24.2 C
ಪುತ್ತೂರು, ಬೆಳ್ತಂಗಡಿ
June 10, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

“ದಸ್ಕತ್” ಚಲನಚಿತ್ರಕ್ಕೆ RED FM ತುಳು ಫಿಲ್ಮ್ ಅವಾರ್ಡ್ಸ್‌ನಲ್ಲಿ ಹಲವು ಪ್ರಶಸ್ತಿ

ಬೆಳ್ತಂಗಡಿ: ತುಳು ಭಾಷೆಯಲ್ಲಿ ತೆರೆಕಂಡು ಮೊದಲ ಪ್ಯಾನ್ ಇಂಡಿಯಾ ಮೂವಿ ಎಂದು ಹೆಗ್ಗಳಿಕೆ ಪಡೆದ ದಸ್ಕತ್ ಚಲನಚಿತ್ರಕ್ಕೆ RED FM ಪ್ರಸ್ತುತ ಪಡಿಸುವ ತುಳು ಫಿಲ್ಮ್ ಅವಾರ್ಡ್ಸ್‌ನಲ್ಲಿ ಒಟ್ಟು ಐದು ಪ್ರಶಸ್ತಿಗಳು ಲಭಿಸಿದೆ.
ಎರಡು ವರ್ಷಗಳ ತುಳು ಚಲನಚಿತ್ರಗಳನ್ನು ಸ್ಪರ್ಧೆಯಲ್ಲಿ ಒಳಪಡಿಸಿ ಈ ಪ್ರಶಸ್ತಿಗಳನ್ನು ನೀಡಲಾಗಿದೆ.

ಉತ್ತಮ ಚಲನಚಿತ್ರ ದಸ್ಕತ್
ಉತ್ತಮ ನಿರ್ದೇಶಕ – ಅನೀಶ್ ಪೂಜಾರಿ ವೇಣೂರು
ಉತ್ತಮ ನಾಯಕ ನಟ-ದೀಕ್ಷಿತ್ ಕೆ ಅಂಡಿಂಜೆ
ಉತ್ತಮ ಖಳ ನಟ- ಯುವ ಶೆಟ್ಟಿ
ಉತ್ತಮ ಪೋಷಕ ನಟ-ಮೋಹನ್ ಶೇಣಿ

ಈಗಾಗಲೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗಳಿಸಿದ ಹೆಗ್ಗಳಿಕೆ ದಸ್ಕತ್ ಚಲನಚಿತ್ರಕ್ಕಿದ್ದು, ವಿದೇಶದಲ್ಲೂ ಜನಮಾನಸ ಗೆದ್ದು, ಇತ್ತೀಚೆಗೆ ಕನ್ನಡ ಭಾಷೆಯಲ್ಲೂ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡಿದೆ. ರಾಘವೇಂದ್ರ ಕುಡ್ವ ರವರು ಚಿತ್ರವನ್ನು ನಿರ್ಮಾಣ ಮಾಡಿದ್ದು, ತುಳುವಿನ ದಸ್ಕತ್ ಇಂತಹ ಅಭೂತಪೂರ್ವ ಯಶಸ್ಸು ಕಂಡದ್ದು ಹೆಮ್ಮೆಯ ಸಂಗತಿ.

Related posts

ಡಾ. ವಿಕ್ರಮ್ ತಿಮರಡ್ಕ ರವರಿಗೆ ಜಪಾನ್‌ನ ಕ್ಯೋಟೋ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ. ಪದವಿ

Suddi Udaya

ವೇಣೂರು ಪ್ರಾ.ಕೃ.ಪ.ಸ. ಸಂಘದ ನಿವೃತ್ತ ಲೆಕ್ಕಿಗ ಲೋಕಯ್ಯ ಗೌಡ ನಿಧನ

Suddi Udaya

ಪಿಲ್ಯ: ನಿನ್ನಿಕಲ್ಲಿನಲ್ಲಿ ಅಡಿಕೆ ತೋಟದಲ್ಲಿ ಅಕ್ರಮ ಮಾರಾಟಕ್ಕೆ ದಾಸ್ತಾನು ಇರಿಸಲಾಗಿದ್ದಮದ್ಯ ಪತ್ತೆ, ಅಬಕಾರಿ ಇಲಾಖೆಯಿಂದ ದಾಳಿ, ಸೊತ್ತುಗಳು ವಶಕ್ಕೆ

Suddi Udaya

ನಿಡ್ಲೆ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿ ಸಾವು: ವಾರೀಸುದಾರರ ಪತ್ತೆಯಾಗಿ ಪೊಲೀಸರ ಮನವಿ

Suddi Udaya

ಕುಕ್ಕೇಡಿ: ಶ್ರೀಮತಿ ಲಲಿತಾ ನಿಧನ

Suddi Udaya
error: Content is protected !!