ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಆಮಂತ್ರಣ ಪರಿವಾರ ಮತ್ತು ಆಮಂತ್ರಣ ಸಾಂಸ್ಕೃತಿಕ ವೇದಿಕೆ ಕರ್ನಾಟಕ ಆಯೋಜಿಸಿರುವ ರಾಜ್ಯಮಟ್ಟದ ಮುದ್ದುಕೃಷ್ಣ ಸ್ಪರ್ಧೆಯ ಫಲಿತಾಂಶ

ವೈಭವ ಲಕ್ಷ್ಮಿ ಪುತ್ತೂರು

ಬೆಳ್ತಂಗಡಿ : ಆಮಂತ್ರಣ ಪರಿವಾರ ಮತ್ತು ಆಮಂತ್ರಣ ಸಾಂಸ್ಕೃತಿಕ ವೇದಿಕೆ ಕರ್ನಾಟಕ ಆಯೋಜಿಸಿರುವ ರಾಜ್ಯಮಟ್ಟದ
ಮುದ್ದುಕೃಷ್ಣ ಸ್ಪರ್ಧೆಯ ಫಲಿತಾಂಶ ಕಾರ್ಯಕ್ರಮ ಆ.29 ರಂದು ನಡೆಯಿತು.

ಧನ್ವಿತ್ ಬೆಂಗಳೂರು

ಮುಖ್ಯ ಅತಿಥಿಗಳಾಗಿ ಭಾರತೀಯ ಜೈನ್ ಮಿಲನ್ ವಲಯ ನಿರ್ದೇಶಕರಾದ ಸುದರ್ಶನ್ ಜೈನ್, ಬಂಟ್ವಾಳ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಲನಚಿತ್ರದ ನಾಯಕಿ ಸಪ್ತಾ ಪಾವೂರು ಭಾಗವಹಿಸಿ ಫಲಿತಾಂಶ ಘೋಷಣೆ ಮಾಡಿದರು.
ಆಮಂತ್ರಣ ಮುದ್ದು ಕೃಷ್ಣ ಸ್ಪರ್ಧೆಯ ಫಲಿತಾಂಶ ಪ್ರಥಮ ವೈಭವ ಲಕ್ಷ್ಮಿ ಪುತ್ತೂರು, ದ್ವಿತೀಯ ಧನ್ವಿತ್ ಬೆಂಗಳೂರು, ತೃತೀಯ
ಆನ್ಯ ಜೈನ್ ಕಾರ್ಕಳ, ಶಾನ್ಯ ಕೋಟ್ಯಾನ್ ಮಂಗಳೂರು ಆಯ್ಕೆಯಾದರು.

ಆನ್ಯ ಜೈನ್ ಕಾರ್ಕಳ

ಟಾಪ್ ಟೆನ್ ಆಯ್ಕೆಯಾದವರು ಅನ್ವಿಕಾ, ಕಶ್ವಿನ್ ,ದಕ್ಷ ಕುಮಾರ್ ,ನಿತಿ ನಿಹಾಲ್ ,ಅವ್ಯಕ್ತ ಎಸ್ ,ಅದ್ವಿನ್ ರಾಮ್ ,ಸಂಹಿತಾ ಭಟ್ ,ಸಂಮೃದ್ದಿ , ಚಾರ್ವಿ ಶೆಟ್ಟಿ ,ಜಶ್ವಿನ್ ಬೇಕಲ್ ಕರಿಕೆ, ಮೆಚ್ಚುಗೆ ಪಡೆದವರಲ್ಲಿ ವಮಿಕ, ಪ್ರಾಣೇಶ್ ,ಸಾದ್ವಿನಿ ,ಪ್ರದ್ವಿನ್ ಶೆಟ್ಟಿ ,ಸಹಿಷ್ಟ್ ,ರಿಧಿ ಭಟ್ ,ಆರ್ಯ ಎಸ್ ,ಶ್ರೀ ಕೃಷ್ಣ ರಾವ್ , ವೃಷ್ಠಿ ಎಸ್ ,ಗ್ಯಾನ್ ಗುಜರಾನ್, ಚಿರನ್ವಿ ,ರವಿತೇಜ , ಸೈಹಿಶ್ ರಾಜ್ಆಯ್ಕೆಯಾಗಿದ್ದಾರೆ.

ಶಾನ್ಯ ಕೋಟ್ಯಾನ್ ಮಂಗಳೂರು,

ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ರಾಜ್ಯ ಸದಸ್ಯರಾದ ಆಶಾ ಅಡೂರು, ಹೆಚ್ಕೆ ನಯನಾಡು , ನಿರಂಜನ ಲಹರಿಯ ನಿರಂಜನ್ ಕುದ್ಯಾಡಿ ಹಾಗೂ ಆಮಂತ್ರಣ ವೇದಿಕೆ ಅಧ್ಯಕ್ಷರಾದ ನಿರೀಕ್ಷಿತಾ ಮಂಗಳೂರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.

ಗಣೇಶ್ ಹೆಗ್ಡೆ ನಾರಾವಿ ಪ್ರಾರ್ಥಿಸಿದರು. ರಾಜ್ಯ ಸದಸ್ಯರಾದ ಉಮಾ ಸುನಿಲ್ ಹಾಸನ ಕಾರ್ಯಕ್ರಮ ನಿರ್ವಹಿಸಿದರು, ರಶ್ಮಿ ಸನಿಲ್ ಮಂಗಳೂರು ಧನ್ಯವಾದ ಸಲ್ಲಿಸಿದರು.

Related posts

ಸುರ್ಯ ಸದಾಶಿವರುದ್ರ ದೇವಸ್ಥಾನಕ್ಕೆ ಮಂಗಳೂರು ಕೆ.ಎಂ.ಎಫ್ ಅಧ್ಯಕ್ಷ ರವಿರಾಜ್ ಹೆಗ್ಡೆ ಭೇಟಿ

Suddi Udaya

ಸೀರೋ ಮಲಬಾರ್ ಧರ್ಮ ಸಭೆಯಲ್ಲಿ ವಿಭೂತಿ ಆಚರಣೆಯೊಂದಿಗೆ ವ್ರತಚಾರಣೆಯಕಾಲಕ್ಕೆ ಪ್ರವೇಶ

Suddi Udaya

ಮಡಂತ್ಯಾರು: ಸಾಲುಮರ ಬಳಿ ನೀರಿನ ಟ್ಯಾಂಕರ್ ಹಾಗೂ ಬೈಕ್ ನಡುವೆ ಅಪಘಾತ

Suddi Udaya

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ “ಸ್ವಾಗತಂ” ವಿಶೇಷ ಕಾರ್ಯಕ್ರಮ

Suddi Udaya

ಮಿತ್ತಬಾಗಿಲು ಗ್ರಾ.ಪಂ. ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಉಜಿರೆ: ಮನರಂಜನಾ ಕ್ಷೇತ್ರದಲ್ಲಿ ಎಐ ಬಳಕೆ ಕುರಿತು ವಿಶೇಷ ಉಪನ್ಯಾಸ

Suddi Udaya
error: Content is protected !!