23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಜಿಲ್ಲಾ ಸಂಸ್ಕಾರ ಭಾರತೀ ವತಿಯಿಂದ ವೇಣೂರಿನ ಶ್ರೀ ವರ್ಧಮಾನ ಸ್ವಾಮಿ ಬಸದಿಯಲ್ಲಿ “ಸಂಸ್ಕಾರ ಸಿಂಧೂರ” ಚಿಂತನ ಮಂಥನ ಕಾರ್ಯಕ್ರಮ

ವೇಣೂರು: ಸಂಸ್ಕಾರ ಭಾರತೀ ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ಜೂ. 17 ರಂದು ವೇಣೂರಿನ ಶ್ರೀ ವರ್ಧಮಾನ ಸ್ವಾಮಿ ಬಸದಿ, ಪಲ್ಲಂದೋಡಿ ಬಜಿರೆಯಲ್ಲಿ “ಸಂಸ್ಕಾರ ಸಿಂಧೂರ” ಎಂಬ ಕಾರ್ಯಕ್ರಮದಡಿ ಸನಾತನ ಸಂಸ್ಕೃತಿಯ ಮೆಲುಕು -ಚಿಂತನ ಮಂಥನ ಕಾರ್ಯಕ್ರಮ ಆರಂಭಗೊಂಡಿತು.

ಜಂತೋಡಿಗುತ್ತು ಪ್ರವೀಣ್ ಚಂದ್ರ ಜೈನ್ ರವರಿಂದ ದೀಪೋಜ್ವಲನದ ಮೂಲಕ ಉದ್ಘಾಟನೆಯಾದ ಕಾರ್ಯಕ್ರಮದಲ್ಲಿ ಸಂಸ್ಕಾರ ಭಾರತೀ ದ.ಕ.ಜಿಲ್ಲೆ ಯ ಅಧ್ಯಕ್ಷ ತಾರಾನಾಥ ಕೊಟ್ಟಾರಿ, ಫರೆಂಗಿಪೇಟೆ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಕಾರ ಭಾರತೀ ದ.ಕ.ಜಿಲ್ಲೆಯ ಗೌರವಾಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ, ಸಂಸ್ಕಾರ ಭಾರತೀ ಕರ್ನಾಟಕ ಪ್ರಾಂತ ದ ಸಹ ಕಾರ್ಯದರ್ಶಿ ನಾಗರಾಜ ಶೆಟ್ಟಿ, ಮಂಗಳೂರು, ವೇಣೂರಿನ ಉದ್ಯಮಿಗಳಾದ ಭಾಸ್ಕರ್ ಪೈ, ಸಂಸ್ಕಾರ ಭಾರತೀ ದ.ಕ.ದ ಕೋಶ ಪ್ರಮುಖ್ ಶ್ರೀಮತಿ ವಿಜಯಾ ಬಿ ಶೆಟ್ಟಿ ಸಾಲೆತ್ತೂರು ಉಪಸ್ಥಿತರಿದ್ದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಪ್ರಥಮ ಚಿಂತನ ಮಂಥನ ಕಾರ್ಯಕ್ರಮ ನಡೆಯಿತು. ಜನನದಿಂದ ಮರಣದವರೆಗಿನ ಆಚರಣೆಗಳಲ್ಲಿನ ಬದಲಾವಣೆಗಳು ಎಂಬ ವಿಚಾರದಲ್ಲಿ ಚಿಂತನೆ ನಡೆಸಿದವರು ಸಾಮರಸ್ಯ ಟೋಳಿಯ ವಿಭಾಗ ಪ್ರಮುಖ್ ಸುರೇಶ್ ನರ್ಕಳ, ಸಂ‌.ಭಾ.ಕರ್ನಾಟಕ ಪ್ರಾಂತದ ಕೋಶ ಪ್ರಮುಖ್ ರಘುವೀರ್ ಗಟ್ಟಿ, ಸಂ.ಭಾ.ದ.ಕ ಜಿಲ್ಲೆಯ ಉಪಾಧ್ಯಕ್ಷ ದತ್ತಾತ್ರೇಯ ರಾವ್ ಪುತ್ತೂರು, ಸಂ.ಭಾ.ದ.ಕ.ಜಿಲ್ಲೆಯ ಸಾಹಿತ್ಯ ಸಂಯೋಜಕರಾದ ಶ್ರೀಮತಿ ಶಂಕರಿ ಶರ್ಮ ಪುತ್ತೂರು ಉಪಸ್ಥಿತರಿದ್ದರು.

ಸಂ.ಭಾ.ದ.ಕ.ಜಿಲ್ಲೆಯ ಕಾರ್ಯಕಾರಿಣಿ ಸದಸ್ಯ ಪಿ.ಎನ್.ಪರುಷೋತ್ತಮ ರಾವ್ ಕಾರ್ಯಕ್ರಮ ನಿರೂಪಿಸಿದರು.

Related posts

ರಾಜ್ಯಮಟ್ಟದ ಸ್ಕ್ವೇಯ್ ಮಾರ್ಸಲ್ ಆರ್ಟ್ಸ್ ಸ್ಪರ್ಧೆ: ಶಹೀರ್ ಅನಸ್ ರವರಿಗೆ ಚಿನ್ನದ ಪದಕ

Suddi Udaya

ಧರ್ಮಸ್ಥಳ ಬುರುಡೆ ಪ್ರಕರಣ: ಜಾಮೀನು ಮತ್ತು ಭದ್ರತೆ ಹಣ ಠೇವಣಿ ಮಾಡದ ಹಿನ್ನೆಲೆ ಜಾಮೀನು ಸಿಕ್ಕರೂ ಬಿಡುಗಡೆಯಾಗದ ಚಿನ್ನಯ್ಯ

Suddi Udaya

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಮಡಂತ್ಯಾರಿನಲ್ಲಿ ಉಚಿತ ಯೋಗ ಶಿಕ್ಷಣ ಶಿಬಿರ

Suddi Udaya

ಪಡಂಗಡಿಯಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ

Suddi Udaya

ನಾವೂರು ವ್ಯಾಪ್ತಿಯಲ್ಲಿ 20 ಕ್ಕೂ ಮಿಕ್ಕಿ ವಿದ್ಯುತ್ ಕಂಬಗಳು ಧರಾಶಾಹಿ

Suddi Udaya

ಬಳ್ಳಾಲರಾಯನ ದುರ್ಗಕ್ಕೆ ಚಾರಣಕ್ಕೆ ಬಂದು ನಾಪತ್ತೆಯಾಗಿದ್ದ ಯುವಕ ಕಾಡಿನಲ್ಲಿ ಪತ್ತೆ

Suddi Udaya
error: Content is protected !!