24.4 C
ಪುತ್ತೂರು, ಬೆಳ್ತಂಗಡಿ
June 6, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸಂಘ-ಸಂಸ್ಥೆಗಳು

ಕೊಯ್ಯೂರು: ಶ್ರೀಕೃಷ್ಣ ಭಜನಾ ಮಂಡಳಿಗೆ ಇನ್ವರ್ಟರ್ ಕೊಡುಗೆ

ಕೊಯ್ಯೂರು: ಆದೂರುಪೆರಾಲ್ ಶ್ರೀಕೃಷ್ಣ ಭಜನಾ ಮಂಡಳಿಯ ಸದಸ್ಯರು ಇತ್ತೀಚೆಗೆ ಪಾಂಬೇಲು ದೇವರಾಜ ಗೌಡರ ನೂತನ ಮನೆಯ ವಾಸ್ತು ಪೂಜೆಯ ಸಂದರ್ಭದಲ್ಲಿ ಭಜನಾ ಸೇವೆಯನ್ನು ನಡೆಸಿದರು.

ಭಜನಾ ಮಂಡಳಿಯ ಪದಾಧಿಕಾರಿಗಳ ಹಾಗೂ ಸದಸ್ಯರುಗಳ ಒಗ್ಗಟ್ಟು ಹಾಗೂ ವಹಿಸಿಕೊಂಡಂತಹ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ರೀತಿಗೆ ದೇವರಾಜ ಗೌಡ ಹಾಗೂ ಅವರ ಮನೆಯವರು ಶ್ರೀ ಕೃಷ್ಣ ಭಜನಾ ಮಂದಿರಕ್ಕೆ ಸುಮಾರು ರೂ.24 ಸಾವಿರ ವೆಚ್ಚದ ಇನ್ವರ್ಟರ್ ಕೊಡುಗೆಯಾಗಿ ನೀಡಿ ಸಹಕರಿಸಿದರು.

ಈ ಸಂದರ್ಭದಲ್ಲಿ ಪಾಂಬೇಲು ದೇವರಾಜ ಗೌಡರ ಮಗ ಡಾಕ್ಟರ್ ಕಾರ್ತಿಕ್ ಅವರ ಪತ್ನಿ ಶ್ರೀಮತಿ ನಿರೀಕ್ಷಾ, ಕಾರ್ತಿಕ್ ರವರ ಮಗ ವಿಹಾನ್‌ಕೃಷ್ಣ, ಶ್ರೀ ಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷ ರೋಹಿತಾಶ್ವ ಉಮಿಯ ದರ್ಕಾಸು, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷ ಪಿ ಚಂದ್ರಶೇಖರ ಸಾಲ್ಯಾನ್. ಭಜನಾ ಮಂದಿರದ ಉಪಾಧ್ಯಕ್ಷ ಸುಂದರ ಗೌಡ ಕಜೆಕೋಡಿ, ಕಾರ್ಯದರ್ಶಿ ಓಬಯ್ಯ ನಾಯ್ಕ, ಕೋಶಾಧಿಕಾರಿ ಬಾಲಕೃಷ್ಣ ಸಾಲ್ಯಾನ್, ಲೆಕ್ಕಪರಿಶೋಧಕರುಗಳಾದ ಲಿಂಗಪ್ಪ ಗೌಡ ಬೆರ್ಕೆ, ಹೇಮಂತ ಗೌಡ ದೇಂತ್ಯಾರುಬೊಟ್ಟು, ಭಜನಾ ಮಂಡಳಿಯ ಅರ್ಚಕ ಹೇಮಂತ ಗೌಡ ನಾಗನೊಡಿ, ಮಾಜಿ ಕಾರ್ಯದರ್ಶಿ ಮನೋಜ್ ಕುಮಾರ್ ಕಜೆ, ಮಾಜಿ ಜೊತೆ ಕಾರ್ಯದರ್ಶಿ ಜಿತೇಶ್ ಸಾಂತ್ಯೂಡಿ ಹಾಗೂ ವಸಂತ ನೇಕಾರ ಮುಂಡೆವು, ರಿತೇಶ್ ಬಜ, ಜನಾರ್ದನ ಉಮಿಯ, ಲತೀಶ ಆದೂರು ಪೇರಾಲ್, ನಿತಿನ್ ದೆಲೋಡಿ, ಕಮಲೇಶ್ ಸುರುಳಿ ಮತ್ತು ಭಜನಾ ಮಂಡಳಿಯ ಭಜಕ ಸದಸ್ಯರುಗಳು ಉಪಸ್ಥಿತರಿದ್ದರು.

Related posts

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನೂರಾರು ಕಾರ್ಯಕರ್ತರು

Suddi Udaya

ಉಜಿರೆ ಎಸ್.ಡಿ.ಎಂ. ಪಾಲಿಟೆಕ್ನಿಕ್ ಕಾಲೇಜು ವಾರ್ಷಿಕೋತ್ಸವ ಸಮಾರಂಭ

Suddi Udaya

ಮೂಡುಬಿದಿರೆ: ವೈಬ್ರೆಂಟ್ ವಿದ್ಯಾರ್ಥಿಗಳಿಗೆ ವಿಜೃಂಭಣೆಯ ಲಾಂಗ್ ಟರ್ಮ್ ಡೇ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪೆರ್ಲ-ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಸಿದ್ಧಿಶ್ರೀ ಸಭಾಭವನಕ್ಕೆ ಸಹಾಯಧನ ಚೆಕ್ ಹಸ್ತಾಂತರ

Suddi Udaya

ಲಾಯಿಲ ಕರ್ನೋಡಿ ಸ.ಹಿ.ಪ್ರಾ. ಶಾಲೆಯ ನವೀಕರಿಸಿದ ಶಾಲಾ ಕಟ್ಟಡ ಹಸ್ತಾಂತರ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿರವರಿಂದ ಮತದಾನ

Suddi Udaya
error: Content is protected !!