ತೆಂಕಕಾರಂದೂರು ಗ್ರಾಮದ ಹಿಬರೋಡಿ ಅಶ್ವಥ ಪಲ್ಕೆ ಎಂಬಲ್ಲಿ ಬದ್ಯಾರು- ಮುಂಡೂರು ಸಾರ್ವಜನಿಕ ರಸ್ತೆಯಲ್ಲಿ ಆಟೋ ರಿಕ್ಷಾ ಹಾಗೂ ಬೈಕ್ ನಡುವೆ ಅಪಘಾತವಾದ ಘಟನೆ ಜೂ. 9ರಂದು ಸಂಜೆ ನಡೆದಿದೆ.
ಘಟನೆ ವಿವರ: ಜೂ. 09 ರಂದು ಸಂಜೆ ತೆಂಕಕಾರಂದೂರು ಗ್ರಾಮದ ಹಿಬರೋಡಿ ಅಶ್ವಥ ಪಲ್ಕೆ ಎಂಬಲ್ಲಿ ಆಟೋ ರಿಕ್ಷಾವನ್ನು ಅದರ ಚಾಲಕ ಜಿನೇಂದ್ರ ಕುಮಾರ್ ಎಂಬವರು ಬದ್ಯಾರು ಕಡೆಯಿಂದ ಮುಂಡೂರು ಕಡೆಗೆ ತಿರುವು ರಸ್ತೆಯಲ್ಲಿ ರಾಂಗ್ ಸೈಡಿಗೆ ಚಲಾಯಿಸಿ ಮುಂಡೂರು ಕಡೆಯಿಂದ ಬರುತ್ತಿದ್ದ ಬೈಕ್ ಗೆ ರಭಸದಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಜಯಂತ ನಾಯ್ಕ್ ರವರು ಬೈಕ್ ನೊಂದಿಗೆ ರಸ್ತೆಗೆ ಬಿದ್ದು ಕಾಲಿಗೆ ಗಾಯಗಳಾಗಿ ಬೆಳ್ತಂಗಡಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ.
ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.