ಧರ್ಮಸ್ಥಳ :ಮುಂಡ್ರುಪ್ಪಾಡಿ ಸ.ಕಿ.ಪ್ರಾ.ಶಾಲೆ ಇದರ ಸ್ಥಾಪಕಾದ್ಯಕ್ಷರ ಮಗನಾದ ಶ್ರೀ ನಾಗೇಶ್ ರಾವ್ ಮುಂಡ್ರುಪ್ಪಾಡಿ ಹಾಗೂ ಶಾಲಾಭಿಮಾನಿಯವರಾದ ಶ್ರೀ ಗಿರೀಶ್ ಕುದ್ರೆಂತಾಯ ಶಿವ ಪಾರ್ವತಿ ಕಲ್ಯಾಣ ಮಂಟಪ ಧರ್ಮಸ್ಥಳ ಇವರು ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಛತ್ರಿ ಗಳನ್ನು ಕೊಡುಗೆಯಾಗಿ ಜೂ. 6ರಂದು ನೀಡಿದರು

ಈ ಸಂದರ್ಭದಲ್ಲಿ ಶ್ರೀಯುತ ಭಾಸ್ಕರ ರಾವ್ ಮುಂಡ್ರುಪ್ಪಾಡಿ, ಶಾಲಾ ಮುಖ್ಯೋಪಾದ್ಯಾಯರಾದ ಚಿತ್ರ ಪ್ರಭಾ, ಅತಿಥಿ ಶಿಕ್ಷಕರಾದ ನಿತಿನ್, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀ ಸದಾಶಿವ.k. ಉಪಾಧ್ಯಕ್ಷೆ ಶ್ರೀಮತಿ ಶಶಿಕಲಾರವರು, ಅಡುಗೆ ಸಿಬ್ಬಂದಿ ಶ್ರೀಮತಿ ಜಾನಕಿಯವರು ಉಪಸ್ಥಿತರಿದ್ದರು














