ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಕಾಲುಬಾಯಿ ರೋಗ ಲಸಿಕಾ ಅಭಿಯಾನವು ಜೂ.11 ರಂದು ವಿಶ್ವನಾಥ ಪೂಜಾರಿ ಮೈರಬೆಟ್ಟು ಇವರ ಮನೆಯಲ್ಲಿ ಜರಗಿತು.
ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ದ. ಕ. ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕರು ಪ್ರಭಾಕರ್ ಎಚ್. ದೀಪ ಬೆಳಗಿಸಿ ಚಾಲನೆ ನೀಡಿದರು. ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಪ್ರತಾಪ್ ಶೆಟ್ಟಿ ಕುಂಡಾಜೆ, ನಿರ್ದೇಶಕರಾದ ಕೃಷ್ಣ ಶೆಟ್ಟಿ ಉಮಾನೊಟ್ಟು, ದಿನೇಶ್ ಹುಲಿಮೇರು, ಉಮೇಶ್ ಶೆಟ್ಟಿ ಪಾಲ್ಯ, ಕೇಶವ ಶೆಟ್ಟಿ, ಸುಮಿತ್ರಾ ಶೆಟ್ಟಿ ಹಾಗೂ ವೇಣೂರು ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಪ್ರದೀಪ್ ಪಾಣಿಮೇರು ಸ್ವಾಗತಿಸಿದರು. ನಂತರ ಆರಂಬೋಡಿ ಗ್ರಾಮ ವ್ಯಾಪ್ತಿಯ ಎಲ್ಲಾ ರಾಸುಗಳಿಗೆ ಚರ್ಮಗಂಟು ಮತ್ತು ಕಾಲುಬಾಯಿ ರೋಗದ ಲಸಿಕೆ ನೀಡಲಾಯಿತು.