ಶಿರ್ಲಾಲು ಯುವವಾಹಿನಿ ಸಂಚಲನ ಸಮಿತಿಯಿಂದ ವಿದ್ಯೆ, ಉದ್ಯೋಗ ಸಂಪರ್ಕ ಎಂಬ ಧ್ಯೇಯ ವಾಕ್ಯದೊಂದಿಗೆ ಹಲವಾರು ಸಾಮಾಜಿಕ ಕೆಲಸಗಳನ್ನು ಮಾಡಿಕೊಂಡು ಬಂದಿರುವಂತಹ ಯುವವಾಹಿನಿ ಶಿರ್ಲಾಲು ಸಂಚಲನ ಸಮಿತಿಯಿಂದ 2025 ನೇ ವರ್ಷದ 21ನೇ ಸೇವಾ ಯೋಜನೆಯನ್ನು ಹರೀಶ್ ಹಾರ್ಜೆ ಇವರ ಮನೆ ನಿರ್ಮಾಣಕ್ಕೆ ಧನಸಹಾಯ ನೀಡಲಾಯಿತು. ಮತ್ತು ಆರೋಗ್ಯ ನಿಧಿಯನ್ನು ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಶಿರ್ಲಾಲಿನ ಉಜಿರಲ್ಕೆ ಮನೆಯ ಪೂವಪ್ಪ ಪೂಜಾರಿ ಹಾಗೂ ಶಿರ್ಲಾಲು ಪಾದೆ ಮನೆ ನಿವಾಸಿ ಧರ್ಣಪ್ಪ ಪೂಜಾರಿ ಇವರಿಗೆ ಆರೋಗ್ಯ ನಿಧಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಶಿರ್ಲಾಲು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕರು ಯುವವಾಹಿನಿ ಸಂಚಲನ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.