25.1 C
ಪುತ್ತೂರು, ಬೆಳ್ತಂಗಡಿ
June 15, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಲೋಕೋಪಯೋಗಿ ಇಲಾಖೆಯಿಂದ ಅಳವಡಿಸಿದ ನಾಮಫಲಕದಲ್ಲಿ ಯಡವಟ್ಟು: ಕೂಡಲೇ ಸರಿಪಡಿಸುವಂತೆ ಆಗ್ರಹ

ಮಚ್ಚಿನ : ಇಲ್ಲಿಯ ಮುಡಿಪಿರೆ ಯಿಂದ ನಾಳ ಹಾಗೂ ಮುಡಿಪಿರೆ ಯಿಂದ ಕುವೆಟ್ಟು ರಸ್ತೆಗಳು ಇತ್ತೀಚಿಗೆ ಕಾಂಕ್ರೀಟ್ ಗೊಂಡು ಲೋಕೋಪಯೋಗಿ ಇಲಾಖೆಯಿಂದ ಮಾರ್ಗಸೂಚಿ ನಾಮಫಲಕ ಹಾಕಲಾಗಿದೆ. ಆದರೆ ಅದರಲ್ಲಿ ಊರ ಹೆಸರುಗಳನ್ನು ತಪ್ಪಾಗಿ ಮುದ್ರಿಸಿ ಊರ ಜನರನ್ನು ರೊಚ್ಚಿಗೆಲ್ವಂತೆ ಮಾಡಿದೆ.

ಇರಬೇಕಾದ ಹೆಸರುಗಳು ದೇವರಗುಂಡಿ, ಬರೆಮೇಲು, ಮರ್ಕೆ, ಪುರಳಿ, ಪಂಚಮಲಕೋಡಿ, ಬಿಳಿ ಬೈಲು,
ತಿಮ್ಮನೊಟ್ಟು, ನಾಳ, ದತ್ತ ನಗರ ಕುತ್ತಿನ, ಮುದಲಡ್ಕ ಪಯ್ಯೊಟ್ಟು, ಸಬರಬೈಲು, ಕುವೆಟ್ಟು, ಎಂದು ಆಗಬೇಕು. ಆದರೆ
ರಸ್ತೆಯ ನಾಮಫಲಕವನ್ನು ಲೋಕೋಪಯೋಗಿ ಇಲಾಖೆ ವಿಚಿತ್ರವಾದ ಹೆಸರುಗಳನ್ನು ಬರೆದು ದಾರಿ ತಪ್ಪುವಂತೆ ಮಾಡಿದೆ.

ಈ ನಾಮಫಲಕವನ್ನು ತಕ್ಷಣ ಬದಲಾವಣೆಗೊಳಿಸುವಂತೆ ಇಲಾಖೆಯಲ್ಲಿ ಊರ ಜನರ ಒತ್ತಾಯವಾಗಿದೆ. ( ಜನರು ಕೇಳುವಂತ ಪ್ರಶ್ನೆ ಒಂದು ಮಗುವಿನ ಹೆಸರಿನ ಒಂದು ಅಕ್ಷರವನ್ನು ತಿದ್ದುಪಡಿ ಮಾಡಲು ಶಾಲೆ ಲಾಯರ್ ಕೋರ್ಟು ಕಚೇರಿ ಹೀಗೆ 6ತಿಂಗಳು ಅಲೆದಾಡಿದರು ಸರಿಯಾಗುವುದಿಲ್ಲ ಆದರೆ ಲೋಕೋಪಯೋಗಿ ಇಲಾಖೆ , ಕ್ಷಣಮಾತ್ರದಲ್ಲಿ ಒಂದು ಊರಿನ ಹೆಸರನ್ನು ಬದಲಾವಣೆ ಮಾಡುತ್ತದೆ ಎಂದು ) ಒಟ್ಟಿನಲ್ಲಿ ಮಾರ್ಗಸೂಚಿ ಸರಿಯಾಗಿದ್ದರೆ ಜನರು ದಾರಿ ತಪ್ಪದಂತೆ ಮಾಡಬಹುದು.
✍️ವರದಿ: ಹರ್ಷ ಬಳ್ಳಮಂಜ

Related posts

ಬೆಳ್ತಂಗಡಿ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಬಕ್ರೀದ್

Suddi Udaya

ಕರಾವಳಿ ಪ್ರಜಾಧ್ವನಿ ಯಾತ್ರೆ ಕೊಕ್ಕಡದಲ್ಲಿ
ಕಾಂಗ್ರೆಸ್ ಕಾಯ೯ಕತ೯ರ ಸಭೆ

Suddi Udaya

ಉಜಿರೆ ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya

ಬೆಳ್ತಂಗಡಿ ಗ್ರಾಹಕರಿಗೆ ಸುವರ್ಣಾವಕಾಶ, ಯಾವುದೇ ಬಟ್ಟೆ ಖರೀದಿಸಿದರೂ ರೂ. 200 ಮಾತ್ರ

Suddi Udaya

ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಕದಿರು ಹಬ್ಬ

Suddi Udaya

ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಮಾಜಿ ಶಾಸಕ ವಸಂತ ಬಂಗೇರರಿಗೆ ನುಡಿ ನಮನ

Suddi Udaya
error: Content is protected !!