28 C
ಪುತ್ತೂರು, ಬೆಳ್ತಂಗಡಿ
August 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಟ್ಲಡ್ಕ ಮದ್ರಸದಲ್ಲಿ ಪುಸ್ತಕ ವಿತರಣೆ ಕಾರ್ಯಕ್ರಮ

ಬಂದಾರು: ಇಲ್ಲಿನ ಬಟ್ಲಡ್ಕ ಪೇರಲ್ತಪಲಿಕೆ ಮದ್ರಸ ಹಾಗೂ ಬಟ್ಲಡ್ಕ ಮದ್ರಸ ವಿದ್ಯಾರ್ಥಿಗಳಿಗೆ ಸಲೀಂ ಬಟ್ಲಡ್ಕ ಇವರ ಮರಣ ಹೊಂದಿದ ತಂದೆಯ ಹೆಸರಿನಲ್ಲಿ ಕಿತಾಬ್ ವಿತರಣೆ ಕಾರ್ಯಕ್ರಮ ಬಹು| ಆರಿಫ್ ಮದನಿ ಖತೀಬ್ ಜುಮಾ ಮಸೀದಿ ಬಟ್ಲಡ್ಕ ಇವರ ನೇತೃತ್ವದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಜುಮಾ ಮಸೀದಿ ಬಟ್ಲಡ್ಕ ಇದರ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಬಟ್ಲಡ್ಕ ಹಿತವಚನ ನುಡಿದರು. ಅಧ್ಯಕ್ಷ ಮುಹಮ್ಮದ್ ಬಂದಾರು ಸಾಂದರ್ಭಿಕವಾಗಿ ಮಾತನಾಡಿದರು. ಖತೀಬ್ ಉಸ್ತಾದ್ ಬಹು| ಮುಹಮ್ಮದ್ ಆರಿಫ್ ಮದನಿ ಉಚಿತವಾಗಿ ನೀಡಿದ (ಪುಸ್ತಕ)ಕಿತಾಬ್ ಸಲೀಂ ಬಟ್ಲಡ್ಕ ಇವರ ತಂದೆಗೆ ಪರಲೋಕದಲ್ಲಿ ಉನ್ನತ ಸ್ಥಾನ ನೀಡಲಿ ಎಂದು ದುವಾ ನೆರವೇರಿಸಿದರು. ಮಸೀದಿ ಮದ್ರಸ ಇನ್ನಿತರ ಯಾವುದೇ ಕಾರ್ಯಗಳಿಗೆ ಮುಂದೆ ನಿಂತು ಸಹಾಯ ನೀಡುವ ಸಲೀಂ ಬಟ್ಲಡ್ಕ ಇವರನ್ನು ಖತೀಬರು ಅಭಿನಂದಿಸಿದರು.


ಕಾರ್ಯಕ್ರಮದಲ್ಲಿ ಜಮಾಅತ್ ಕೋಶಾಧಿಕಾರಿ ಈ‌ಸುಬು ಪೇರಲ್ತಪಲಿಕೆ, ಅಬ್ದುಲ್ಲಾ ಬಟ್ಲಡ್ಕ, ಇಸ್ಮಾಯಿಲ್ ಬಟ್ಲಡ್ಕ ಹಾಗೂ ಎರಡು ಮದ್ರಸಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related posts

ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾಟ: ಉಜಿರೆಯ ಪ್ರತೀಕ್ ಶೆಟ್ಟಿ ರಿಗೆ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕಟಾ ವಿಭಾಗದಲ್ಲಿ ಕಂಚಿನ ಪದಕ

Suddi Udaya

ಮೈರೋಳ್ತಡ್ಕ ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ನಿಟ್ಟಡೆ ಕುಂಭಶ್ರೀ ಪ.ಪೂ. ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya

ಮೇ. 5-9: ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ರಾಜ್ಯ ಮಟ್ಟದಲ್ಲಿ ಕಪ್ಪು ಪಟ್ಟಿ ಧರಿಸಿ ಪಂಚಾಯತ್ ನೌಕರರ ಮುಂದುವರಿದ ಪ್ರತಿಭಟನೆ : ಗ್ರಾಮ ಪಂಚಾಯಿತಿ ನೌಕರರ ಸಮಸ್ಯೆಗಳ ಬಗ್ಗೆ ತಾರ್ಕಿಕ ಅಂತ್ಯ ನೀಡುವುದಾಗಿ ವಿಧಾನಸಭಾಧ್ಯಕ್ಷರ ಭರವಸೆ

Suddi Udaya

ಬಾರ್ಯ : ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ : ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya
error: Content is protected !!