ಬೆಳ್ತಂಗಡಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಿಲ್ಲೂರು ಇರ್ಷಾದುಶ್ಶಿಬಿಯಾನ್ ಅರಬಿಕ್ ಮದರಸ ವಿದ್ಯಾರ್ಥಿಗಳಿಂದ ಸಸಿ ವಿತರಣೆ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳಿಗೆ ಮದರಸ ಪ್ರಧಾನ ಅಧ್ಯಾಪಕ ಅಬ್ದುಲ್ ಅಝೀಝ್ ಸಅದಿ ಅಗ್ರಹಾರ ರವರು ಪರಿಸರದ ಬಗ್ಗೆ ಹಾಗೂ ಮರಗಿಡಗಳಿಂದ ಮನುಷ್ಯರೀಗೆ ಆಗುವ ಉಪಕಾರಗಳನ್ನು ಬಹಳಷ್ಟು ಅರ್ಥವತ್ತಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಮುಹಿಯದ್ದೀನ್ ಜುಮ್ಮಾ ಮಸ್ಜಿದ್ ಅಧ್ಯಕ್ಷ ಅಬ್ದುಲ್ ಅಝೀಝ್ ಝುಹ್ರಿ ಕಿಲ್ಲೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.

ಅಲ್ ಹಾಜ್ ಅಬ್ದುರ್ರಹ್ಮಾನ್ ಬಾಖವಿ ಕಕ್ಕಿಂಜೆ ದುಃಆ ಆಶೀರ್ವಾದದೊಂದಿಗೆ ಸ್ವಚ್ಛತೆ, ವಿಶ್ವ ಪರಿಸದದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ಸಭೆಯಲ್ಲಿ ಜಮಾಅತ್ ಸದಸ್ಯರಾದ ಬದ್ರುದ್ದೀನ್ ಕಿಲ್ಲೂರು, ಹನೀಫ್ ಮಲ್ಲಿಗೆ ಮನೆ, ಅಧ್ಯಾಪಕರಾದ ಅಬೂಬಕ್ಕರ್ ಮುಸ್ಲಿಯಾರ್ ಹಾಗೂ ಮಕ್ಕಳ ರಕ್ಷಕರು ಭಾಗವಹಿಸಿದ್ದರು.













