July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ವೇಣೂರು ಜಿನಪ್ರಸಾದ ಕಾಂಪ್ಲೆಕ್ಸ್‌ನಲ್ಲಿ ಟಿ.ಸಿ.ಎಲ್ ಲಾಂಡ್ರಿ ಸರ್ವಿಸ್ ಉದ್ಘಾಟನೆ

ವೇಣೂರು: ಆರಂಬೋಡಿಯಲ್ಲಿರುವ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಟೋಟಲ್ ಕ್ಲೀನ್ ಲ್ಯಾಂಡ್ರಿ ಸರ್ವಿಸ್( ಟಿ.ಸಿ.ಎಲ್ ಲಾಂಡ್ರಿ ಸರ್ವಿಸ್) ಬೃಹತ್ ಘಟಕದ ಶಾಖೆ ವೇಣೂರು ಮುಖ್ಯ ರಸ್ತೆಯ ಜಿನಪ್ರಸಾದ ಕಾಂಪ್ಲೆಕ್ಸ್‌ನ ಮಹಡಿಯಲ್ಲಿ ಮೇ 20ರಂದು ಶುಭಾರಂಭಗೊಂಡಿತು.

ವೇಣೂರಿನ ನಮನ ಕ್ಲಿನಿಕ್‌ನ ಜನಪ್ರಿಯ ವೈದ್ಯರಾದ ಡಾ. ಶಾಂತಿಪ್ರಸಾದ್‌ರವರು ಶಾಖೆಯನ್ನು ಉದ್ಘಾಟಿಸಿ, ಈ ಸೇವೆ ನಮ್ಮ ಊರಿಗೆ ಕಲ್ಪಿಸಿದ ಮಾಲಕರನ್ನು ಅಭಿನಂದಿಸಿ ಶುಭಹಾರೈಸಿದರು.
ವಕ್ಕಾಡಿಗೋಳಿ ಜುಮ್ಮಾ ಮಸೀದಿಯ ಖತೀಬರಾದ ಮುಹಮ್ಮದ್ ನಿಯಾಝ್ ಫೈಝಿಯವರು ಪ್ರಾರ್ಥನೆ ನೆರವೇರಿಸಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಪ್ರಸಾದ್ ಜೈನ್, ರಿಯಾಂತ್, ವಿ.ಕೆ ಮಹಮ್ಮದ್ ಅಲ್ತಾಫ್, ಖಾಲಿದ್ ಕಲ್ಲಡ್ಕ, ಹೆಚ್.ಎ ರಹೀಮಾನ್ ವಕ್ಕಾಡಿಗೋಳಿ, ಸದಾಶಿವ ಭಂಡಾರಿ, ಹರೀಶ್ ಕುಮಾರ್ ಪೊಕ್ಕಿ, ಹರೀಶ್ ನಾಯಕ್, ದಯಾನಂದ ಹೆಗ್ಡೆ, ಆದಂ ನಡ್ತಿಕಲ್, ಪ್ರಶಾಂತ್ ನಾಯಕ್, ಅಂಡಿಂಜೆ ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಶಿವಶಂಕರ್ ಭಟ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಘಟಕದ ಮಾಲಕರಾದ ಎಸ್. ಮಹಮ್ಮದ್ ಅವರು ಸ್ವಾಗತಿಸಿ, ಅತಿಥಿಗಳನ್ನು ಗೌರವಿಸಿ, ಎಲ್ಲರ ಸಹಕಾರ ಕೋರಿದರು. ಪತ್ರಕರ್ತ ಹೆಚ್. ಮಹಮ್ಮದ್ ವೇಣೂರು ಕಾರ್ಯಕ್ರಮ ನಿರೂಪಿಸಿದರು. ಅಕ್ಬರ್ ವೇಣೂರು ವಂದಿಸಿದರು.

Related posts

ಪುತ್ತೂರಿನ ವಿವೇಕಾನಂದ ಪ.ಪೂ. ಕಾಲೇಜಿಗೆ ಅತ್ಯಧಿಕ ರ‍್ಯಾಂಕ್‌ಗಳು

Suddi Udaya

ಬಂದಾರು-ಕುರಾಯ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವ ಆರಂಭ

Suddi Udaya

ಉಜಿರೆ: ಕೊಳ್ತಿಗೆ ಯಕ್ಷಯಾನ 60 ಗ್ರಂಥ ಲೋಕಾರ್ಪಣೆ-ಸನ್ಮಾನ-ತಾಳಮದ್ದಳೆ

Suddi Udaya

ಧರ್ಮಸ್ಥಳ : ಮುಳಿಕ್ಕಾರು ನಿವಾಸಿ ವಿನುತ ನೇಣುಬಿಗಿದು ಆತ್ಮಹತ್ಯೆ

Suddi Udaya

ಮಚ್ಚಿನ : ಬಳ್ಳಮಂಜ ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

Suddi Udaya

ಲಾಯಿಲ ಗ್ರಾ.ಪಂ ಮಾಜಿ ಸದಸ್ಯ ಜಗನ್ನಾಥ ನಿಧನ

Suddi Udaya
error: Content is protected !!