July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

“ಸಿಂಧೂರ್” ಅರ್ಥಪೂರ್ಣವಾದ ಆಪರೇಷನ್: ಪೀತಾಂಬರ ಹೆರಾಜೆ

ಬೆಳ್ತಂಗಡಿ: ಹಲವಾರು ದಶಕಗಳಿಂದ ಭಾರತ ದೇಶದಲ್ಲಿ ಉಗ್ರವಾದಕ್ಕೆ ಪ್ರಚೋದನೆ ನೀಡುತ್ತಿದ್ದ ಪಾಕಿಸ್ತಾನ ಸರಕಾರ, ಸೈನಿಕರು, ಹಾಗೂ ಅವರಿಗೆ ಸಹಕರಿಸುತ್ತಿರುವ ಉಗ್ರರಿಂದಾಗಿ ಶಾಂತಿಪ್ರಿಯ ಭಾರತ ದೇಶದ ಆರ್ಥಿಕತೆಗೆ ಮತ್ತು ಕೋಮು ಸಾಮರಸ್ಯಕ್ಕೆ ಸವಾಲಾಗಿರುವ ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡುವ ಅಗತ್ಯ ಖಂಡಿತ ಇದೆ. ಉಗ್ರವಾದಕ್ಕೆ ಸಹಕರಿಸುವ ಪೋಷಿಸುವ ಯಾವುದೇ ಸರ್ಕಾರ ಅಥವಾ ಜನರು ಭೂಮಿಯಲ್ಲಿ ಬದುಕಲು ಯೋಗ್ಯರಲ್ಲ. ಉಗ್ರವಾದವನ್ನು ಬೇರು ಸಹಿತ ಮಟ್ಟ ಹಾಕಲು ಭಾರತೀಯರೆಲ್ಲರೂ ಜಾತಿ ಮತ ಪಂಥ ಭೇದ ಮರೆತು ಒಂದಾಗಲು ಇದೊಂದು ಸಕಾಲ.

ಪಾಕಿಸ್ತಾನದ ಜನರಿಗೆ ಉಣ್ಣಲು ಗತಿಯಿಲ್ಲದಿದ್ದರೂ ಭಯೋತ್ಪಾದನೆಯಲ್ಲಿ ನಿರತರಾಗಿರುವುದು ಒಂದು ಶಾಪ. ಭಯೋತ್ಪಾದನೆಯ ಸಂಪೂರ್ಣ ಉಚ್ಛಾಟನೆ ಆಗಲೇಬೇಕು ಪಾಕಿಸ್ತಾನ ನಿರ್ನಾಮ ಆಗಲೇಬೇಕು. ಏ. 22ರಂದು ಜಮ್ಮು ಕಾಶ್ಮೀರದ ಪೇಹಲ್ ಗಾಂ ನಲ್ಲಿ ನಡೆದ ಪಾಕಿಸ್ತಾನದ ಉಗ್ರರ ಪೈಶಾಚಿಕ ದಾಳಿಯ ನೆನಪಿಗಾಗಿ ನಡೆದ ಸಿಂಧೂರ ಆಪರೇಷನ್ ಅರ್ಥಪೂರ್ಣ. ಭಾರತೀಯ ಸೇನೆಗೆ ಅಭಿನಂದನೆಗಳು ಎಂದು ನಿವೃತ್ತ ಎಸ್.ಪಿ ಪೀತಾಂಬರ ಹೆರಾಜೆ ರವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್‌.ಇ)ಯಲ್ಲಿ ಶಾಲಾ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನಾ ಕಾರ್ಯಕ್ರಮ

Suddi Udaya

ಹಿಂದೂ ಸಮಾಜಕ್ಕೆ ಶಕ್ತಿಯಾಗಿರುವ ಎಡನೀರು ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಕಾರಿಗೆ ದಾಳಿ: ಸೂಕ್ತ ಭದ್ರತೆ ನೀಡಿ, ರಕ್ಷಣೆ ನೀಡಬೇಕೆಂದು ಸರಕಾರಕ್ಕೆ ಶಾಸಕ ಹರೀಶ್ ಪೂಂಜ ಒತ್ತಾಯ

Suddi Udaya

ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ “ಕ್ಷೀರಾಬ್ಧಿ” ಉದ್ಘಾಟನೆ

Suddi Udaya

ಬಂದಾರು: ಒಟೆಚ್ಚಾರ್ ನಲ್ಲಿ ಕಾಡಾನೆ ದಾಳಿ-ಅಪಾರ ನಷ್ಟ

Suddi Udaya

ನಾವೂರು: ಜನತಾ ಕಾಲನಿಯಲ್ಲಿ ಗುಡ್ಡೆ ಕುಸಿತ ಹಾನಿ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಚಿನ್ಮಯ್ ರಿಗೆ ಸನ್ಮಾನ

Suddi Udaya
error: Content is protected !!