ಮಂಜುಶ್ರೀ ಭಜನಾ ಮಂದಿರ ಮಂಜುಶ್ರೀ ನಗರ ಮುಂಡಾಜೆ ಇದರ ಆಶ್ರಯದಲ್ಲಿ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವು ಜೂ.2ರಂದು ನಡೆಯಿತು.
ಈ ಸಂದರ್ಭದಲ್ಲಿ ಇತ್ತೀಚಿಗೆ ನಿಧನರಾದ ಜಯರಾಂ ಕೆ.ಮುಂಡಾಜೆ ಇವರ ಸಂಸ್ಮರಣಾ ಕಾರ್ಯಕ್ರಮ ಹಾಗೂ ಯಕ್ಷಗಾನ ತಾಳ ಮದ್ದಳೆ ನಡೆಯಿತು.ಸಭಾಧ್ಯಕ್ಷತೆಯನ್ನು ಭಜನಾ ಮಂಡಳಿಯ ಅಧ್ಯಕ್ಷ ನಾರಾಯಣ ಶೆಟ್ಟಿ, ಮುಖ್ಯ ಅತಿಥಿಗಳಾಗಿ ಹೀರೇಮಠ ಬಾಗಲಕೋಟೆ, ಪುರುಷೋತ್ತಮ ಶೆಟ್ಟಿ ಅಗರಿ, ನಾರಾಯಣ ಫಡ್ಕೆ, ಚೆನ್ನಕೇಶವ ನಾಯ್ಕ ಅರಸಮಜಲು, ಸದಾನಂದ ಬಿ., ಪ್ರಕಾಶ್ ಬಂಗ್ಲೆ ಭಾಗವಹಿಸಿದ್ದರು.
ಭಜನಾ ಮಂಡಳಿಯ ಕಾರ್ಯದರ್ಶಿ ಉಮೇಶ್ ಆಚಾರ್ಯ ಕಾನರ್ಪ ಸ್ವಾಗತಿಸಿದರು. ರೇವತಿ ದಿನೇಶ್ ಕಾರ್ಯಕ್ರಮ ನಿರ್ವಹಿಸಿದರು. ರಂಜನಿ ರವಿಕುಮಾರ್ ಧನ್ಯವಾದವಿತ್ತರು.