ಉಜಿರೆ: ಭಕ್ತಿಹೆಜ್ಜೆ ಬಳಗ ಬೆಳ್ತಂಗಡಿ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕಿನ ಎಲ್ಲಾ ಭಜನಾ ಮಂಡಳಿಗಳ ಒಗ್ಗೂಡುವಿಕೆಯಲ್ಲಿಡಾ| ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಶರತ್ಕೃಷ್ಣ ಪಡುವೆಟ್ನಾಯರವರ ಮಾರ್ಗದರ್ಶನದಲ್ಲಿ ಭಜಕೆರೆ ಗೊಬ್ಬು-2025 ಭಜಕ ಸಮ್ಮಿಲನ & ಪ್ರತಿಭಾ ಪುರಸ್ಕಾರ ಇದರ ಸಮಾರೋಪ ಸಮಾರಂಭವು ಜೂ.8ರಂದು ಉಜಿರೆಯ ಶಾರದಾ ಮಂಟಪದಲ್ಲಿ ನಡೆಯಿತು.
ಮುಖ್ಯ ಅತಿಥಿ ಉಜಿರೆ ಗ್ರಾ.ಪಂ. ಅಧ್ಯಕ್ಷೆ ಉಷಾಕಿರಣ್ ಕಾರಂತ್ ಮಾತನಾಡಿ, ಸನಾತನ ಹಿಂದೂ ಧರ್ಮದಲ್ಲಿ ಭಜನೆ ಅತ್ಯಂತ ಮಹತ್ವಪೂರ್ಣ ಸ್ಥಾನವನ್ನು ವಹಿಸಿಕೊಂಡಿದೆ. ಭಜನೆ ದೇವರ ಮಹಿಮೆಗಳನ್ನು ಕೊಂಡಾಡುವ ಏಕೈಕ ಸಾಧನವಾಗಿದೆ ಎಂದರು.
ಬೆಳ್ತಂಗಡಿ ಭಕ್ತಿ ಹೆಜ್ಜೆ ಬಳಗದ ಸಂಘಟಕ ವಿ.ಹರೀಶ್ ನೆರಿಯ ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ಹಿರಿಯ ಭಜಕ ಪುರುಷೋತ್ತಮ ಕೊಕ್ಕಡ,ಛತ್ರಪತಿ ಶಿವಾಜಿ ಭಜನಾ ಮಂಡಳಿ ಅಧ್ಯಕ್ಷ ನಾರಾಯಣ,ಭಕ್ತಿ ಹೆಜ್ಜೆ ಬಳಗದ ಸಂಘಟಕ ಮಂಜುನಾಥ್ ಶೆಟ್ಟಿ ನಿಡಿಗಲ್,ಛತ್ರಪತಿ ಶಿವಾಜಿ ಭಜನಾ ಮಂಡಳಿ ಸದಸ್ಯ ಸುಧಾಕರ್, ದೈಹಿಕ ಶಿಕ್ಷಕರಾದ ಮೋಹನ್, ಶಶಿಧರ್ ಬೆಳಾಲು ಉಪಸ್ಥಿತರಿದ್ದರು.
ಸರಸ್ವತಿ ಭಜನಾ ಮಂಡಳಿ ವಿವೇಕಾನಂದ ನಗರದ ಅಧ್ಯಕ್ಷ ಜನಾರ್ಧನ ಸ್ವಾಗತಿಸಿದರು. ಸುರಕ್ಷಾ ಆಚಾರ್ಯ ಕನ್ನಾಜೆ ನಿರೂಪಿಸಿದರು.