ವೇಣೂರು: ಪೆರಿಂಜೆ ನೂರುಲ್ ಹುದಾ ಮದರಸ ಸಮಿತಿಯ ವಾರ್ಷಿಕ ಮಹಾಸಭೆಯು ಜೂ.೧೫ ರಂದು ಪಿ.ವಿ ಅಬ್ದುಲ್ ರಹೀಮಾನ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಅಶ್ರಫ್ ಗಾಂಧಿನಗರ, ಕಾರ್ಯದರ್ಶಿಯಾಗಿ ಹಫೀಲ್ ಪೆರಿಂಜೆ, ಕೋಶಾಧಿಕಾರಿಯಾಗಿ ತೌಫಿಕ್ ಪೆರಿಂಜೆ ಮತ್ತು ಗೌರವಾಧ್ಯಕ್ಷರಾಗಿ ಯಾಕೂಬ್ ಪೆರಿಂಜೆ ಹಾಗೂ ಸಮಿತಿ ಸದಸ್ಯರನ್ನಾಗಿ ಸ್ಥಳೀಯ ಪೆರಿಂಜೆ ಯವರಾದ ಆದಿಲ್, ಇಸ್ಮಾಯಿಲ್, ಸಾದಿಕ್, ರಫೀಕ್, ಮಿಶಾಲ್, ನೌಫಲ್, ಉಮರ್ ಎಮ್.ಕೆ, ರಶೀದ್, ಹನೀಫ್, ತಸ್ಲೀಮ್, ಅಬ್ದುಲ್ ಖಾದರ್, ಹೈದರ್, ಸಫ್ವಾನ್, ಜೈನುದ್ದೀನ್, ಅಕ್ಬರ್, ಅಶ್ರಫ್ ಇವರನ್ನು ಆಯ್ಕೆ ಮಾಡಲಾಯಿತು.











