ಬಂದಾರು: ಇಲ್ಲಿನ ಬಟ್ಲಡ್ಕ ಪೇರಲ್ತಪಲಿಕೆ ಮದ್ರಸ ಹಾಗೂ ಬಟ್ಲಡ್ಕ ಮದ್ರಸ ವಿದ್ಯಾರ್ಥಿಗಳಿಗೆ ಸಲೀಂ ಬಟ್ಲಡ್ಕ ಇವರ ಮರಣ ಹೊಂದಿದ ತಂದೆಯ ಹೆಸರಿನಲ್ಲಿ ಕಿತಾಬ್ ವಿತರಣೆ ಕಾರ್ಯಕ್ರಮ ಬಹು| ಆರಿಫ್ ಮದನಿ ಖತೀಬ್ ಜುಮಾ ಮಸೀದಿ ಬಟ್ಲಡ್ಕ ಇವರ ನೇತೃತ್ವದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಜುಮಾ ಮಸೀದಿ ಬಟ್ಲಡ್ಕ ಇದರ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಬಟ್ಲಡ್ಕ ಹಿತವಚನ ನುಡಿದರು. ಅಧ್ಯಕ್ಷ ಮುಹಮ್ಮದ್ ಬಂದಾರು ಸಾಂದರ್ಭಿಕವಾಗಿ ಮಾತನಾಡಿದರು. ಖತೀಬ್ ಉಸ್ತಾದ್ ಬಹು| ಮುಹಮ್ಮದ್ ಆರಿಫ್ ಮದನಿ ಉಚಿತವಾಗಿ ನೀಡಿದ (ಪುಸ್ತಕ)ಕಿತಾಬ್ ಸಲೀಂ ಬಟ್ಲಡ್ಕ ಇವರ ತಂದೆಗೆ ಪರಲೋಕದಲ್ಲಿ ಉನ್ನತ ಸ್ಥಾನ ನೀಡಲಿ ಎಂದು ದುವಾ ನೆರವೇರಿಸಿದರು. ಮಸೀದಿ ಮದ್ರಸ ಇನ್ನಿತರ ಯಾವುದೇ ಕಾರ್ಯಗಳಿಗೆ ಮುಂದೆ ನಿಂತು ಸಹಾಯ ನೀಡುವ ಸಲೀಂ ಬಟ್ಲಡ್ಕ ಇವರನ್ನು ಖತೀಬರು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಜಮಾಅತ್ ಕೋಶಾಧಿಕಾರಿ ಈಸುಬು ಪೇರಲ್ತಪಲಿಕೆ, ಅಬ್ದುಲ್ಲಾ ಬಟ್ಲಡ್ಕ, ಇಸ್ಮಾಯಿಲ್ ಬಟ್ಲಡ್ಕ ಹಾಗೂ ಎರಡು ಮದ್ರಸಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.













