28 C
ಪುತ್ತೂರು, ಬೆಳ್ತಂಗಡಿ
August 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಟ್ಲಡ್ಕ ಮದ್ರಸದಲ್ಲಿ ಪುಸ್ತಕ ವಿತರಣೆ ಕಾರ್ಯಕ್ರಮ

ಬಂದಾರು: ಇಲ್ಲಿನ ಬಟ್ಲಡ್ಕ ಪೇರಲ್ತಪಲಿಕೆ ಮದ್ರಸ ಹಾಗೂ ಬಟ್ಲಡ್ಕ ಮದ್ರಸ ವಿದ್ಯಾರ್ಥಿಗಳಿಗೆ ಸಲೀಂ ಬಟ್ಲಡ್ಕ ಇವರ ಮರಣ ಹೊಂದಿದ ತಂದೆಯ ಹೆಸರಿನಲ್ಲಿ ಕಿತಾಬ್ ವಿತರಣೆ ಕಾರ್ಯಕ್ರಮ ಬಹು| ಆರಿಫ್ ಮದನಿ ಖತೀಬ್ ಜುಮಾ ಮಸೀದಿ ಬಟ್ಲಡ್ಕ ಇವರ ನೇತೃತ್ವದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಜುಮಾ ಮಸೀದಿ ಬಟ್ಲಡ್ಕ ಇದರ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಬಟ್ಲಡ್ಕ ಹಿತವಚನ ನುಡಿದರು. ಅಧ್ಯಕ್ಷ ಮುಹಮ್ಮದ್ ಬಂದಾರು ಸಾಂದರ್ಭಿಕವಾಗಿ ಮಾತನಾಡಿದರು. ಖತೀಬ್ ಉಸ್ತಾದ್ ಬಹು| ಮುಹಮ್ಮದ್ ಆರಿಫ್ ಮದನಿ ಉಚಿತವಾಗಿ ನೀಡಿದ (ಪುಸ್ತಕ)ಕಿತಾಬ್ ಸಲೀಂ ಬಟ್ಲಡ್ಕ ಇವರ ತಂದೆಗೆ ಪರಲೋಕದಲ್ಲಿ ಉನ್ನತ ಸ್ಥಾನ ನೀಡಲಿ ಎಂದು ದುವಾ ನೆರವೇರಿಸಿದರು. ಮಸೀದಿ ಮದ್ರಸ ಇನ್ನಿತರ ಯಾವುದೇ ಕಾರ್ಯಗಳಿಗೆ ಮುಂದೆ ನಿಂತು ಸಹಾಯ ನೀಡುವ ಸಲೀಂ ಬಟ್ಲಡ್ಕ ಇವರನ್ನು ಖತೀಬರು ಅಭಿನಂದಿಸಿದರು.


ಕಾರ್ಯಕ್ರಮದಲ್ಲಿ ಜಮಾಅತ್ ಕೋಶಾಧಿಕಾರಿ ಈ‌ಸುಬು ಪೇರಲ್ತಪಲಿಕೆ, ಅಬ್ದುಲ್ಲಾ ಬಟ್ಲಡ್ಕ, ಇಸ್ಮಾಯಿಲ್ ಬಟ್ಲಡ್ಕ ಹಾಗೂ ಎರಡು ಮದ್ರಸಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related posts

ಎಸ್ ಡಿ ಎಮ್ ವಸತಿ ಪಿ ಯು ಕಾಲೇಜಿನ ವಿದ್ಯಾರ್ಥಿಗಳಿಂದ ಡ್ರಾಗನ್ ತೋಟಕ್ಕೆ ಶಿಕ್ಷಣ ಪ್ರವಾಸ

Suddi Udaya

ಬೆಳ್ತಂಗಡಿ : ಸರಕಾರಿ ನಿವೃತ್ತ ನೌಕರರ ಮತ್ತು ಹಿರಿಯ ನಾಗರಿಕರ ಸೇವಾ ಸಂಸ್ಥೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ

Suddi Udaya

ಕಳೆಂಜ ಗ್ರಾ,ಪಂ. ವ್ಯಾಪ್ತಿಯ ಬಿಜೆಪಿ ಶಕ್ತಿ ಕೇಂದ್ರದ ಸಭೆ

Suddi Udaya

ಸಾವ್ಯ : ಮರೆಜಾಲು ನಿವಾಸಿ ಸಂತೋಷ್ ನಿಧನ

Suddi Udaya

ಉಜಿರೆ : ಅನುಗ್ರಹ ಪದವಿ ಪೂರ್ವ ಕಾಲೇಜಿನಲ್ಲಿ ಕೌಶಲ್ಯ ಅಭಿವೃದ್ದಿ ತರಬೇತಿ ಕಾರ‍್ಯಕ್ರಮ

Suddi Udaya

ಮಿಯ್ಯಾರು ಶ್ರೀ ವನದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾಮಹೋತ್ಸವ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ರಂಗಪೂಜೆ

Suddi Udaya
error: Content is protected !!