗಿದ್ದು ಕಂಬದ ಭಾಗವು ಕರಟಿದೆ.
ಸ್ಥಳೀಯರು ತಕ್ಷಣ ಮೆಸ್ಕಾಂಗೆ ಮಾಹಿತಿ ನೀಡಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ತಿಳಿಸಿ ಬಳಿಕ ಬೆಂಕಿಯನ್ನು ಆರಿಸಿದರು.
ಈ ಪ್ರದೇಶದಲ್ಲಿ ಅರಣ್ಯ ಭಾಗ,ಮನೆಗಳು ಇದ್ದು ಸ್ಥಳೀಯರ ಸಕಾಲಿಕ ಸ್ಪಂದನೆಯಿಂದ ಹೆಚ್ಚಿನ ಅಪಾಯ ಉಂಟಾಗುವುದು ತಪ್ಪಿದೆ.

Related posts

ಸುಲ್ಕೇರಿಯಲ್ಲಿ ಭಾರಿ ಮಳೆ: ಸಂಚಾರ ಅಸ್ತವ್ಯಸ್ತ

Suddi Udaya

ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಹಾಸಭೆ: ಇಂಜಿನಿಯರ್ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

Suddi Udaya

ವೇಣೂರು: ಲಯನ್ಸ್ ಕ್ಲಬ್ ನ ಅಧ್ಯಕ್ಷರಾಗಿ ನಿರಂಜನ್ ಕೆ.ಎಸ್, ಕಾರ್ಯದರ್ಶಿಯಾಗಿ ದಯಾನಂದ ಭಂಡಾರಿ ಆಯ್ಕೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸತ್ಯನಪಲ್ಕೆ ಶಾಲೆ ಮಕ್ಕಳಿಗೆ ಊಟದ ತಟ್ಟೆ ವಿತರಣೆ

Suddi Udaya

ನಿಡ್ಲೆ: ಪಿಲಿಕಜೆ ನಿವಾಸಿ ಸುಗುಣ ನಿಧನ

Suddi Udaya

ಮೊಗ್ರು ಶ್ರೀರಾಮ್ ಫ್ರೆಂಡ್ಸ್ ಕ್ಲಬ್ (ರಿ.) ಹಾಗೂ ಶ್ರೀರಾಮ್ ಶಿಶುಮಂದಿರ ಅಲೆಕ್ಕಿ – ಮುಗೇರಡ್ಕ ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ರಂಗೋಲಿ ಸ್ಪರ್ಧೆ

Suddi Udaya
error: Content is protected !!