ಮಲವಂತಿಗೆ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಜಕ್ಕೆ ಮಲವಂತಿಗೆ ದಿಡುಪೆಯಲ್ಲಿ ವಿಶ್ವ ಯೋಗ ದಿನಾಚರಣೆ ನಡೆಸಲಾಯಿತು.
ಯೋಗ ತರಬೇತುದಾರರಾದ ಎನ್.ವೈ.ಕೆ ತಾ. ಪ್ರತಿನಿಧಿಯಾದ ತೀಕ್ಷಿತ್.ಕೆ ಕಲ್ಬೆಟ್ಟು, ತರಬೇತಿ ನೀಡಿ ಮಾತನಾಡಿ ಯೋಗವೂ ಒಂದು ಶಿಕ್ಷಣಕ್ಕೆ ಮುಖ್ಯ ಪಾತ್ರ, ಪ್ರತೀ ನಿತ್ಯ ಯೋಗಭ್ಯಾಸದಿಂದ ಆರೋಗ್ಯ ಸಿದ್ದಿ ಪಡೆಯಬಹುದು, ಉಸಿರಾಟಕ್ಕೆ ಹೆಚ್ಚು ಮಹತ್ವ, ಸಣ್ಣ ಪ್ರಾಯದಿಂದ ಯೋಗ ಅಭ್ಯಾಸ ಮಾಡಿದರೆ ಮುಂದಿನ ಭವಿಷ್ಯಕ್ಕೆ ಉತ್ತಮ. ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಬರಹ ಬೆರಳುಗಳಿಗೆ, ಉಸಿರಾಟ, ಜ್ಞಾನಕ್ಕೆ, ಆಟ ವಿವಿಧ ದೇಹದ ಭಾಗಗಳ ಚಟುವಟಿಕೆಗೆ ಯೋಗದಿಂದ ಪ್ರಾಮುಖ್ಯತೆ ಇರುತ್ತದೆ ಎಂದರು.
ಮುಖ್ಯೋಪಾಧ್ಯಾಯರಾದ ಕುಮಾರ ಸ್ವಾಮಿ ಸ್ವಾಗತಿಸಿ, ಎಸ್,ಡಿ,ಎಮ್.ಸಿ ಅಧ್ಯಕ್ಷ ಶೇಖರ ಗೌಡ ಅತಿಥಿಯಾಗಿ ಮಧುಸೂದನ್ ಹೆಗ್ಡೆ ಮಲ್ಲ , ಸಹಾಯಕ ಶಿಕ್ಷಕರಾದ ರಂಗನಾಥ್ , ಪರಮೇಶ್ವರ ನಾಯ್ಕ್ , ಶಿಕ್ಷಕಿಯರಾದ ಲೀಲಾವತಿ , ಚಂದ್ರಿಕಾ, ಸುಹಾಸಿನಿ ಹಾಗೂ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.











