ಉರುವಾಲು: ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಿತ ಕೆ.ಆರ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಎಕೋ ಕ್ಲಬ್ ನ್ನು ಉದ್ಘಾಟಿಸಲಾಯಿತು. ಅಧ್ಯಕ್ಷರನ್ನಾಗಿ 10ನೇ ತರಗತಿ ಸಹನ, ಉಪಾಧ್ಯಾಕ್ಷರನ್ನಾಗಿ 9ನೇ ತರಗತಿ ಗೌರವ್ ರನ್ನು ಆಯ್ಕೆ ಮಾಡಲಾಯಿತು.ವಿಶ್ವ ಪರಿಸರ ದಿನಾಚರಣೆ ಮಹತ್ವ ಹಾಗೂ ಪರಿಸರ ಉಳಿಸುವ ನಿಟ್ಟಿನಲ್ಲಿ ಯುವ ವಿದ್ಯಾರ್ಥಿಗಳ ಕರ್ತವ್ಯದ ಬಗ್ಗೆ ಹಾಗೂ ತಾಯಿಯ ಹೆಸರಲ್ಲೊಂದು ಗಿಡ ಅಭಿಯಾನದಡಿ ಗಿಡಗಳನ್ನು ನೆಟ್ಟು ಪೋಷಿಸಬೇಕೆಂಬ ಸಂದೇಶವನ್ನು ಶಾಲಾ ಮುಕ್ತ ಶಿಕ್ಷಕಿ ನೀಡಿದರು.

ವಿದ್ಯಾರ್ಥಿಗಳು ತಂದ ಹಲವಾರು ಗಿಡಗಳನ್ನು ಶಾಲಾ ಪರಿಸರದಲ್ಲಿ ನೆಡಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕ ವೃಂದ ಹಾಜರಿದ್ದರು.