ತೋಟತ್ತಾಡಿ: ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಮ್ ಇದರ 60ನೇ ವರ್ಷದ ವಾರ್ಷಿಕ ಹಾಗೂ ಗುರುಮಂದಿರದ 11ನೇ ವರ್ಷದ ಪ್ರತಿಷ್ಠಾ ವಾರ್ಷಿಕದ ಅಂಗವಾಗಿ ಸಂಘದಲ್ಲಿ ಗಣಹೋಮ, ಗುರುಪೂಜೆ ಹಾಗೂ ವಾರ್ಷಿಕ ಮಹಾಸಭೆಯನ್ನು ಮೇ 25ರಂದು ತೋಟತ್ತಾಡಿಯಲ್ಲಿ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಸದಸ್ಯರ ಕಲಿಯುವ ಮಕ್ಕಳಿಗೆ ಕೊಡೆ ಹಾಗೂ ಕಲಿಕಾ ಸಾಮಗ್ರಿ ಹಾಗೂ ಎಲ್ಲಾ ಮನೆಗೆ ಗುರುಗಳ ಪ್ರಾರ್ಥನಾ ಪುಸ್ತಕವನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸುರೇಶ್. ಎಮ್.ಎನ್. ಗುರುಗಳ ಆಶಯದಂತೆ ಎಲ್ಲಾ ಮಕ್ಕಳು ವಿದ್ಯೆಯಿಂದ ಸ್ವಾತಂತ್ರರಾಗಬೇಕು ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಬೇಕು ಎಂದು ಕರೆ ನೀಡಿದರು.

ಸಂಘದ ಕಾರ್ಯದರ್ಶಿಗಳಾದ ಮನೋಜ್, ಗೌರವಧ್ಯಕ್ಷ ಚಿದಾನಂದ, ಸಂಚಾಲಕರಾದ ಪ್ರಕಾಶ್ ಮತ್ತು ಗೌರವ ಸಲಗೆಗಾರರದ ಶಿವದಾಸನ್ ಮೂರ್ಜೆ ಉಪಸ್ಥಿತರಿದ್ದರು.
ಸಚಿತಾ ಸುರೇಶ್ ಸ್ವಾಗತಿಸಿ, ವoದಿಸಿದರು.