September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಲವಂತಿಗೆ : ಕಜಕ್ಕೆ ಸ.ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ಮಲವಂತಿಗೆ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಜಕ್ಕೆ ಮಲವಂತಿಗೆ ದಿಡುಪೆಯಲ್ಲಿ ವಿಶ್ವ ಯೋಗ ದಿನಾಚರಣೆ ನಡೆಸಲಾಯಿತು.


ಯೋಗ ತರಬೇತುದಾರರಾದ ಎನ್.ವೈ.ಕೆ ತಾ. ಪ್ರತಿನಿಧಿಯಾದ ತೀಕ್ಷಿತ್.ಕೆ ಕಲ್ಬೆಟ್ಟು, ತರಬೇತಿ ನೀಡಿ ಮಾತನಾಡಿ ಯೋಗವೂ ಒಂದು ಶಿಕ್ಷಣಕ್ಕೆ ಮುಖ್ಯ ಪಾತ್ರ, ಪ್ರತೀ ನಿತ್ಯ ಯೋಗಭ್ಯಾಸದಿಂದ ಆರೋಗ್ಯ ಸಿದ್ದಿ ಪಡೆಯಬಹುದು, ಉಸಿರಾಟಕ್ಕೆ ಹೆಚ್ಚು ಮಹತ್ವ, ಸಣ್ಣ ಪ್ರಾಯದಿಂದ ಯೋಗ ಅಭ್ಯಾಸ ಮಾಡಿದರೆ ಮುಂದಿನ ಭವಿಷ್ಯಕ್ಕೆ ಉತ್ತಮ. ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಬರಹ ಬೆರಳುಗಳಿಗೆ, ಉಸಿರಾಟ, ಜ್ಞಾನಕ್ಕೆ, ಆಟ ವಿವಿಧ ದೇಹದ ಭಾಗಗಳ ಚಟುವಟಿಕೆಗೆ ಯೋಗದಿಂದ ಪ್ರಾಮುಖ್ಯತೆ ಇರುತ್ತದೆ ಎಂದರು.

ಮುಖ್ಯೋಪಾಧ್ಯಾಯರಾದ ಕುಮಾರ ಸ್ವಾಮಿ ಸ್ವಾಗತಿಸಿ, ಎಸ್,ಡಿ,ಎಮ್.ಸಿ ಅಧ್ಯಕ್ಷ ಶೇಖರ ಗೌಡ ಅತಿಥಿಯಾಗಿ ಮಧುಸೂದನ್ ಹೆಗ್ಡೆ ಮಲ್ಲ , ಸಹಾಯಕ ಶಿಕ್ಷಕರಾದ ರಂಗನಾಥ್ , ಪರಮೇಶ್ವರ ನಾಯ್ಕ್ , ಶಿಕ್ಷಕಿಯರಾದ ಲೀಲಾವತಿ , ಚಂದ್ರಿಕಾ, ಸುಹಾಸಿನಿ ಹಾಗೂ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.

Related posts

ತೆಕ್ಕಾರು ದೇವರಗುಡ್ಡೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಶಿಲಾನ್ಯಾಸ

Suddi Udaya

ನಿಟ್ಟಡೆ: ತೋಟದ ಶೆಡ್‌ ನಲ್ಲಿ ತಂದಿರಿಸಿದ್ದ ರೂ.70 ಸಾವಿರ ಮೌಲ್ಯದ ಎರಡು ವಿದ್ಯುತ್ ಚಾಲಿತ ಪಂಪು ಕಳವು

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದಿಂದ ಇತ್ತೀಚೆಗೆ ನಿಧನರಾದ ಗಣೇಶ್ ಕಾಯರ್ತಡ್ಕ ರವರಿಗೆ ನುಡಿನಮನ

Suddi Udaya

ಮಹಿಳೆಯರ ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟ: ಶಿವಾಜಿ ಫ್ರೆಂಡ್ಸ್ ಶಿವನಗರ-ಬಂದಾರು ತಂಡ ದ್ವಿತೀಯ ಪ್ರಶಸ್ತಿ

Suddi Udaya

ಜೂ.7: ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಿವಿಧ ಸಂಘದಿಂದ ಉಚಿತ ಕಿವಿಯ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಕಾರ್ಯಕ್ರಮ ಹಾಗೂ ವಿತರಣೆ

Suddi Udaya

ಬೆಳಾಲು ಗ್ರಾ.ಪಂ ಮಾಜಿ ಸದಸ್ಯ ಅಂಗರಗಂಡ ಯೂಸುಫ್ ನಿಧನ

Suddi Udaya
error: Content is protected !!