
ಬೆಳ್ತಂಗಡಿ: ಕೊಕ್ಕಡದಲ್ಲಿ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥತೆಯನ್ನು 108 ಆಂಬುಲೆನ್ಸ್ ಮುಖಾಂತರ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿ ಹೋದ ನಂತರ ಆಸ್ಪತ್ರೆಯಿಂದ ತಪ್ಪಿಸಿಕೊಂಡ ಹುಡುಗಿ ಬೆಳ್ತಂಗಡಿ ಸಂತೆಕಟ್ಟೆ ಮೆಸ್ಕಾಂ ರಸ್ತೆಯಲ್ಲಿ ತಿರುಗಾಡುತ್ತಿರುವ ವಿಷಯವನ್ನು ತಿಳಿದ ಪಟ್ಟಣ ಪಂಚಾಯತ್ ಅಧ್ಯಕ್ಷ ಕೂಡಲೇ ಇನ್ಸ್ಪೆಕ್ಟರ್ ಸುಬ್ಬಾಪುರ ಮಠ್ ಮತ್ತು ಸಬ್ ಇನ್ಸ್ಪೆಕ್ಟರ್ ಮುರಳಿಯವರಿಗೆ ಹಾಗೂ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಯವರಿಗೆ ಮಾಹಿತಿಯನ್ನು ನೀಡಿದರು. ನಂತರ ನೆರಿಯ ಸಿಯೋನ್ ಆಶ್ರಮದ ಪೌಲೋಸ್ ರನ್ನು ಸಂಪರ್ಕಿಸಿ ಸಬ್ ಇನ್ಸ್ಪೆಕ್ಟರ್ ಪತ್ರದ ಮುಖಾಂತರ ಆಂಬುಲೆನ್ಸ್ ನಲ್ಲಿ ಸಿಯೋನ್ ಆಶ್ರಮಕ್ಕೆ, ಬಾಲಕಿಯನ್ನು ದಾಖಲಿಸಲಾಯಿತು.,

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ಪ್ರಜ್ವಲ್, ಪಟ್ಟಣ ಪಂಚಾಯತ್ ನ ಸ್ಯಾನಿಟರಿ ಸೂಪರ್ವೈಸರ್ ಕರುಣಾಕರ, ಪಟ್ಟಣ ಪಂಚಾಯತ್ ನ ಮಾಜಿ ನಾಮನಿರ್ದೇಶನ ಸದಸ್ಯ ಪ್ರಕಾಶ್ ಆಚಾರ್ಯ, ಆಟೋ ಚಾಲಕ ಅಭಿಲಾಶ್, ಆಂಬುಲೆನ್ಸ್ ಚಾಲಕ ಪವನ್ ಕುಮಾರ್, ಸಬ್ ಇನ್ಸ್ಪೆಕ್ಟರ್ ಮುರಳಿಯವರು ಸಹಕರಿಸಿದರು.