ಗುರುವಾಯನಕೆರೆ: ಭಗವಾನ್ ಶ್ರೀ ೧೦೦೮ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ ಕಾರ್ಮಣ್ಣು ಸಂಸೆ ಇದರ ಪಂಚಕಲ್ಯಾಣದ ಪ್ರಯುಕ್ತ ಕಾರ್ಮಣ್ಣು ಕುಟುಂಬದವರ ಪ್ರಾಯೋಜಕತ್ಚದಲ್ಲಿ ನಿರ್ಮಾಣಗೊಂಡ, ಶ್ರೀಮತಿ ಕಾವ್ಯಶ್ರೀ ಆಜೇರು ಇವರು ಹಾಡಿರುವ “ಮಲೆನಾಡ ಮಡಿಲಿನಲ್ಲಿ. . .” ಎಂಬ ಜಿನಭಕ್ತಿಗೀತೆಯನ್ನು, ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಚೇರ್ಮನ್ ಸುಮಂತ್ ಜೈನ್ ಇವರ ನೇತೃತ್ವದಲ್ಲಿ ಲೋಕಾರ್ಪಣೆಗೊಂಡಿತು.
ಈ ಸಂದರ್ಭದಲ್ಲಿ ಸುಮಂತ್, ಶ್ರೀಮತಿ ಶ್ವೇತಾ ಹಾಗೂ ಶ್ರೀ ಮಲ್ಲಿನಾಥ ಜೈನ್ ಇವರನ್ನು ಗೌರವಿಸಲಾಯಿತು. ಶ್ರೀಮತಿ ಶ್ವೇತಾ ದಿಲೀಪ್ ಇವರ ಸಾಹಿತ್ಯಕ್ಕೆ, ಹಿಮ್ಮೇಳದಲ್ಲಿ ಮದ್ದಳೆಯಲ್ಲಿ ಶ್ರೀ ಜನಾರ್ಧನ ತೋಳ್ಪಾಡಿತ್ತಾಯ, ಚೆಂಡೆಯಲ್ಲಿ ಚಂದ್ರಶೇಖರ, ರೆಕಾರ್ಡಿಂಗ್ ನಲ್ಲಿ ಸೌಂಡ್ ಟ್ರಾಕ್ ಕಲ್ಲಡ್ಕ ಇವರು ಸಹಕರಿಸಿದರು. ಶ್ರೀ ಬಿ. ಭುಜಬಲಿ ಧರ್ಮಸ್ಥಳ ಇವರು ಕಾರ್ಯಕ್ರಮವನ್ನು ಹಾಗೂ ಹಾಡುಗಳನ್ನು ಸಂಯೋಜಿಸಿದರು.
ಶ್ರೀ ಮಲ್ಲಿನಾಥ್ ಜೈನ್, ಶ್ರೀ ಧರ್ಮರಾಜ್ ಧರ್ಮಸ್ಥಳ, ಎಕ್ಸೆಲ್ ನ ಶ್ರೀ ಶಾಂತಿನಾಥ್ ಜೈನ್, ಪ್ರಾಚಾರ್ಯರು, ವಿದ್ಯಾ ರ್ಥಿನಿಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು . ಶ್ರೀಯುತ ಮಲ್ಲಿನಾಥ್ ಜೈನ್ ಅವರು ಕಾರ್ಯಕ್ರಮ ನಿರೂಪಿಸಿದರು . ಶ್ರೀ ಪ್ರಕಾಶ್ ಇವರು ಸಹಕರಿಸಿದರು.